ಕುಪ್ಪಳಿಯಲ್ಲಿ ಅಣಬೆ ­ಏಳಲಿಲ್ಲ; ­ಮೀನು ­ಬಿದ್ದವು

ಅಣಬೆ ಎಂದರೆ ಪಂಚಪ್ರಾಣ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಹಣಬೆ ಸಿಗದೇ ನಿರಾಸೆಗೊಂಡ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

­ನನಗೆ ­ರಾತ್ರಿ ­ಎಲ್ಲ ­ಒಂದೇ ­ಚಿಂತೆ. ­ನಾಳೆ ­ಅಣಬೆ ­ಏಳುತ್ತವೆ! ­ಅವುಗಳನ್ನು ಬೇರೆಯವರು ­ನೋಡುವ ­ಮೊದಲೇ ಸಂಗ್ರಹಿ­ಸಬೇಕು ­ಎಂಬುದು. ­ನನ್ನ ­ಈ ಕಲ್ಪ­ನೆಗೆ ಪೂರ­ಕ­ವಾಗಿ ­ನಮ್ಮ ­ಗುಂಡ ‘­ನಾಳೆ ­ಅಣಬೆ ­ಏಳಬಹುದು’ ­ಎಂದು ­ಭವಿಷ್ಯ ನುಡಿ­ದಿದ್ದ­ನಲ್ಲದೆ ­ಅವು ­ಏಳುವ ­ಜಾಗವನ್ನೂ ­ತೋರಿಸಿದ್ದ. ­

ಆ ­ಜಾಗ ­ಬೇರೆಲ್ಲೂ ­ಅಲ್ಲ, ­ನಮ್ಮ ­ಕಚೇರಿ ­ಇರುವ ­ಕುವೆಂಪು ಶತ­ಮಾನೋತ್ಸವ ­ಭವನ ಹೇಮಾಂಗಣದ ಮುಂದುಗಡೆಯೇ! ಗುಂಪುಗುಂಪಾಗಿ ­ಸಣ್ಣ ಕೋಪಿನಂತೆ ಬೆಳೆ­ದಿರುವ ­ವಿವಿಧ ಗಿಡಮರ ಬಳ್ಳಿಗಳ ನೆಳ­ಲಿನ ­ಸುಪುಷ್ಪ ಮಣ್ಣಿನಲ್ಲಿ ಪ್ರತಿ­ವರ್ಷ ­ಅಸಂಖ್ಯಾತ ­ಅಣಬೆಗಳು ­ಏಳುತ್ತವೆ ­ಎಂದು ­ಗುಂಡ ­ಆ ಜಾಗಗಳನ್ನೆಲ್ಲಾ ­ತೋರಿಸಿದ್ದ.

­ಅಲ್ಲದೆ ಕವಿಶೈ­ಲದ ­ದಾರಿಯ ಅಕ್ಕಪಕ್ಕದ ­ಕಾಡಿನ ಮರಗಳ­ಡಿಯಲ್ಲಿ ­ಎಲ್ಲೆಲ್ಲಿ ­ಅಣಬೆ ­ಏಳುತ್ತವೆ ­ಎಂದೂ ­ತೋರಿಸಿದ್ದ. ನನಗೆ ಚಿಕ್ಕಂ­ದಿ­ನಿಂದಲೂ ­ಅಣಬೆ ­ಎಂದರೆ ಪಂಚಪ್ರಾಣ. ­ನಮ್ಮದು ­ಬಯಲು ಸೀಮೆಯಾದರೂ ಮಳೆಗಾ­ಲದ ನಂತರದ ತಂಪಿನ ­ತೇವಕ್ಕೆ ­ಆಗಸ್ಟ್‌ ­ತಿಂಗಳು ­ಮಣ್ಣು ಹದ­ವಾಗಿ ­ನಮ್ಮ ­ಹೊಲದ ­ಒಂದು ಅಂಚಿನಲ್ಲಿದ್ದ ­ತಬಸೀ ಮರಗಳ ಪದತಳದಲ್ಲಿ ­ರಾಶಿ ­ರಾಶಿ ­ಮೊಗಟು ­ಅಣಬೆ ಏಳುತ್ತಿದ್ದವು.

