ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಳೆಗಳುಳಿಸಿಹೋಗುವ ಕಲೆಗಳಾಚೆ ನಿಂತ ವರ್ಣಚಿತ್ರ…

ತಿಳಿಗೊಳದ ತಳ

ವಾಸುದೇವ ನಾಡಿಗ್

ಕೊಳೆಬಗ್ಗಡವನ್ನೆಲ್ಲ
ಒಳಕ್ಕೆಳೆದುಕೊಂಡ ತಳ
ತಿಳಿಗೆ ಜನುಮ ಕೊಟ್ಟಿತು
ತಿಳುವಳಿಕೆಗಳೆ ಹೀಗೆ
ಕಳೆಯನೆಲ್ಲಾ ಹೊಟ್ಟೆಯಲ್ಲಿಟ್ಟು ಕೊಂಡೇ
ಏಳುತ್ತದೆ
ಕೊಳೆಗಳುಳಿಸಿಹೋಗುವ
ಕಲೆಗಳಾಚೆ ನಿಂತ ವರ್ಣಚಿತ್ರ.

ನಳನಳಿಸುವ ಕನ್ನಡಿಯ ಬೆನ್ನು
ಸದಾ ಕಪ್ಪಗೆ ಬಣ್ಣ ಬಳಿದುಕೊಂಡೊ
ಖಾಕಿರಟ್ಟಕಟ್ಟಿಕೊಂಡೊ
ಆಚೆಭಾವ ಭಂಗಿಯನೆಲ್ಲ
ಖಚಿತ ರಾಚುತ್ತದೆ, ಕಂಡ ಕಲೆ
ನಾಚುತ್ತದೆ
ಅಳಲುಗಳನೆಲ್ಲ ತಳಕಿಟ್ಟು
ನೋವನೊಳಮನೆಗೆ ಅಟ್ಟಿ
ಸಗ್ಗಕೆ ಕಿಚ್ಚು ಹಚ್ಚುವ ಜೀವ
ಆಹಾ!
ಕಲಕದಿರಿ ತಳವ
ಸಿರಿಗನ್ನಡಿಯಾಗಿದ್ದ ಸರೋವರಕ್ಕೆ ಸರೋವರವೇ
ಮುಳುಗಿಸಿಕೊಂಡದ್ದು
ಅದೆಷ್ಟು ವಿಷದ ಬಾಣಗಳನ್ನು
ವಿಷಾದ ಉಸಿರುಗಳನ್ನು
ಮೇಲೆ ತಾವರೆಗಳ ಜಾತ್ರೆ!
 
ಒಂದೊಂದು ಸೋಲಿಗೂ
ಕಟ್ಟಿ ಕಲ್ಲ
ಮುಳುಗಿಸಿ ಒಳಗಿನಿಂದೆದ್ದದ್ದು
ನಗುವ ಮಹಲು
ಮುಳ್ಳುಗಳನೆಲ್ಲಾ
ಒಳಗೆಮುರುಟಿಸಿಕೊಂಡ
ಕಾಂಡ ನಕ್ಕಾಗಲೆ
ಹೂದಳಗಳರಳಿದ್ದು.
 

‍ಲೇಖಕರು G

14 August, 2014

7 Comments

  1. smitha Amrithraj

    chennagide kavite

    • vasudeva nadig

      thanks smitha amrithraj avarige

  2. sangeetha raviraj

    Arthagarbita kavite

  3. akkimangala manjunatha

    ಕವಿತೆ ಇಷ್ಟವಾಯಿತು.
    ದನ್ಯವಾದಗಳು

  4. ಮಂಜುನಾಥ್. ಪಿ

    ಮಾರ್ಮಿಕವಾದ ಸಾಲುಗಳು…

  5. syed faizulla

    ಚಿಂತನೀಯ ಕವಿತೆ
    ಕೊಳೆ-ಕಳೆ-ಕೊಟ್ಟಿದೆ
    ——–ಫೈಜ್ನಟ್ರಾಜ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading