ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿತೇಂದ್ರ ಬೇದೂರು ಹೊಸ ಕವಿತೆ – ರಂಗಸ್ಥಳದಲ್ಲಿ

ಜಿತೇಂದ್ರ ಬೇದೂರು

—–
ಪರದೆ ಸರಿಯುವ ಮೊದಲೇ
ತೊಳೆದು ಹೋಗಿದೆ ಬಣ್ಣ,
ಆಟ ಮುಗಿಯುವ ಮೊದಲು
ತೆರೆಯಬಹುದೇ ಕಣ್ಣ?

ತೊಗಲು ಗೊಂಬೆಯ ಸೂತ್ರದ ತುದಿಯ ಹಿಡಿದವರಾರು?
ಯಾರು ಬರೆದಿಹ ಕತೆಯೋ, ಎಷ್ಟು ಗೋಜಲು,
ಪಾತ್ರಗಳು ಬದಲಾಗಿ, ಅಂಕಗಳು ಕಳೆದವು,
ಅರ್ಥವಾದುದು ಎಷ್ಟು?,ಯಾವ ಮಜಲು?!

ಅವನ ವೇಷದ ಮೋಹ, ಇವನಿಗೆ
ಇವನ ಪಾತ್ರದ ಬಯಕೆ, ಅವನ ಮನದೊಳಗೆ
ಅವರಿವರ ಪಾತ್ರಗಳ ತಾ ತೊಡುವ ಭರದಲ್ಲಿ,
ತನ್ನ ಪಾತ್ರದ ಪರಿವೆ ಎಲ್ಲಿ??

ನಡೆಯುತಿದೆ ನಾಟಕವು ಯಾರ ರಂಜನೆಗೋ?
ಯಾವ ಮನ ತಣಿಸಲು ಈ ರಂಗಸಜ್ಜಿಕೆಯೋ?
ಬಗೆ ಬಗೆಯ ಭಾವ, ಥರಥರದ ವೇಷ,
ಹುಸಿ ಎಷ್ಟು, ನಿಜವೆಷ್ಟು  ಈ ರಂಗಸ್ಥಳದೊಳು?

‍ಲೇಖಕರು avadhi

7 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading