ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತೋಸ್ಮಿ ಕವಿತೆ – ಸುಳಿದೀತು ಕವಿತೆ…

ಗೀತೋಸ್ಮಿ

ಪ್ರಪಂಚವೆಲ್ಲ
ಪ್ರತಿಮೆಗಳಿಂದ ತುಂಬಿಹೋಗಿದೆ!
ಸರಿಯಾದ ಸಮಯಕ್ಕೆ ಉತ್ತಿ,
ಸರಿಯಾದ ಕ್ರಮದಲ್ಲಿ ಬಿತ್ತಿ,
ಸರಿಯಾದ ಪ್ರತಿಮೆಯನ್ನೆತ್ತಿ
ಕೂರಿಸಬೇಕಾದ್ದಷ್ಟೇ
ಉಳಿದಿದೆ!

ಹ್ಞಾ! ಮೆಲ್ಲಗೆ..!
ನಿಟ್ಟುಸಿರಿನ
ಬಿಸುಪಿಗೆ ಕರಗಿ
ಹೋದೀತು-
ಪ್ರತಿಮೆ!

ಯಾವುದೋ ಎದೆಯಲ್ಲಿ
ಯಾವುದೋ ನೆಪದಲ್ಲಿ
ಸುಳಿದೀತು ಕವಿತೆ-
ಒಲುನಲುಮೆ ಶಿಶುವಾಗಿ;

ಬಟ್ಟೆಗಳನೂ, ಬರೆಗಳನೂ ಕಳಚಿ-
ಬತ್ತಲಲ್ಲಿ;
ಪುಟ್ಟ-
ಅಂಬೆಗಾಲಲ್ಲಿ!

‍ಲೇಖಕರು avadhi

5 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading