ಕಳೆದ ಎರಡು ದಿನಗಳಿಂದ ಕಸ್ತೂರಿ ವಾಹಿನಿಯ ಮಾಂಗಲ್ಯಂ ತಂತು ನಾನೆನಾಂ…!ಕಾರ್ಯಕ್ರಮವನ್ನು ವೀಕ್ಷಿಸ್ತಾ ಇದ್ದೆ. ಅದ್ಭುತ ಕಣ್ರೀ. ಮುಖ್ಯವಾಗಿ ನನ್ನ ಅತಿ ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರ್ತಿ ಚಿತ್ರ ಶೆಣೈ ಅವರ ವರ್ತನೆ. ತುಂಬಾ ಇಷ್ಟ ಆಯ್ತು ನನಗೆ ಅವರ ಮಾತಿನ ಶೈಲಿ.ಮುಖ್ಯವಾಗಿ ಈ ಕಾರ್ಯಕ್ರಮ ಹೆಚ್ಚು ಆಸಕ್ತಿಯಿಂದ ಕೂಡಿರುವುದಕ್ಕೆ ಕಾರಣ ಮದುವೆಯ ಸ್ವಯಂವರವಲ್ಲ ಇದು.
ಈಗಾಗಲೇ ಎರಡು ಮನಗಳು ಒಪ್ಪಿ, ಮನೆಯವರು ಸಮ್ಮತಿಸಿ, ಹುಡುಗ-ಹುಡುಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು , ಎರಡು ಕುಟುಂಬವೂ ಅವರ ಬದುಕಿನ ಭಾಗ ಇನ್ನು ಮುಂದೆ ಎನ್ನುವ ಸತ್ಯವನ್ನು ಅರಿತು ಕೊಂಡು ಒಂದು ಹಂತಕ್ಕೆ ತಲುಪಿರುವ ಸ್ಥಿತಿ. ಸ್ವಯಂವರದಲ್ಲಿ ಅದ್ಬುತ ಅನ್ನಿಸುವ ಅಂಶಗಳು, ಅತಿರೇಕಗಳು , ಅಬ್ಬರ ,ಗಲಾಟೆ ಎಲಿಮಿನಶನ್ ಆಗುವ ಆತಂಕಗಳು ಇಲ್ಲಿ ಇಲ್ಲ. ಒಟ್ಟಾರೆ ಇದೊಂದು ಆರೋಗ್ಯಪೂರ್ಣ ಕಾರ್ಯಕ್ರಮ ![]()
ಪೂರ್ಣ ಓದಿಗೆ : ಮೀಡಿಯಾ ಮೈಂಡ್



0 Comments