ನಾಡಿನ ನೆಲಜಲಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡ ಜೆ ಎಂ ವೀರಸಂಗಯ್ಯ ಅವರು ಬಳ್ಳಾರಿ ಜೆಲ್ಲೆಯನ್ನೊಳಗೊಂಡು ಇಡೀ ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ರೈತ ಪರವಾದ ಹೋರಾಟಗಳನ್ನು ಕಟ್ಟಿ ಮುನ್ನೆಡೆಸಿದವರು.
ನಾಡಿನಲ್ಲಿ ನಡೆವ ಇತರ ಅನೇಕ ಪ್ರಗತಿಪರ ಹೋರಾಟದಲ್ಲಿ ಧುಮುಕಿದರೂ ಅವರ ಕೇಂದ್ರ ಕಾಳಜಿ ಮಾತ್ರ ಕೃಷಿಸಂಬಂಧಿತ ವಿಷಯಗಳೇ ಆಗಿದ್ದವು. ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ರೈತರ ಜೀವನಾಡಿಯಾಗಿ ಕೆಲಸ ಮಾಡಿ ಬಡ ರೈತರ ಕಣ್ಮಣಿಯಾದವರು.
ಕಾರ್ಯಕರ್ತನಾಗಿ ರೈತ ಸಂಘ ಸೇರಿ ರೈತರಿಗಾಗಿ ಕೆಲಸ ಮಾಡುತ್ತ ಬಂದ ಅವರು ಈಗ ರೈತ ಸಂಘದ ರಾಜ್ಯದ ಕಾರ್ಯಾಧ್ಯಕ್ಷರಾಗಿ ಈಗ ಕಾರ್ಯ ಮಾಡುತ್ತಿದ್ದಾರೆ.
2003ರಲ್ಲಿ ಸಮಾನ ವಿದ್ಯುತ್ ನೀತಿಗಾಗಿ ಹೋರಾಟ ನಡೆಸುತ್ತಿರುವಾಗ ಪೊಲೀಸ್ ಲಾಠಿ ಏಟಿನಿಂದ ಮೂತ್ರ ಪಿಂಡ (ಕಿಡ್ನಿ) ವೈಫಲ್ಯವಾಗಿ ಆರು ವರ್ಷಗಳ ಕಾಲ ಡಯಾಲಿಸಿಸ್ಗೆ ಒಳಪಟ್ಟಿದ್ದರು. ಆರ್ಥಿಕವಾಗಿ ಮತ್ತು ದೈಹಿಕವಾಗಿ ತುಂಬಾ ಕಷ್ಟದ ದಿನಗಳನ್ನು ಎದುರಿಸಿದರೂ ರೈತ ಹೋರಾಟಗಳನ್ನು ಕೈಬಿಡಲಿಲ್ಲ.
ಅವರ ರೈತಪರ ಹೋರಾಟ ಮತ್ತು ಕಾಳಜಿ ಅನನ್ಯವಾದುದು. ಅವರ ಈ ಅಪಾರ ಶ್ರದ್ಧೆಯನ್ನು ಗಮನಿಸಿಕೊಂಡು ಅವರನ್ನು 2023ರ ಸಾಲಿನ ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿಗೆ ಆಯ್ದುಕೊಅಂಡಿದ್ದೇವೆ.
ಈ ಪ್ರಶಸ್ತಿಯನ್ನು ನ್ಯಾಯವಾದಿಗಳಾದ ಬಸವರಾಜ ಸಂಶಿ ಅವರ ತಂದೆಯ ನೆನಪಿನಲ್ಲಿ ಪ್ರಾಯೋಜಿಸಿದ್ದಾರೆ. ಪ್ರಶಸ್ತಿಯು ರೂ ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಮೇ 27 ಮತ್ತು 28 ರಂದು ವಿಜಯಪುರದಲ್ಲಿ ಮೇ ಸಾಹಿತ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
0 ಪ್ರತಿಕ್ರಿಯೆಗಳು