ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ವಿಜ್: ಇಲ್ಲಿದೆ ಉತ್ತರ


ನಾನು ಇತ್ತೀಚಿಗೆ ನನ್ನ ಅನುವಾದಿತ ಕೃತಿ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಬಿಡುಗಡೆಯ ಕಾರ್ಯಕ್ರಮಕ್ಕಾಗಿ ಧಾರವಾಡಕ್ಕೆ ಹೋಗಬೇಕಾಗಿ ಬಂತು.  ಬೇರೆಡೆ ಓಡಾಡುವಾಗಲೆಲ್ಲಾ ಕೈಯಲ್ಲಿ ಕ್ಯಾಮೆರಾ ಹಿಡಿದಿರುವುದು ನನ್ನ ಹವ್ಯಾಸ. ಅವತ್ತೂ ಹಾಗೇ ಆಯ್ತು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕಾಲಿಟ್ಟು ಅಲ್ಲಿದ್ದ ಶಂಕರ ಹಲಗತ್ತಿ, ಎಂ ಡಿ ವಕ್ಕುಂದ, ಬಸವರಾಜ ಸೂಳಿಬಾವಿ ಅವರ ಫೋಟೋ ತೆಗೆಯುತ್ತಾ ಗೋಡೆಯ ಮೇಲೆ ಕಣ್ಣಾಡಿಸಿದಾಗ ಸಿಕ್ಕದ್ದು ಈ ಚಿತ್ರ.
ಅರೆ!  ಮಹಾದೇವ ಅವರು ಹೀಗಿದ್ದರಾ.. ಎಂದು ನನಗೆ ಆಶ್ಚರ್ಯವಾಯ್ತು. ತಕ್ಷಣ ಫೋಟೋ ಕ್ಲಿಕ್ಕಿಸಿದೆ. ನಾನು ದೇವನೂರರ ಅತ್ಯಂತ ಹಳೆಯ ಫೋಟೋ ಎಂದು ನೋಡಿರುವುದು ನೆಲಮನೆ ಪ್ರಕಾಶನ ಹೊರತಂದ ‘ದ್ಯಾವನೂರು’ ಕಥಾ ಸಂಕಲನದ ಮುಖಪುಟದಲ್ಲಿದ್ದ ಚಿತ್ರ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಿಕೊಳ್ಳಲು ಪ್ರಯತ್ನಿಸಿ ಸೋತೆ
ಇರಲಿ ದೇವನೂರರ ಭಾವಚಿತ್ರ ವಿದ್ಯಾವರ್ಧಕ ಸಂಘದ ಗೋಡೆಯ ಮೇಲೆ ಹೇಗಿತ್ತೋ ಹಾಗೆ ಇಲ್ಲಿ ಕೊಟ್ಟಿದ್ದೇನೆ
ಇನ್ನು ಬಹುಮಾನದ ವಿಷಯ
ರವಿವರ್ಮ ಹೊಸಪೇಟೆ, ಶ್ರೀರಾಮುಲು, ದೇವನೂರು ಮಹಾದೇವ, ಹನುಮಣ್ಣ ನಾಯಕ ದೊರೆ, ರಂಜಾನ್ ದರ್ಗಾ, ಅಬ್ದುಲ್ ರಶೀದ್, ಬಷೀರ್, ಎಚ್ ಎಸ್ ಶಿವಪ್ರಕಾಶ್, ಪ್ರಸನ್ನ.. ಹೀಗೆ ನಾನಾ ಉತ್ತರಗಳು ಬಂತು.
‘ಇದು ರವಿವರ್ಮರೇ, ಬಹುಮಾನ ಯಾವಾಗ ತಲುಪಿಸುತ್ತೀರಿ’ ಅಂತ ಕೇಳಿದ್ದು ಶಾಂತಿ ಅಪ್ಪಣ್ಣ.  ರಂಗನಾಥ ಮರಕಿಣಿ ಇದು ರವಿವರ್ಮರೇ 100% ಅಂದರು. ರಮೇಶ್ ಹಿರೆಜಂಬೂರ್  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 200% ಅಂದರು.
ಆದರೆ ಉತ್ತರ ಮಾತ್ರ ದೇವನೂರು ಮಹಾದೇವ.
ಈ ಪೈಕಿ ಮೂವರು ದೇವನೂರು ಮಹಾದೇವ ಅವರನ್ನು ಗುರುತಿಸಿದ್ದಾರೆ. ಮೊದಲು ಈ ಹೆಸರು ಸೂಚಿಸಿದರೂ ಅನುಮಾನ ವ್ಯಕ್ತಪಡಿಸಿದ್ದು ಶಿವಪ್ಪ ನಾಯಕ್ ಇನ್ನಿಬ್ಬರು ಅನಾಮಿಕರು.  ಈ ಪೈಕಿ ಕ್ವಿಜ್ ಪ್ರಕಟಿಸಿದ ದಿನವೇ 9:07 ಕ್ಕೆ ಸರಿಯಾದ ಉತ್ತರ ನೀಡಿದ ಅನಾಮಿಕರಿಗೆ ಬಹುಮಾನ ಸಿಗಬೇಕು.
ಆದರೆ ಏನು ಮಾಡುವುದು ಅವರು ಅನಾಮಿಕರು. ಆದ್ದರಿಂದ ಬಹುಮಾನ ‘ಅವಧಿ’ಯ ಬಳಿಯೇ ಉಳಿಯಲಿದೆ
ಅಥವಾ ಶಿವಪ್ಪ ನಾಯಕರಿಗೆ ಬಹುಮಾನ ನೀಡಿ ಎಂದು ನೀವು ಅಭಿಪ್ರಾಯಪಟ್ಟರೆ ಅವರಿಗೆ ಬಹುಮಾನ ಕಳಿಸುತ್ತೇವೆ. ಏನಂತೀರಿ??

