ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚರಿತ್ರೆಯ ಮಣ್ಣಿನ ಹಂಗಿನಲ್ಲಿ..

ಮಂಜುಳಾ ಹಿರೇಮಠ

ಸೋಲುವ ಕವಿತೆ

ನಾ ಬರೆದ ಪದ್ಯದ ಪ್ರತಿ ಪದವೂ
ವಲಸೆ ಬಂದ ಹಕ್ಕಿಯಂತೆ
ನನ್ನ ಸೃಷ್ಟಿ ಎಂದು ಬೀಗುವ
ನನ್ನ ಬೆರಗಿನಿಂದ ನೋಡುತ್ತವೆ

ನಾ ಬರೆದ ಪದ್ಯದ ಪ್ರತಿ ಸಾಲೂ
ಕಡ ತಂದ ಯಾವುದೋ ಋಣ
ಭಾರಕ್ಕೆ ಜೋತುಬೀಳುತ್ತವೆ
ರೂಪಕಗಳಾಗಿ ಹಾದು ಹೋದ
ನದಿ, ಕಡಲ ಅಲೆಗಳು ಕವಿತೆಯ
ಸೋಗಲಾಡಿತನವನ್ನು ಹಂಗಿಸುತ್ತವೆ

ನಾ ಬರೆದ ಪದ್ಯದ ಲೇಪಿತ
ಪರಿಮಳವು ಯಾವುದೋ
ಚರಿತ್ರೆಯ ಮಣ್ಣಿನ ಹಂಗಿನಲ್ಲಿ
ನಗೆಪಾಟಲಿಗೀಡಾಗುತ್ತವೆ

ನಾ ಬರೆದ ಪದ್ಯದ ಕೊನೆಯ ಚರಣಗಳು
ಅಹಮಿಕೆಯಲಿ ಸವೆದು ಕೊನೆಗೊಮ್ಮೆ
ಬಾಳಿ ಬೇರಿಳಿಸಿದ ಕವಿತೆಗಳ
ಚರಣಕೆರಗಿ ಸೋಲೊಪ್ಪಿಕೊಳ್ಳುತ್ತವೆ

‍ಲೇಖಕರು Avadhi Admin

13 March, 2019

1 Comment

  1. K. Nallathambi

    Nice one

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading