
ಕೃಷ್ಣಮೂರ್ತಿ ಗೀತಾ
ಸೂಜಿ ಕಳೆದು ಹೋಗಬಾರದೆಂದು
ದಾರ ಪೋಣಿಸಿಟ್ಟಿದ್ದಳು ಅಮ್ಮ
ನಾನು ಕೇಳಿದೆ
ಈ ಗುಡಿಸಲು ಹೊಲೆಯಬಹುದೇ ಅಮ್ಮ ಇದರಲ್ಲಿ
ಅಮ್ಮ ನಕ್ಕು ಹೇಳಿದಳು
ದಾರ ಸಾಕಷ್ಟಿದ್ದರೆ ಸಮಾಜವನ್ನೆ
ಹೊಲೆಯುತ್ತೇನೆ…….
ಹಸಿವು ಹೊಲೆಯುವ ಅಮ್ಮ
ಹಸಿದ ಕರುಳು ಹೊಲೆದುಕೊಳ್ಳಲಾರಳೆ

ಅವ್ವ
ಕವಿತೆ ಬರಿ ಮಗಾ ಎಂದಳು
ಹಸಿವಿನ ಕವಿತೆ ಬರೆದೆ
ಅವ್ವ ನನ್ನ ರೊಟ್ಟಿಯ ಜೊತೆಗೆ
ತನ್ನ ಪಾಲಿನ ರೊಟ್ಟಿ ಕೊಟ್ಟು
ಕವಿತೆ ತೆಗೆದುಕೊಂಡಳು
ಹಸಿವಿನ ಕವಿತೆ ಬರೆಯುವುದೆಂದರೆ..

ಅಮ್ಮ ಆಡಾಡುತ್ತಾ ಚಿಕ್ಕವಳಾಗುತ್ತಿದ್ದಳು
ನಾನು ಆಡಾಡುತ್ತ ದೊಡ್ಡವನಾಗುತ್ತಿದ್ದೆ
ವಯಸ್ಸಿನ ಒಂದು ಬಿಂದುವಿನಲ್ಲಿ ಸಮಾನಂತರವಾಗಿ ಬೇಟಿಯಾದೆವು
ಖುಶಿಯಾಗಿ
ಸಂತೋಷವಾಗಿ
ಚಿತ್ರ: ಬಿರ್ಡಿರಾಜ್ / ಫೈನ್ ಆರ್ಟ್ A





Simply Beautiful
channagide 🙂
Superb