ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಡೆದಷ್ಟು ದಾರಿ ಸವೆದ ಬೆನ್ನುಹುರಿ..

 

ಸ್ಪೂರ್ತಿ ಗಿರೀಶ್

ಮುರಿದ ಕೊಳಲನು ಮತ್ತೆ ಕೂಡಿಸದ ಕಾಲಕರೆಯುತ್ತಿಹುದು ರಾಗವನು
ಯಾವುದೋ ಪ್ರಳಯದ ಸುಳಿಗೆ

ಹೂವಿಡಿದು
ಫಲವಿಡಿದು
ಮಣ್ಣಿಗೆ ಮರಳುವ ಹಣ್ಣೆಲೆ
ತೊಟ್ಟು ಕಳಚುವ ಮುನ್ನ
ಸಂತೈಸುವುದೇ ಬಳ್ಳಿಯ ಚಿಗುರು ಬೆರಳು

ಹೆಜ್ಜೆ ಕುಣಿತದಲ್ಲಿ ಗೆಜ್ಜೆ
ಚೆಲ್ಲಿಹೋಗುವುದ ಗುರುತಿಸಲೊಲ್ಲದೇ
ಉಸಿರುಗಟ್ಟಿ ಸೆಟೆದುಕೊಂಡ

ಧಾವಂತದ ಬದುಕು

ನಡೆದಷ್ಟು ದಾರಿ
ಸವೆದ ಬೆನ್ನುಹುರಿ
ದೇಹಕ್ಕಂಟಿದ  ಈ ಜೀವದ ಪರಿ

ಹೋಗುವುದಾದರು ಹೇಗೆ

ಲೋಕದ ಎಲ್ಲಾ ಸೆಳೆತ ಮೀರಿ

‍ಲೇಖಕರು Avadhi GK

16 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading