ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಕವಿತೆ: ಕಾಡಿ ಬರೆಸಿದ ಅವಳಿಗೆ

XXL_JaiZharotia-L-559207583

ಸೀತಾಮಾತೆ

ಲಕ್ಷ್ಮಣರೇಖೆ

ದಾಟಿದರೆ

ಖಾತ್ರಿ ಅಶೋಕವನ

ಲಂಕಾದಹನ ಸೇತುಬಂಧನ.

ರಾವಣನೇ

ದಾಟಿದ್ದರೆ ಏನಾಗುತ್ತಿತ್ತೇ ಗೆಳತಿ.

ಹಾ.. ಲಕ್ಷ್ಮಣ ಎಂಬ ಉದ್ಗಾರ ಶೂನ್ಯ.

ಪ್ರೇಮದ ಉತ್ಕಟತೆಯಲ್ಲಿ ರಾವಣ

ದಾಟಿದ ಕಾಲಲ್ಲೇ ಉರಿದುರಿದು

ಸುಗ್ರೀವನಿಗೆ ಸಿಗುತ್ತಿರಲಿಲ್ಲ ತಾರೆ.

ಕುಂಭಕರ್ಣನಿಗೆ ನಿದ್ದೆ ನಿರ್ವಿಘ್ನ.

ಅರಗಿನ ಮನೆಯಿಂದ

ಹೊರಬಿದ್ದರೆ ಹಿಡಿಂಬವನ

ಏಕಚಕ್ರನಗರಿ ಬಕಾಸುರ ವಧೆ.

ನಡುವೆ ಹಿಡಿಂಬೆಯ ಜೊತೆ ಸರಸ.

ಕೊನೆಯಲ್ಲಿ ಸಿಕ್ಕವಳು ಪಾಂಚಾಲಿ.

ಕರ್ಣನ ಕರ್ಣಕಠೋರ ನಿರ್ಧಾರದಲ್ಲಿ

ಪಾಂಚಾಲಿಗೆ ಐವರೇ ಗತಿ.

ದ್ರೌಪದಿಯ ಸಂಗವಾದರೂ ಬಲಭೀಮ

ಸಿಕ್ಕಾಪಟ್ಟೆ ಸಂತ.

ರಸಿಕ ಅರ್ಜುನನಿಗೆ ಸದಾ ನವವಸಂತ.

ಸಾವು ಅವಳ ಸಂಗದಲ್ಲಿದೆ ಎಂದು

ಗೊತ್ತಿದ್ದೂ

ಪಾಂಡು ನಿರುದ್ವಿಗ್ನ.

ಸಂಗಮದಲ್ಲಿ ಮಹಾಸಂಗಮ.

ಗಂಡನ ಚಿತೆಯೆದುರು ತಾಯಹಂಬಲದ

ಮಾದ್ರಿ.

ಮತ್ತದೇ ಶ್ಲೋಕ: ಮಾ ನಿಷಾಧ.

ಬೇಡ.. ಬೇಡ..

ಮಿಲನಕ್ಕೆ ಹಾರೈಸುವ ಮೈಮನಗಳಿಗೆ

ಸಣ್ಣದೊಂದು ಎಚ್ಚರಿಕೆ.

ಮಾಡು ಇಲ್ಲವೆ ಮಡಿ.

ಮಾಡಿ ಮಡಿವವರ ನುಡಿ.

ಮಾಡೂ ಸಿಗದೇ ಗೂಡೂ ಸಿಗದೆ

ಸಂತರ ಸಂತತಿಗೆ

ನಿರಾತಂಕ

ಗುಡಿ.

ನಾನು ನೀನೆಂಬುದು

ಬೇರಲ್ಲ ಕಾಣಿರೋ.

ತಾಯಿ

ಬೇರು.

‍ಲೇಖಕರು avadhi

18 July, 2009

1 Comment

  1. Santhosh Ananthapura

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್…..” ಇಂತಹ ಒಳನೋಟಗಳ ಜೊತೆಗಿನ ಆಟ ಜೋಗಿಯದ್ದೇ ದಿಟ ” ನಿಜಕ್ಕೂ ಕಾಡಿ ಬರೆಸಿದಂತಿದೆ…….! ಇಷ್ಟವಾಯಿತು……
    – ಸಂತೋಷ್ ಅನಂತಪುರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading