ಗೀತಾ ಎನ್ ಸ್ವಾಮಿ ಕವಿತೆ- ಮಹಾಘನ ನಿರಾಳ…

ಗೀತಾ ಎನ್ ಸ್ವಾಮಿ

ಬುರುಜುಗಳ ಹತ್ತಿ
ಪ್ರೇಮವನ್ನೇ ಉಸಿರಾಡುವ ಹಕ್ಕಿಗಳನ್ನು ಹಾರಿಸಿದವನೊಬ್ಬ
ಬುದ್ಧನ ವೇಷ ತೊಟ್ಟು ಇಗರ್ಜಿಯಲ್ಲಿ ಲೀನವಾದ
ಯೇಸು ಬುದ್ಧ ರ ಶುದ್ಧ ಉಸಿರು ತಾಗಿ
ಮಂದಿರದ ಅಂಗಳಕೆ ಬಂದು ಜಿಹ್ವೆಮೇಲೆ “ಹಿಂಸೆ” ಎಂದು ಬರೆದು ಕರಕಲಾದ……
ತೇಜೋವಧೆ ಎಂದರೆ ನನಗೆ ಗೊತ್ತಿಲ್ಲ!?
ಸಗಣಿಯ ಬೆನಕಂಗೆ ಸಂಪಿಗೆಯ ಪೂಜೆ ಒಗ್ಗಲ್ಲ
ಹುಣ್ಣಿಮೆ ಹತ್ತಿ ಉರಿದು ತಮವಾಯ್ತು

ನನಗೊಂದು ಹಿಂಸೆ ತಾಗಿ
ಲುಂಬಿನಿಯ ಗುಡ್ಡದ ಮೇಲೆ ಕುಳಿತು ತಣ್ಣಗಾದೆ
ಎಲ್ಲೋ ಬಸಿಯುವ ಕುಟ್ಟುವ ಕೊಲ್ಲುವ ಶಬುದ ಕೇಳುತ್ತಲೇ ಇವೆ….
ಲುಂಬಿನಿಯ ನೆರಳಲ್ಲಿ ಪ್ರಜ್ಞೆ ಘನವಾದ ನಿರಾಳವಾಗಲಿ
ಬುರುಜು, ಸ್ತೂಪ, ಬಸದಿ, ಇಗರ್ಜಿ,ಮಂದಿರ
ಎಲ್ಲಿಗಾದರೂ ಎಡತಾಕಿ ಬದುಕಬೇಕು.. ಹಿಂಸೆ ಎಂದವನ ನೆರಳು ತಾಕದಿರಲಿ…..
ಪುಷ್ಪಗಳನ್ನು ಒಣಗಿಸಿ ಅಗ್ಗಿಕಾಯಿಸಿಕೊಂಡವನ ದರ್ಶನವೆಂದೂ ಆಗದಿರಲಿ…..

‍ಲೇಖಕರು avadhi

April 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: