ತೇಜಸ್ವಿಯನ್ನು ನೆನಪಿಸಿಕೊಳ್ಳುವ ಉತ್ತಮ ಕೆಲಸವನ್ನು ಹಮ್ಮಿಕೊಂಡವರಿಗೆ ಅಭಿನಂದನೆಗಳು. ಇಂದು ನಮ್ಮೆದುರು ‘ತೇಜಸ್ವಿ’ ಎಂಬ ಬಿಂಬ ಮಾತ್ರ ಇದೆ. ಆ ಬಿಂಬದಲ್ಲಿ ಸೂಕ್ಷ್ಮಗ್ರಹಿಕೆಯ ಸಾಹಿತಿ ಇದ್ದಾನೆ, ಸಾಮಾಜಿಕ ಚಿಂತಕನಿದ್ದಾನೆ, ಉತ್ತಮ ಛಾಯಾಗ್ರಾಹಕನಿದ್ದಾನೆ, ಚಿತ್ರಕಾರನಿದ್ದಾನೆ, ಚರಿತ್ರಕಾರನಿದ್ದಾನೆ, ಆಧುನಿಕ ತಂತ್ರಜ್ಞಾನಕ್ಕೆ ಸ್ಪಂದಿಸಬಲ್ಲ ಪ್ರಕಾಶಕನಿದ್ದಾನೆ, ರೈತನಿದ್ದಾನೆ, ಅಲೆಮಾರಿಯಿದ್ದಾನೆ; ಎಲ್ಲಕ್ಕಿಂತ ಹೆಚ್ಚಾಗಿ ಜೀವಲೋಕದ ತುಡಿತಗಳನ್ನು ಅರಿತಿದ್ದ ಪರಿಸರ ಪ್ರೇಮಿ ಇದ್ದಾನೆ.
ಕನ್ನಡಕ್ಕೆ ಅಪರೂಪಕ್ಕೆಂಬಂತೆ ದಕ್ಕಿದ್ದ ಈ ಬಹುಮುಖ ಆಸಕ್ತಿಯ ಎಲ್ಲ ಮುಖಗಳನ್ನೂ ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ. ಇಂದಿನ ಎಳೆಯರಿಗೆ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬಲ್ಲ ಇಂಥ ಅಪರೂಪದ ಬಿಂಬವೊಂದು ಕಾಲದ ಹರಿವಿನಲ್ಲಿ ಮಾಸಿ ಹೋಗಲು ಬಿಡಬಾರದು.
ನಾಗೇಶ್ ಹೆಗಡೆ
-ಶನಿವಾರ ಬಾದಾಮಿ ಹೌಸ್ ನಲ್ಲಿ ಜರುಗಲಿರುವ ‘ಮೂಡಿಗೆರೆ ಮಾಯಾವಿ’
ಕಾರ್ಯಕ್ರಮಕ್ಕೆ ಬರುತ್ತೇನೆ ಎಂಬ ಭರವಸೆ ನೀಡುತ್ತಾ-
ನೀವು ಬರಲೇಬೇಕು..
0 ಪ್ರತಿಕ್ರಿಯೆಗಳು