ಶಿವಕುಮಾರ್ ಮಾವಲಿ
ದೇವರ ಜಾಗದ ಬಗ್ಗೆ
ಮನುಷ್ಯರು ದಾವೆ ಹೂಡಬೇಕು
ದೇವರ ಜಾಗದ ಬಗ್ಗೆ
ಮನುಷ್ಯರು ವಾದ- ವಿವಾದ ಮಾಡಬೇಕು
ದೇವರ ಜಾಗದ ಬಗ್ಗೆ
ಮನುಷ್ಯರೇ ಷರಾ ಬರೆಯಬೇಕು
ದಾವೆ , ವಾದ, ವಿವಾದಗಳು ದೇವರಿಗೆ ಅಪತ್ಯ
ಇವೆಲ್ಲ ಮನುಷ್ಯನೇ ಮಾಡಬೇಕಿರುವುದು ಸತ್ಯ
ಇದರಿಂದಾಗಿ ದೇವರು ದೇವರಾಗಿ ಉಳಿಯುತ್ತಾನೆ
ಮನುಷ್ಯ ದೇವರ ಮೊರೆ ಹೋಗುತ್ತಾನೆ
ದೇವರು ನಮ್ಮ ಮೇಲೆ , ನಾವು ಅವನ ಮೇಲೆ
ಇಬ್ಬರೂ ಪರಾವಲಂಬಿಗಳೇ
ಹಾಗಾಗಿ…
ಮನುಷ್ಯ ದೇವರನ್ನು ಕಾಪಾಡಿಕೊಳ್ಳಬೇಕು
ದೇವರು ಮನುಷ್ಯನನ್ನು ಕಾಪಾಡಿಕೊಳ್ಳಬೇಕು






ಚೆನ್ನಾಗಿದೆ
ಮನುಷ್ಯ ದೇವರನ್ನು ಕಾಪಾಡಿಕೊಳ್ಳಬೇಕು.. ಎಂತಹ ಮಾರ್ಮಿಕ ಮಾತು..
ಚೆಂದ..
ವಾಹ್…!