‍ಲೇಖಕರು G

31 July, 2013

22 Comments

  1. Shivappa Nayak

    I’m honored Sir! Please give the prize money to any deserving Dalit college student or distribute sweets to slum children.

    • MANJUNATH DOLLIN

      no, sir definately this person is MR.Ravivarma Hospet no doubt

  2. bharathi

    Aa anaamika naane endu thilisalu harshisuttene. Adu anaamika antha aagiddakke mattondsala bharathi anta hesru haaki utra kotte … address msg maadlaa g n mohan avare ? 🙂

    • Shivappa Nayak

      Sorry madam, Sir has declared me as the winner. 😉

    • prashant adur

      illa a anaamika nanu…nanu dharwad bad andre ishta karyakramakke hodaga nodidde. bharatiyavaru endu anaamikalagalararu..avaru tumba famous..so prize should come to me. 🙂 🙂

  3. shanthi k.a.

    oh….! congratulations shivappa sir and bharathi madam. antoo prapanchadalli onde tara kaanoru 7 jana iruttaare annodantoo khaatri aaytu.
    thanks mohan sir….

  4. ರಮೇಶ್ ಹಿರೇಜಂಬೂರು

    ಶಿವಪ್ಪ ನಾಯಕರಿಗೆ ಬಹುಮಾನ ಕೊಡಬಹುದು ಸರ್… ನಾವೆಲ್ಲ ಯಾಮಾರಿದವರು. ಅವರು ಹತ್ತಿರ ಬಂದವರು! ಹಾಗಾಗಿ ಅವರಿಗೇ ಕೊಡಿ… 🙂

  5. bharathi

    Prashanth sumne railu hattisaa bedeeppa !!! Nayakare nimna winner anta declare maadilla … madla anta namnella kelidaare … neeve nodi 🙂

    • Shivappa Nayak

      Slum makkalige sweets siguva avakaasha tamminda tappabaaradu madam. 🙂

  6. ranga marakini

    Sir, Correction please, I mentioned as Abdul Rasheed and not as Ravi Verma as you mentioned.
    Ranga marakini

    • Shivappa Nayak

      adoo saha wrong answer ranga avare!

  7. ಪ್ರಶಾಂತ ಭಾರತಿ

    ನಾನು ನಿಜವಾದ ಅನಾಮಿಕ. ಸನ್ನಾಫ್ ಮಿಕ ಮತ್ತು ಕಾರ್ಮಿಕ. ನನಗೇ ಬಹುಮಾನ ಕೊಡಿರಿ

  8. anamika

    naane aa anamika

    • ಶಿವಾನಂದ.ನಿ.ಕೆಲೂರ

      ನಿಮ್ಮ ಬರವಣಿಗೆ ನಿಮ್ಮ ಬದುಕಿನ ಬೇಳಕಾಗಲಿ ಸರ್…

  9. ಗುರುಶಾಂತ್ ಎಸ್.ವೈ

    ನಿಮ್ಮ ನಿರ್ಣಯ / ತೀರ್ಪು ಶೇಕಡಾ1000 ದಷ್ಟು ತಪ್ಪು. ಚಿಕ್ಕ ವಯಸ್ಸಿನಿಂದಲೂ ದೇವನೂರು ಮಹಾದೇವರನ್ನು ನಾವು ನೋಡಿದ್ದೇವೆ. ಅವರು ಎಂದೂ ಹೀಗಿರಲಿಲ್ಲ. ಇದು ಹೊಸಪೇಟೆಯ, ಜೆನ್ ಕಥೆಗಳನ್ನು ಅನುವಾದಿಸಿದ ಕವಿ ಮನಸ್ಸಿನ/ ಹುಚ್ಚು ಮನಸ್ಸಿನ ಹತ್ತು ಹವ್ಯಾಸಗಳ ಪ್ರೀತಿಯ ಡಿ.ರವಿವರ್ಮ ನೇ. ಅನುಮಾನ ಬೇಡ. ಪರಿಶೀಲಿಸಿ. ಆಗಿರುವ ತಪ್ಪು ಒಪ್ಪಿಕೊಳ್ಳಿ. ನಮಗೆ ಬಹುಮಾನ ಕಳಿಸಿ. ಅನಾಮಿಕ ಅಂತಾಹೇಳಿ ಬಹುಮಾನ ನಿಮ್ಮಲ್ಲೇ ಉಳಿಸಿಕೊಳ್ಳಬೇಡಿ.

  10. ಗುರುಶಾಂತ್ ಎಸ್.ವೈ

    ಸ್ವಾಮಿ, ಫ್ರೇಮ್ ಹಾಕಿದ ಫೋಟೋ ಕೆಳಗೆ ದೇವನೂರು ಮಹದೇವ ಅಂತಾ ಬರೆದು ಬಿಟ್ಟರೆ ರವಿವರ್ಮನು ದೇವನೂರು ಆಗಬಲ್ಲನೇ? ಅಥವಾ ದೇವನೂರು ರವಿವರ್ಮ ಆಗಬಹುದೇ? ಎಂತಹ ವ್ಯಂಗ್ಯ! ಕರ್ನಾಟಕ ಸಂಘದವರಿಗೆ ತಿದ್ದಿಕೊಳ್ಳಲು ಹೇಳಿ ಪ್ಲೀಸ್. ಪ್ರತಿಷ್ಠಿತ ಸಂಸ್ಥೆ ಹೀಗೆ ಮಾಡಿಕೊಳ್ಳಬಾರದು. ಇದನ್ನೇ ಜನ ನಂಬಿಕೊಳ್ಳಬಾರದು.

  11. ಸತ್ಯನಾರಾಯಣ

    ಅಂತರ್ಜಾಲದಲ್ಲಿ ದೊರೆಯುತ್ತಿರುವ ದೇವನೂರರ ಎಲ್ಲಾ ಪೋಟೋಗಳಲ್ಲೂ ಅವರು ತಲೆಯನ್ನು ಕ್ರಾಪ್ ತೆಗೆದು ಬಾಚಿದ್ದಾರೆ. ಆದರೆ ಈ ಪೋಟದಲ್ಲಿ ಕ್ರಾಪ್ ಇಲ್ಲ. ನನಗ್ಯಾಕೊ ಮೇಲಿನದು ದೇವನೂರರದಲ್ಲ ಎನ್ನಿಸುತ್ತಿದೆ. ಗುರುಶಾಂತ್ ಅವರ ಅಭಿಪ್ರಾಯ ಸರಿ ಎನ್ನಿಸುತ್ತಿದೆ. ಯಾವುದಕ್ಕೂ, ಸಂಬಂಧಪಟ್ಟವರಲ್ಲಿ ಸ್ಪಷ್ಟಪಡಿಸಿಕೊಳ್ಳುವುದು ಒಳ್ಳೆಯದು. ತಪ್ಪಾಗಿದ್ದರೆ, ಕರ್ನಾಟಕ ವಿದ್ಯಾವರ್ಧಕ ಸಂಘದವರು ಪೋಟೋದ ಕೆಳಗಿನ ಹೆಸರನ್ನು ಬದಲಿಸಲಿ.

  12. lalitha siddabasavaiah

    ಇತ್ತೀಚೆಗೆ ವಿದ್ಯಾವರ್ಧಕ ಸಂಘಕ್ಕೆ ಹೋಗಿದ್ದಾಗ ನಾನೂ ಈ ಫೋಟೊ ನೋಡಿ ಇದು ದೇವನೂರಾ ಅಂತ ಆಶ್ಚರ್ಯ ಪಟ್ಟಿದ್ದೆ. ಈಗಲೂ ಅನುಮಾನವೆ.. ?

  13. Jayarama Adiga

    Preetiya Mohan,
    Sri Devanuur chitra thannudu (athava alla) antha thilisiddare prakatisi

    • G

      sir
      eegaagale adannu prakatisiddeve
      devanooru avaru aa chitra nannadalla enda meleye
      vishaya vidyaavardhaka sanghada baagilige hogiddu

  14. ಪಂಡಿತಾರಾಧ್ಯ ಮೈಸೂರು

    ಚಿತ್ರದ ಕೆಳಗೆ ದೇವನೂರರ ಹೆಸರು ಬರೆದವರಿಗೇ ಏನೂ ಕೊಡುವುದಿಲ್ಲವೆ?
    ೫೦:೫೦?

  15. Kariyappa Y

    I think Ravivarma Hosapete is that man….. plz give me the prize money….@

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading