ಚಿತ್ತಿ ಮಳೆಯೂ ಬಂದು…

ಎಸ್. ಪಿ. ವಿಜಯಲಕ್ಷ್ಮಿ

ಚಿತ್ತೀ ಮಳೆಯೂ ಬಂದೂ
ಹೊತ್ತಿ ಹೋಯ್ತಲ್ಲೊ ಬದುಕು
ಬಿತ್ತಿದ ಮುತ್ತೆಲ್ಲಾ
ಬತ್ತಿದವೋ,
ತುತ್ತಾಗದಂತೆ ಎತ್ಹೋದವೋ….

ಚಿತ್ತಾರ ಮನದಾಗೆ ನೂರಿದ್ದವೋ
ಮುತ್ತೀಗೆ ಹಾಕುತ್ತಾ ಮೆರೆಸಿದ್ದವೋ
ಎತ್ತೆತ್ತ ನೋಡಲಿ ಮಣ್ಣಿನ ಮಡಿಲಲ್ಲಿ
ಬಂಗಾರ ಹೊಳೆದಂತೆ
ಕುಣಿಸಿದ್ದವೋ,
ಝಳಝಳನ ಬೆಳೆಯಂತೆ
ಬೆಳಗಿದ್ದವೋ…

ಮುಗಿಲ್ಯಾಕೊ ಬಿಮ್ಮಾನೆ ಕಪ್ಪಾಯಿತೋ
ನಮ್ಮಿಂದ ಏನಂಥ ತಪ್ಪಾಯಿತೋ
ಬೋಗುಣಿ ಕವುಚಿ ನೆಲವನ್ನೆ ಅವುಚಿ
‘ಸೋ’ ಎಂದು ಭರಭರನೆ
ರಾಚಿದವೋ,
ಒನಕೆಯ ಮಟ್ಟಲ್ಲಿ
ಕುಟ್ಟಿದವೋ…

ಗಂಗೇಗೆ ಯಾಕಿಂಥ ಮುನಿಸಾಯ್ತೋ
ರುದ್ರಾನ ತಾಂಡವಾ ಅತಿಯಾಯ್ತೋ
ಮನೆಯೇ ಹೊಳೆಯಾಗಿ ಇಳೆಯೇ ಕಳೆದ್ಹೋಗಿ
ಮನೆಮನೆಯಾ ಗುಡಿಸೀ
ಹಿಸುಕೀದವೋ,
ಸಾವಿನ ಸೂತಕ
ಹರಿಸಿದವೋ…

ಆಕಳು ಕರು ಕುರಿಯೂ ಎಲ್ಹೋದವೋ
ಮಗಳೆಲ್ಲೊ ಮಗನೆಲ್ಲೊ ಕಂಡಿಲ್ಲವೋ
ಎದೆ ಒಡೆದು ಚೂರಾಗಿ, ಮನೆ ಕುಸಿದು ಬಯಲಾಗಿ
ಇದ್ದದ್ದು ಇರದಂತೆ
ಮರೆಯಾದವೋ,
ಇಲ್ಲದ್ದು ತಳವೂರಿ
ಕುಕ್ಕೀದವೋ…

ಹೊನ್ನಂತು ಬಿಟ್ಟೇನು ಅನ್ನಾನೂ ಮರೆತೇನು
ಹಡೆದಾ ಕುಡಿ ಮರಳೀ ಬಂದೀತೇನು
ನೇಸಾರ ಸೂರಾಗೆ ಗುಡಿಸಾಲು ಗೋರ್ಯಾಗೆ
ಇನ್ನೆಂಗೆ ಬದುಕಾ
ಬಾಳ್ಯೇನೂ,
ಕತ್ತಾಲ ಗವಿಯಲ್ಲಿ
ಕಂಗೆಟ್ಟೆನೂ…

‍ಲೇಖಕರು avadhi

October 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ MukundCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: