@@ ಸುವರ್ಣವಾಹಿನಿಯಲ್ಲಿ ಗುರು ರಾಘವೇಂದ್ರ ವೈಭವ ತುಂಬಾ ಅದ್ಭುತವಾದ ಧಾರವಾಹಿ. ರಾಯರು ಎಲ್ಲರ ಮೆಚ್ಚಿನ ಗುರುಗಳು.ಹಳೆಯ ಚರಿತ್ರೆಯ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಆದರೆ ಈ ಧಾರವಾಹಿ ಆರಂಭಿಕ ಹಂತದಿಂದಲೂ ತನ್ನ ಆಸಕ್ತಿಯನ್ನು ಉಳಿಸಿ ಕೊಂಡು ಬಂದಿದೆ.
ಹೀಗೆ ಒಬ್ಬರು ವೀಕ್ಷಕರು ಹೇಳ್ತಾ ಇದ್ರು, ಪ್ರತಿದಿನ ರಾತ್ರಿ ಕೊಲೆ ಸುಲಿಗೆ ನೋಡಿ ಮಲಗ ಬೇಕಾಗ್ತಾ ,ಆದರೆ ಈಗ ಅಂತಹ ಕಿರಿಕಿರಿ ಇಲ್ಲ. ನಿಜ ಅಂತಹ ಒಂದು ವಾತಾವರಣ ಈಗಿದೆ. ನಮ್ಮ ವಾಹಿನಿಗಳು ಈಗಾಗಲೇ ಅನೇಕ ಸೀರಿಯಲ್ಗಳನ್ನು ಪ್ರಸಾರ ಮಾಡಿದೆ, ಆದರೆ ಈ ಧಾರವಾಹಿ ತುಂಬಾ ಭಿನ್ನವಾಗಿದೆ.
ಇದೆ ರೀತಿಯ ಖುಷಿ ಹಂಚಿತ್ತು ಸ್ಟಾರ್ ಪ್ಲಸ್. ಶಿರಡಿ ಸಾಯಿ ಬಾಬ ಧಾರವಾಹಿ ಅತ್ಯಂತ ಖುಷಿ ಕೊಟ್ಟಿತ್ತು, ಅದರ ಜನಪ್ರಿಯತೆ ಹೇಗಿತ್ತು ಅಂದ್ರೆ ಆ ವಿಷಯವನ್ನು ತೆಗೆದುಕೊಂಡು ತೆಲುಗು,ಇತರ ಭಾಷೆಗಳಲ್ಲಿ ಸ್ಥಳೀಯ ಕಲಾವಿದರ ಬಳಸಿ ಸೀರಿಯಲ್ ತೆಗೆದರು. ಆದರೆ ಈ ಟೀಮ್ ನಷ್ಟು ಜನಪ್ರಿಯರಾಗಲಿಲ್ಲ ಬಿಡಿ !
ಪೂರ್ಣ ಓದಿಗೆ ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments