ಅಮೆರಿಕಾದಲ್ಲಿರುವ ಶ್ರೀವತ್ಸ ಜೋಷಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ತಮ್ಮ ಎರಡು ಪುಸ್ತಕಗಳ ಬಿಡುಗಡೆಗಾಗಿ. ‘ವಿಜಯ ಕರ್ನಾಟಕ’ದಲ್ಲಿ ಪ್ರತೀ ಭಾನುವಾರ ಬರೆದ ಅಂಕಣ ‘ಪರಾಗ ಸ್ಪರ್ಶ’ ದ ಫಲ ಈ ಎರಡು ಪುಸ್ತಕಗಳು. ಶ್ರೀವತ್ಸ ಜೋಷಿ ಅವರ ಅಂಕಣ ಜಗತ್ತಿನ ಎಲ್ಲವನ್ನೂ ಒಳಗೊಂಡಿದೆ. ಅವರ ಬರಹದ ರುಚಿ ಗೊತ್ತಾಗಬೇಕಾದರೆ ಈ ಎರಡೂ ಪುಸ್ತಕ ಓದಲೇಬೇಕು.
ಅದು ಹೇಗಾದರೂ ಇರಲಿ ನಾಳೆ (ಶನಿವಾರ) ಬೆಳಗ್ಗೆ ಪುಸ್ತಕಗಳ ಬಿಡುಗಡೆ. ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ. ಬೆಳಗ್ಗೆ ೧೦-೩೦ಕ್ಕೆ. ಅಂಕಿತದ ಕಂಬತ್ತಳ್ಳಿ ದಂಪತಿಗಳು ನೀವು ಅಲ್ಲಿರಲೇಬೇಕು ಎಂದು ವಿಪ್ ಜಾರಿ ಮಾಡಿದ್ದಾರೆ. ಎಂದಿನನತೆ ಅಪಾರ ಅವರ ವಾಹ್! ಎನ್ನುವ ಮುಖಪುಟಗಳು ಪುಸ್ತಕಕ್ಕಿದೆ.


ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments