ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಗೆ ಗೌರವ್ವರು ಮಕ ಮಕವ ನೋಡಿಕಂಡು..

k p lakshman

ಕೆ ಪಿ ಲಕ್ಷ್ಮಣ್ 

ಅವ್ವನ ಬೆರಳ ಸಂದಿಯಿಂದ ಹರಿದ ರಂಗೋಲೆ ಎಳೆ ಬಳ್ಳಿಗಳು
ಹಟ್ಟಿ ತುಂಬ ಹಬ್ಬಿ ಹೂಬಿಡುವಾಗ
ಇರುಳೆಲ್ಲ ಸವತಿ ಜಿದ್ದಿನಲಿ ಬಿದ್ದು ಜಗಳಾಡಿ
ದಣಿದ ಗೌರೀ ಗಂಗವ್ವರು ಸೆರಗಿನಲಿ ಕಣ್ಣೊರೆಸಿ
ರಂಗೋಲಿ ಗರತಿಯ ಬಳಿ ನ್ಯಾಯ ತಂದಾಗ
ಬಳ್ಳಿಯಾಗಿನ ಮಲ್ಲಿಗೆ ಗಮ್ಮೆಂದು ನಕ್ಕಿತು

shiva pairಕೈಲಾಸದಿಂದ ಶಿವನದೊಂದು ಕಣ್ಸನ್ನೆ
ಹೆಂಗಾರ ಮನವೊಲಿಸಿ ಕಳಿಸೆಂದು

ಹೊಣೆ ಹೊತ್ತ ರಂಗವ್ವ
ಗಂಗೆ ಗೌರಿಯ ಕೆನ್ನೆಗೆ
ಅರಿಶೀನ ಬಳಿಯೂತ

ನಿಮ್ಮ ನಲ್ಲ ನೆನ್ನೆ ಮಲ್ಲಿಗೆ ಬಳ್ಳಿಯಲಿ
ಹೂ ಕೂಯ್ವುದ ಕಂಡೆ !!
ಯಾರಿಗಿತ್ತನೋ ಏನೋ ?!!

ಗಂಗೆ ಗೌರವ್ವರು
ಮಕ ಮಕವ ನೋಡಿಕಂಡು
ಕ್ಷಣ ಹೊತ್ತೆ ಆದದ್ದು …

ಕೈಲಾಸದ ತುಂಬಾ
ಗುಡ ಗುಡನೆ ಗುಡುಗು ಮಿಣಮಿಣನೆ ಮಿಂಚು

ಧರೆಯ ಮೇಲೆ ಮಳೆಯೋ ಮಳೆ!!

 

‍ಲೇಖಕರು Admin

18 July, 2016

4 Comments

  1. Shama, Nandibetta

    “ಗಂಗೆ ಗೌರವ್ವರು
    ಮಕ ಮಕವ ನೋಡಿಕಂಡು
    ಕ್ಷಣ ಹೊತ್ತೆ ಆದದ್ದು …
    ಧರೆಯ ಮೇಲೆ ಮಳೆಯೋ ಮಳೆ!!”

    Sooooper

  2. lalitha sid

    🙂 🙂 🙂 🙂 🙂 Cute .,, fine

  3. Sangeeta Kalmane

    ಕವನದ ಹುಟ್ಟು ಸಖತ್ತಾಗಿದೆ. ಕವಿಗೆ ಕವನ ಬರೆಯುವಾಗ ವಿಷಯ ಯಾವುದಾದರೇನು. ಕವನ ಒಪ್ಪವಾಗಿದ್ದರೆ ಅಷ್ಟೆ ಸಾಕು. ನಿಮ್ಮ ಕವನ ಉತ್ತಮ ನಿದರ್ಶನ.

  4. mahadev hadapad

    channagide bhaashe mttu Bhaava

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading