ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನಪ್ಪ

ಅಮೀನ್  ಮ ಅತ್ತಾರ

ನನ್ನಪ್ಪ  ಕವಿತೆ
ಬರೆಯಲಿಲ್ಲ
ಆತನ ಬದುಕೆ
ಮಹಾಕಾವ್ಯ

ಮೃಮುರಿದು ದುಡಿವಾಗ
ಬಸಿವ ಬೆವರಹನಿ
ಹಣೆ, ಕಣ್ಣಂಚು
ದಾಟಿ ನೆಲ ಕುದುರುವಾಗ
ಕಂಬೆವರ ಹನಿಯಲಿ
ನರಳು ತಾರಳುವ ನೆಲದ ಕವಿತೆ

ಜಿಂದಗಿಯ ಜಂಜಾಟ
ಅನವರತ ನೋವುಗಳ
ಭರಪೂರ ಉಂಡ
ಅಪ್ಪನದು ಯಾರೂ ಓದದ
ಏಕಾಂಗಿ ಕಾವ್ಯ

ಕಲ್ಲೆಸದವರಿಗೆ ಕಲ್ಲು ಸಕ್ಕರೆ
ಜರಿದವರಿಗೆ ಮುಗುಳು ನಗೆ
ಸದಾ ಶಾಂತಿಪರ
ಮೌನಕಾವ್ಯ

ನಿಟ್ಟುಸಿರ ಕವಿತೆಗಳ
ಗಟ್ಟಿ ಬಿಳಲುಗಳ
ದೊಡ್ಡಾಲದಮರ ನನ್ನಪ್ಪ
ನೆಲಕುರುಳಿ ಮಣ್ಣಾದರೂ
ನನ್ನ ಬಾಳ ಹೊಸ ಹಾದಿಗೆ
ಬೆಳಕ ಕಣ್ಣ ಕವಿತೆ
ನನ್ನಪ್ಪ

‍ಲೇಖಕರು Avadhi

17 April, 2021

2 Comments

  1. T S SHRAVANA KUMARI

    ಮನಮುಟ್ಟಿದ ಕವಿತೆ

  2. ನೂರುಲ್ಲಾ ತ್ಯಾಮಗೊಂಡ್ಲು

    ನನ್ನಪ್ಪ ತುಂಬ ಚೆಂದದ ಕವಿತೆ ಅಮೀನ್ ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading