ಕನ್ನಡ ಭಾಷೆ, ಉಳಿಕೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂದು ದನಿ ಎತ್ತಿದ್ದ ದಿವಂಗತ ಪೂರ್ಣ ಚಂದ್ರ ತೇಜಸ್ವಿ ಅವರ ಕನಸು ಇಂದು ನಿಜವಾಗಿದೆ
ಅನೇಕ ಕನ್ನಡ ತಂತ್ರಾಂಶಗಳು ಸಾರ್ವಜನಿಕರಿಗೆ ಲಭ್ಯವಾಗಿದೆ.
* 12 ಹೊಸ ಫಾಂಟ್ ಗಳು
* ಹೊಸ ಕೀಲಿ ಮಣೆ ಶೈಲಿ
* ಹಲವಾರು ಪರಿವರ್ತನಾ ಸಾಫ್ಟ್ ವೇರ್
* ಮೊಬೈಲ್ ನಿಂದ ಮೊಬೈಲ್ ಗೆ ಕನ್ನಡದಲ್ಲೇ ಸಂದೇಶ ಕಳಿಸಲು ತಂತ್ರಾಂಶ
* ಪರಿವರ್ತನಾ ತಂತ್ರಾಂಶ ಮೂಲಕ ಈ ಹಿಂದಿನ ಕಡತಗಳನ್ನು(ಶ್ರೀಲಿಪಿ, ನುಡಿ, ಬರಹ..ಇತ್ಯಾದಿ ಲಿಪಿ ಬಳಸಿರುವ ಕಡತ)ಯೂನಿಕೋಡ್ ಗೆ ಸುಲಭವಾಗಿ ಪರಿವರ್ತಿಸಬಹುದಾಗಿದೆ. * ಅಂಧ ವಿದ್ಯಾರ್ಥಿಗಳ ನೆರವಿಗಾಗಿ ಬ್ರೈಲ್ ಲಿಪಿ
* ಕನ್ನಡದ್ದೇ ಕೀ ಬೋರ್ಡ್
ಪೂರ್ಣ ಚಂದ್ರ ತೇಜಸ್ವಿ ಅವರ ಆಶಯದಂತೆ ಈ ಹಿಂದೆ ಹಂಪಿ ವಿಶ್ವವಿದ್ಯಾಲಯಕ್ಕೆ ಕುವೆಂಪು ತಂತ್ರಾಂಶ ಹಾಗೂ ಲಿಪಿಗಳನ್ನು ರೂಪಿಸಿಕೊಟ್ಟಿದ್ದ ಹಾಸನದ ಮಾರುತಿ ಸಾಫ್ಟ್ ವೇರ್ ಇನ್ಫಾರ್ಮೇಷನ್ ಸಿಸ್ಟಮ್ ಸಂಸ್ಥೆಯೇ ಈ ಮೇಲ್ಕಂಡ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿದೆ.
12 ಫಾಂಟ್ ಗಳಿಗೆ 8 ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಹಾಗೂ ಡಿವಿ ಗುಂಡಪ್ಪ, ಕೆಎಸ್ ನರಸಿಂಹ ಸ್ವಾಮಿ ಅವರ ಹೆಸರನ್ನಿಡಲಾಗಿದೆ.
How to download this software on to my android phone ?