‘ಅಭಿಯಾನ’ ನನಗೆ ಇಷ್ಟವಾಯಿತು. ಇಂಥ ಉತ್ತಮ ನಾಟಕ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.
-ಡಾ ಚಂದ್ರಶೇಖರ ಕಂಬಾರ
‘ರೂಪಾಂತರ’ ಓದಿದ ಮೇಲೆ ಮಾವಿನಕುಳಿ ಒಳ್ಳೆಯ ನಾಟಕಕಾರ ಎನ್ನುವುದನ್ನು ಯಾವ ಮನಸ್ಸಿನ ಕಷ್ಟವಿಲ್ಲದೆ ನಾನು ಹೇಳಿ ಅವರನ್ನುಅಭಿನಂದಿಸುತ್ತೇನೆ.
-ಡಾ ಯು ಆರ್ ಅನಂತಮೂರ್ತಿ
‘ಅಕಬರ’ ನಾಟಕದ ಹರಿತ ಸಂಭಾಷಣೆ, ಪ್ರಗತಿಪರ ಚಿಂತನೆ, ವರ್ತಮಾನದ ಆಶಯಗಳು ಇದನ್ನೊಂದು ಪ್ರಬುದ್ಧ ಕೃತಿಯಾಗಿಸಿದೆ. ‘ಮಹಾಯಾತ್ರೆ’ ಕನ್ನಡ ನಾಟಕ ಸಾಹಿತ್ಯಕ್ಕೆ ಒಂದು ಒಳ್ಳೆಯ ಸೇರ್ಪಡೆ.
ಪ್ರೊ ಲಿಂಗದೇವರು ಹಳೆಮನೆ
ಏಳು ನಾಟಕಗಳ ಈ ಸಂಪುಟ ಏಳು ಭಿನ್ನ ಲೋಕಗಳಾಗಿವೆ.
-ಡಾ. ರಾಜಪ್ಪ ದಳವಾಯಿ
‘ಅಭಿಯಾನ’ವನ್ನು ಹವ್ಯಾಸಿ ಮತ್ತು ಕಾಲೇಜು ರಂಗಭೂಮಿ ಉತ್ಸಾಹದಿಂದ ಬರಮಾಡಿಕೊಳ್ಳುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
-ಪ್ರೊ ಹೆಚ್. ಎಸ್. ಉಮೇಶ್
‘ರೂಪಾಂತರ’ ಕನ್ನಡದ ಶ್ರೇಷ್ಠ ನಾಟಕಗಳ ಸಾಲಿನಲ್ಲಿ ಸೇರುತ್ತದೆ.
-ಉದ್ಯಾವರ ನಾಗೇಶ್ ಕುಮಾರ್



0 Comments