ಕೆಲವು ರಿಯಾಲಿಟಿ ಶೋಗಳು ಎಷ್ಟು ತಲೆಕೆಡುವ ಹಾಗೆ ಇರುತ್ತೆ ಅನ್ನುವುದಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಹಳ್ಳಿ…ಪಟ್ನಕ್ಕೆ ಬಂದ ರಿಯಾಲಿಟಿ ಶೋನೆ ಸಾಕ್ಷಿ. ವೀಕ್ಷಿಸ್ತಾ ಇದ್ರೆ ಒಂದು ಕಡೆ ಗಾಬರಿ, ಮತ್ತೊಂದು ಕಡೆ ಅಸಹ್ಯ ಎರಡು ಆಗುತ್ತೆ. ಗಾಬರಿ ಆಗುವುದು ಆ ಮುಗ್ಧರ ಬದುಕಲ್ಲಿ ಇನ್ನು ಬರೀ ಬಿರುಗಾಳಿ. ಯಾಕೆಂದ್ರೆ ನಗರದಲ್ಲಿಯೇ ಹುಟ್ಟಿ ಅದ್ರ ಕೆಟ್ಟತನವನ್ನು ಅರಗಿಸಿಕೊಂಡು ಬೆಳೆದವರಿಗೆ ಇಲ್ಲಿನ ಕ್ರೌರ್ಯದ ಹೊಡೆತ ಎದುರಿಸೋಕೆ ಆಗಲ್ಲ.
ಬಣ್ಣದ ಚಿಟ್ಟೆಗಳ ಪಾಶಕ್ಕೆ ಸಿಕ್ಕಿಹಾಕಿಕೊಂಡರೆ? ಆ ನೆನಪು ಭಯ ಹುಟ್ಟಿಸುತ್ತೆ. ನೀನು ಅಲ್ಗೆ ಓಗಿ ಅಂಗೆ ಮಾಡಿ ಬಂದ್ರೆ ನಿನ್ನನ್ನು ಮದ್ವೆ ಆಗ್ತೀನಿ ಅಂತಾರೆ ಅಮ್ಮಣ್ಣಿಗಳು
ಅದನ್ನೇ ಪಾಪ ಆ ಹಳ್ಳಿ ಹೈದರು ನಂಬಿ ಕೂತರೆ ಯಪ್ಪಾ ನೆನಪಿಸಿ ಕೊಳ್ಳೋಕೂ ಆಗಲ್ಲ
. ನಿನಗೇನೂ ಹೊಟ್ಟೆ ಉರಿ ಎಂದು ನೀವು ಕೇಳಬಹುದು ಆದರೆ ಇದು ಹೊಟ್ಟೆ ಕಿಚ್ಚಲ್ಲ , ನಗರದಲ್ಲಿ ಬೇರುಬಿಟ್ಟಿರುವ ಕುಟಿಲತೆ ಆ ಮುಗ್ಧರ ಬದುಕಿಗೆ ಮಾರಕ ಆಗಬಾರದು ಎನ್ನುವ ಕಳಕಳಿ ಅಷ್ಟೆ.ಟೀಆರ್ಪಿ ಗಾಗಿ ಜನರ ಬದುಕಿನ ಜೊತೆ ಆತ ಆಡುವುದು ಎಷ್ಟು ಸರಿ ಅನ್ನುವುದೇ ಈಗ ಉಳಿದಿರುವ ಪ್ರಶ್ನೆ
ಪೂರ್ಣ ಓದಿಗೆ ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments