ದ್ವೇಷದಿಂದ ಅಂತರ ಬಯಸಿ !

ಮನು ಗುರುಸ್ವಾಮಿ

ಸದಾ ನಡೆಯುತ್ತಿರುತ್ತೇನೆ
ದ್ವೇಷದಿಂದ ಅಂತರ ಬಯಸಿ
ಇಚ್ಛೆಗಳ ಸಮಯಕೆ ಮಾರಿ
ಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು !

ಕೆಚ್ಚಿನ ನುಡಿಗಲ್ಲ; ಹಕ್ಕಿಗಳ
ಹಾಡಿಗೆ ಮನ ಸೋಲುತ್ತೇನೆ;
ಹೂಗಳನ್ನು ಮುದ್ದಿಸುತ್ತೇನೆ
ತಂಗಾಳಿಯ ಅಪ್ಪುತ್ತೇನೆ !

ಹರಿಯುವ ನದಿಗಳ ಮೇಲೆ,
ಆವರಿಸಿದ ಮಲೆಗಳ ಮೇಲೆ
ಸುರಿಯುವ ಮಳೆಗಳ ಮೇಲೆ
ಪದ್ಯ ಕಟ್ಟಿ ಹಾಡುತ್ತೇನೆ !

ಹೃದಯ ಬಿಚ್ಚಿ ಮಾತನಾಡಿದರೆ
ಕಿವಿಗೊಟ್ಟು ಕೇಳುತ್ತೇನೆ;
ಹೊಟ್ಟೆಕಿಚ್ಚಿನ ಮಾತುಗಳಿಗೆ
ಕರವೆತ್ತಿ ಮುಗಿದು; ಬಿಳ್ಕೊಡುತ್ತೇನೆ !

ಕೈ ಕೈ ಮೀಲಾಯಿಸಬಹುದು
ನಾನೂ ನೀನೂ,
ಇಬ್ಬರಲ್ಲಿ ಯಾರೇ ಗೆದ್ದರೂ,
ಖುಷಿ ಸಂಚಾರಿ ಭಾವ;
ಈ ಸತ್ಯವ ಅರಿತ್ತಿದ್ದೇನೆ !

ಮನಸ್ತಾಪವಿಲ್ಲದ ಬದುಕಿಲ್ಲ;
ಇಲ್ಲಿ, ಕಲಹವಿಲ್ಲದ ಒಲವಿಲ್ಲ
ಅದಾಗ್ಯೂ,
ಗದ್ದಲವೇ ಇರದ ದಿಕ್ಕಿನತ್ತ
ನನ್ನ ಚಿತ್ತ,
ಸಾಗುತ್ತಿದ್ದೇನೆ; ಕೋಪ,
ತಾಪಗಳಿಂದ ಅಂತರ ಬಯಸಿ

‍ಲೇಖಕರು Admin

August 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: