ಜಮೀಲ್ ಗೆ ಬರೀ ಕೆಲಸ ಮಾಡಿದರೆ ಮಾತ್ರ ಸಾಲದು, ಅಚ್ಚುಕಟ್ಟಾಗಿ ಮಾಡಬೇಕು. ಅಚ್ಚುಕಟ್ಟಾಗಿ ಮಾಡಿದರೆ ಮಾತ್ರ ಸಾಲದು different ಆಗಿ ಮಾಡಬೇಕು. ಜಮೀಲ್ ಎಸ್ ಎಚ್ ಹಾಗಾಗಿ ಹುಟ್ಟು ಹಾಕಿದ್ದು ಸಾವನ್ನ ಪ್ರಕಾಶನವನ್ನ.
ಪ್ರಕಾಶನ ಮಾಡುವುದು ಸುಲಭ ಆದರೆ different ಆಗಿ ಮಾಡುವುದಕ್ಕೆ ಒಳಗೆ ಗುದ್ದಿಕೊಂಡು ಬರುವ ಕನಸುಗಳಿರಬೇಕು. ಅಂತಹ ಕನಸುಗಳ ಒಂದು ಲೋಕವನ್ನೇ ಹೊತ್ತವರು ಜಮೀಲ್. ಅವರು ಪುಸ್ತಕ ಪ್ರಕಟಿಸುವ ರೀತಿ, ಅದರ ಬಿಡುಗಡೆಯ style, ಅವರ ತಂಡದ smartness, ಜೊತೆಗೆ ಪುಸ್ತಕ ಮಾರಾಟಕ್ಕಾಗಿ ರೂಪಿಸುವ ಮಳಿಗೆ, ಪುಸ್ತಕ ಬಿಡುಗಡೆ ಮಾಡಲು ಬಳಸುವ ವಿಧಾನ, ಅತಿಥಿಗಳಿಗೆ ನೀಡುವ ಗಿಫ್ಟ್, ಪುಸ್ತಕದ ಪ್ರೊಮೊಶನ್ ಗೆ ನೀಡುವ ಸೃಜನಶೀಲ ಟಚ್.. ಎಲ್ಲವೂ ಜಮೀಲ್ ಮಾತ್ರ ಜಮೀಲ್ ಆಗಲು ಸಾಧ್ಯ ಎನ್ನುವಂತೆ ಮಾಡಿದೆ
ಜಮೀಲ್ ಇತ್ತೀಚಿಗೆ ‘ಉದಯವಾಣಿ‘ಯ ರಾಜೇಶ್ ಶೆಟ್ಟಿ ಅಲಿಯಾಸ್ ದಶರಥ ಅವರ ಕೃತಿ ಪ್ರಕಟಿಸಿದರು. ‘ಆಲ್ ಈಸ್ ವೆಲ್’ ಕೃತಿ ಬರುತ್ತಿದೆ ಎನ್ನುವುದು ಗೊತ್ತಾಗುವುದು ಹೇಗೆ?. ಅದಕ್ಕಾಗಿ ಒಂದು ವಿಡಿಯೋ ತಯಾರಿಸಿದರು. ಅದು ಇಲ್ಲಿದೆ ನೋಡಿ…
ಜೋಗಿ ಉವಾಚ-
ನಮ್ಮ ರಾಜೇಶ್ ಶೆಟ್ಟಿ ಬರೆದ ‘ಆಲ್ ಈಜ್ ವೆಲ್’ ಪುಸ್ತಕ ಶಿವಾನಂದ ಸರ್ಕಲ್ಲಿನ ಜನಾರ್ದನ ಹೋಟೆಲಿನಲ್ಲಿ ಬಿಡುಗಡೆಯಾಯಿತು.
ಭಾಷಣಗಳಿರಲಿಲ್ಲ, ಸ್ವಾಗತ, ಧನ್ಯವಾದಗಳಿರಲಿಲ್ಲ.
ಮೊದಲ ಪ್ರತಿಯನ್ನು ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುವ ವಾಸುದೇವ ಹೊಳ್ಳರಿಗೆ ನೀಡಲಾಯಿತು.
ನಾವು ಅಲ್ಲೊಂದು ಮಸಾಲೆ ದೋಸೆ ತಿಂದು ಹೊರಡುವಷ್ಟರಲ್ಲಿ ಅವರು ಅರ್ಧ ಪುಸ್ತಕ ಓದಿ ಮುಗಿಸಿದ್ದರು. ‘ಹಿಡ್ಕಂಡ್ರೆ ಬಿಡೂಕಾತಿಲ್ಲೆ ಮರಾಯ್ರೇ’ ಅಂತ ಕಾಂಪ್ಲಿಮೆಂಟ್ ಕೂಡ ಕೊಟ್ಟರು.
ಪುಸ್ತಕ ಬಿಡುಗಡೆ ಹೀಗಿರಬೇಕು. ಹೀಗೂ ಇರಬೇಕು.
ರಾಜೇಶ್ ಶೆಟ್ಟಿ ಉವಾಚ
ಇವತ್ತು ಬಿಡುಗಡೆ ಅಂದಿದ್ದರು SH Jameel.
ಎಲ್ಲಿ ಅಂತ ಗೊತ್ತಿರಲಿಲ್ಲ.
ಹೇಗೆ ಅಂತ ಗೊತ್ತಿರಲಿಲ್ಲ.
ಜೋಗಿ ಸರ್ ಜೊತೆ ಇರ್ತಾರೆ ಅನ್ನೋ ನಂಬಿಕೆ ಇತ್ತು. ಅಷ್ಟೇ.
ಮಧ್ಯಾಹ್ನ ಆಯ್ತು. ಸಂಜೆ ಆಯ್ತು.
ಕೊನೆ ಪುಸ್ತಕ ಬಿಡುಗಡೆ ಆಗಿದ್ದು ಎಲ್ಲಿ ಗೊತ್ತಾ?
ಶಿವಾನಂದ ಸರ್ಕಲ್ಲಿನಲ್ಲಿರೋ ಜನಾರ್ಧನ ಹೋಟೆಲಿನಲ್ಲಿ.
ಮಾತಿಲ್ಲ. ಕತೆಯಿಲ್ಲ.
ಸಿಂಪಲ್ ಆಂಡ್ ಬ್ಯೂಟಿಫುಲ್.
0 ಪ್ರತಿಕ್ರಿಯೆಗಳು