ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಂಗಾಳಿ ಹೊತ್ತು ತರುವ ಪರಿಮಳಕ್ಕೆ ನನ್ನ ಹಗಲು ರಾತ್ರಿಗಳು ಜೀತಕುಂಟು..

ಭೂಮಿಗಂಟಿದ ಧ್ಯಾನ ..

ಎಂ ಎಂ ಶೇಖ್ ಯಾದಗಿರಿ


ನಿರೀಕ್ಷೆಗಂಟಿಕೊಂಡು ಕೊರಗುವ ತಲ್ಲಣಗಳಿಗೆ
ಅಲೆಗಳ ತರೆಹವಾರಿ ಒಡನಾಟಗಳು ಒರೆಗೆ
ಹಚ್ಚುತ್ತವೆ. ಖಾಲಿ ಬದುಕ ಪಾರಿವಾಳಗಳು
ಸಿಕ್ಕಿದ್ದನ್ನು ಕುಟುಕುತ್ತವೆ ಸುತ್ತಲೂ ನಿಗಾ ಇಟ್ಟು .
 
ಕಾಂಕ್ರಿಟ್ ಯೋಚನೆಗಳು ಬೇಡ ಸಖಿ ತೀರ್ಮಾನಕ್ಕೆ
ನನ್ನೆದೆಯ ದನಿ ಕೇಳು ನಿನ್ನೆದೆಯ ತೆರೆದಿಟ್ಟು
ತಂಗಾಳಿ ಹೊತ್ತು ತರುವ ಪರಿಮಳಕ್ಕೆ
ನನ್ನ ಹಗಲು ರಾತ್ರಿಗಳು ಜೀತಕುಂಟು .
 
ಈ ನೆಲಕ್ಕೆ ನಾ ಬದ್ದವಾಗಿರಬೇಕು ಇಲ್ಲಿರುವುದು
ನನ್ನ ಮನೆ ಅದರ ಮುಂದಿರುವ ಗಿಡಕ್ಕೆ
ಈ ಮನೆಗೇ ನೆರಳು ಗಾಳಿ ಒದಗಿಸುವ ತವಕವಿಲ್ಲ..
ನಿಜ ನನ್ನ ಆಯಸ್ಸು ಪ್ರಾರ್ಥನೆಗೆ ಕಾದಂತೆ .
 
ಆತ್ಮದ ಪಿಸುಮಾತುಗಳು ಗಿಡದ ಬೇರುಗಳು
ಉಸಿರಾಡುತ್ತವೆ ನನ್ನ ಆಸ್ತಿತ್ವಕ್ಕೆ ಸಾಧ್ಯತೆಗಳು .
 

‍ಲೇಖಕರು G

13 January, 2014

4 Comments

  1. ಲಕ್ಷ್ಮೀಕಾಂತ ಇಟ್ನಾಳ

    ಸುಂದರ ಆಲಾಪದ ಕವನ…ಸ್ವಗತವೇ?

  2. h a patil

    – ಗಹನ ಅರ್ಥ ಹೊಮ್ಮಿಸುವ ಸತ್ವಪೂರ್ಣ ರಚನೆ.

  3. smitha Amrithraj

    chennagide kavite-smitha.

  4. Anil Talikoti

    ಸುಂದರ ಸಾಲುಗಳಿವು ‘…ಈ ಮನೆಗೇ ನೆರಳು ಗಾಳಿ ಒದಗಿಸುವ ತವಕವಿಲ್ಲ’ – ಇಷ್ಟವಾಯಿತು
    -ಅನಿಲ ತಾಳಿಕೋಟಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading