ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಡದಿ ಮೂಡಿರುವ ಹೆಜ್ಜೆಗಳಿಗೆ ವಿಳಾಸವಿಲ್ಲ…

‘ನಿರೀಕ್ಷೆ’

– ರಮೇಶ್ ನೆಲ್ಲಿಸರ


ಎಷ್ಟೊಂದು ಬದಲಾಗಿದೆ ಈ ನದಿ
ಅಳಿದುಳಿದ ನೀರು ಬತ್ತಿ
ಸವಕಲಾಗಿ,
ಎಲ್ಲೆಲ್ಲೂ ಮರಳಿನ ರಾಶಿ.
ದಡದಿ
ಮೂಡಿರುವ ಹೆಜ್ಜೆಗಳಿಗೆ
ವಿಳಾಸವಿಲ್ಲ.
 
ಹೆಗಲೇರಿದ ನೆನಪುಗಳ
ಭಾರ ,ಸರದಿಯಂತೆ
ಎಲೆಯುದುರಿಸಿವೆ, ದಡದ ಮರಗಳು
 
ಹರಡಿರುವ ಆಗಸ,
ಎಂದಿನಿಂದಲೋ ಜೊತೆಗಿರುವ
ಸ್ನೇಹಿತ,
ನದಿಗೆ ವಯಾಸ್ಸಾಗಿದೆ
ನೀರಿಗೆ ಮುಗಿಯದ ಯೌವನ
 
ನೂರು ನದಿಗಳ ತಿಂದ
ಉಪ್ಪು ಸಾಗರ
ಇನ್ನೇನು ಸಮೀಪಿಸುತಿದ್ದರೂ
ನದಿಯೊಳಗೆ ನೀರಿಲ್ಲ!
ಸಮುದ್ರದ ನೀರು
ನದಿಯತ್ತ ತಿರುಗಿದೆ
 
ಬರುವ ಮಳೆಗೆ
ನದಿ ಮೊದಲಿನಂತಾಗಬಹುದು!
ಮಡುಗಟ್ಟಿರುವ ರಕ್ತನಾಳಗಳೂ
ಅರಳಿ,ಉಸಿರು ಹರಿಯಬಹುದು
ನನಗೂ ನದಿಯಂತಹದೇ
ಸಣ್ಣ ನಿರೀಕ್ಷೆ….
 

‍ಲೇಖಕರು G

14 March, 2015

5 Comments

  1. bidaloti ranganath

    Artha purna kavana dahabarithavaagi

  2. mmshaik

    uttama kavana…

  3. mallikarjun talwar

    olleya kavana. nimagaste alla e jagattu nintirode nireksheyalli. tumba hidisitu

  4. Mohan V Kollegal

    ಒಳ್ಳೆಯ ಪ್ರತಿಮೆಯ ಕವಿತೆ

  5. Subrahmanya S N

    nimma nirIkshe nijavagali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading