@@ ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ನಿರೂಪಕಿ ಉಷಾ ನಡೆಸಿಕೊಟ್ಟ ಕಾರ್ಯಕ್ರಮ ಬೊಂಬಾಟಾಗಿತ್ತು. ಹಾಡುಗಳಿಗೆ ಅರ್ಥ ಹುಡುಕ ಬೇಡಿ ಅದನ್ನು ಎಂಜಾಯ್ ಮಾಡಿ ಅಂತ.
ಅದು ಸತ್ಯ, ಒಮ್ಮೆ ಸುವರ್ಣವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸಂಗೀತ ಸ್ಪರ್ಧೆಯಲ್ಲಿ ಮಗುವೊಂದು ಹಳೆಪಾತ್ರೆ ಹಳೆ ಕಪುದ ಹಾಡನ್ನು ಹೇಳಿತ್ತು.
ಆಗ ವಿಶೇಷ ಅತಿಥಿ ಆಗಿ ಬಂದಿದ್ದ ನಾಗಾಭರಣ ಅವರು ಈ ಸಾಹಿತ್ಯದ ಬಗ್ಗೆ ವ್ಯಂಗ್ಯ ಆಡಿ ಆ ಮಗು, ಅದರ ತಾಯಿ , ಜಡ್ಜ್ ಗಳಾದ ಸಂಗೀತ ಕಟ್ಟಿ ಕುಲಕರ್ಣಿ, ಮಂಜುಳ ಗುರುರಾಜ್ ಅವರನ್ನು ಗೊಂದಲಕ್ಕೆ ಈಡು ಮಾಡಿದ್ರು. ಅವರು ಅದನ್ನು ನೇರವಾಗಿ ಯೋಗರಾಜ್ ಭಟ್ಟರಿಗೆ ಹೇಳಿದ್ದಿದ್ದರೆ ಅರ್ಥಪೂರ್ಣವಾಗಿರ್ತಾ ಇತ್ತು, ಬದಲಿಗೆ ಪ್ರಹಾರ ಮಾಡಿದ್ದು ಬೇರೆಯವರ ಮೇಲೆ
.
ಈ ರೀತಿಯ ಹಾಡುಗಳು ಮೊದಲಿಂದಲೂ ಇದ್ದೆ ಇದೆ .ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಕೈ ಬಿಡೆನು..
ರಾಮಾ ಆಕಾಶ ಬೀಳುತ್ತೆನ್ರಿ? ಅಂತಾ ಯಾರು ಪ್ರಶ್ನಿಸಲಿಲ್ಲ ಬದಲಿಗೆ ಆಹಾ ಆಹಾ ಅಂತ ಹಾಡಿಕೊಂಡ್ರು. ಈಗಿನ ಸಾಹಿತ್ಯದಲ್ಲಿ ಇಂತಹ ಅತಿರೇಕಗಳು ಸಾಮಾನ್ಯ.
ಪೂರ್ಣ ಓದಿಗೆ ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



ಅದನ್ನ ಅತಿರೇಕ ಅನ್ನಲೂ ಸಾಧ್ಯವಿಲ್ಲ.. natural ಅನ್ನಬಹುದು. ಸಿನಿಮಾದಲ್ಲಿ ಆ ಹಾಡು ಹಾಡಿದವನು ಕವಿಯೇನಲ್ಲ. ಅವನ ಕೆಲಸಕ್ಕೆ ತಕ್ಕ ಹಾಗೆ ಕವಿತ್ವ ಮೆರೆದಿದ್ದಾನೆ ‘ಚಂದಿರನ ತೂಕಕೆ ಇಡು..’ ಅನ್ನುತ್ತ..
ಬಹುಶಃ ಕೈಲಾಗದವನು ಮೈ ಪರಚಿಕೊಂಡ ಎಂಬ ಪರಿಸ್ತಿತಿಯಲ್ಲಿರಬಹುದು ನಾಗಾಭರಣ .