­ಅದೇ ­ಹೊಲದ ­ಇನ್ನೊಂದು ­ಅಂಚಿನ ಹುತ್ತಗಳ ­ತುಂಬ ­ಹುತ್ತ ­ಅಣಬೆ ಚಿಗುರುತ್ತಿದ್ದವು. ಇತ್ತೀಚೆ­ಗಿನ ವರ್ಷಗಳಲ್ಲಿ ­ಆ ತೋಪೇ ಮಾಯವಾ­ಗಿದೆ. ಬೋರ್‌­ವೆಲ್‌ನ ­ನೀರು ರಾಸಾಯನಿ­ಕಗಳ ­ಜೊತೆ ­ಸೇರಿ ­ಮಣ್ಣಿನ ­ನೈಜ ಗುಣಗಳು ಸರ್ವನಾಶವಾ­ಗಿದೆ. ­ಅಷ್ಟೇ ­ಅಲ್ಲದೆ ನಿಯತ­ವಾದ ­ಮಳೆಯೂ ­ಇಲ್ಲ. ಸುರಿದರೆ ಹುಚ್ಚ­ನಂತೆ ­ಸುರಿದು, ಇಲ್ಲವಾದರೆ ತಿಂಗಳುಗಟ್ಟಲೆ ­ಇರುವುದೇ ­ಇಲ್ಲ. ­ಅಣಬೆಯ ­ಆ ಪ್ರಪಂಚವೇ ­ಕೆಲವು ಹಳ್ಳಿಗ­ಳಿಗೆ ­ಈಗ ­ನೆನಪು ಮಾತ್ರ.

ಮೊದಲ ಮಳೆಯಲ್ಲಿ ­ಗುಡುಗು ­ಹುಟ್ಟಿ, ­ಬೆಳಗ್ಗೆ ­ಬಿಸಿಲು ಹೊಡೆದರೆ ­ಅಣಬೆ ­ಏಳುತ್ತವೆ, ಗುಡುಗಿಗೆ ­ನೆಲ ಬಾಯಿ ಬಿಡುತ್ತದೆ, ­ಎಳೆ ಬಿಸಿ­ಲಿಗೆ ­ಅಣಬೆ ­ಮೊಳೆತು ಮೇಲೇರುತ್ತವೆ ­ಎಂದು ­ಗುಂಡ ಉಪದೇ­ಶಿ­ಸಿದ್ದ. ­ಬೆಳಗ್ಗೆ ­ಎದ್ದವನೇ ­ನನ್ನ ­ಬಾಲ್ಯದ ­ಅಣಬೆ ರುಚಿಯನ್ನು ­ನಾಲಿಗೆಯ ರಸಗ್ರಂ­ಥಿಗಳಲ್ಲೆಲ್ಲಾ ಕಲ್ಪಿ­ಸಿಕೊಂಡು ­ಗುಂಡ ­ತೋರಿಸಿದ್ದ ­ಪ್ರತಿಯೊಂದು ­ಜಾಗವನ್ನೂ ಕಾತುರದಿಂದ ಹುಡುಕಿದೆ.

­ಮಳೆ ನಿಂತು ಬಿಸಿಲೂ ಬಿದ್ದಿದ್ದರಿಂದ ­ಅಣಬೆ ­ಏಳಲೇಬೇಕು ­ಎಂಬುದ ­ನನ್ನ ­ಒಳ ಮನಸ್ಸಿನ ­ತರ್ಕ. ­ಆದರೆ ­ಎಲ್ಲಿಯೂ ಅಣಬೆ ­ಇಲ್ಲ. ಕವಿಶೈ­ಲದ ­ದಟ್ಟ ಕಾನ­ನದ ಜಾಗಗಳಲ್ಲೂ ­ಅಣಬೆ ­ಎದ್ದಿಲ್ಲ. ನಿರಾ­ಸೆಯೋ ­ನಿರಾಸೆ. ಕವಿಶೈ­ಲದಲ್ಲಿ ­ಅಣಬೆ ಹುಡುಕುತ್ತಿರುವಾಗ ­ಮರದ ಬುಡದಲ್ಲಿದ್ದ ­ಹಸಿರು ಹುಲ್ಲಿನಲ್ಲಿ ­ಕುಂತಿದ್ದ ­ಹಸಿರು ­ಹಾವೊಂದು ­ನನ್ನ ­ಹೆಜ್ಜೆ ಸಪ್ಪಳಕ್ಕೆ ­ಚಿಮ್ಮಿ ರಾಕೆಟ್ ವೇಗದಲ್ಲಿ ­ಮರದ ­ನೆತ್ತಿಗೆ ­ಏರಿತು.

­ಒಂದು ­ಕ್ಷಣ ­ಬೆಚ್ಚಿದ ­ನಾನು ­ಆ ­ಹಸಿರು ­ಹಾವಿನ ಸೌಂದರ್ಯವನ್ನೇ ­ನೋಡುತ್ತಾ ­ಅಣಬೆ ­ಸಿಗದ ನಿರಾ­ಸೆಯಲ್ಲಿ ­ಎಷ್ಟು ಹೊತ್ತು ನಿಂತಿದ್ದೆನೋ, ­ನನಗೇ ­ಗೊತ್ತಿಲ್ಲ. ­ಮಧ್ಯಾಹ್ನ ­ಮೂರು ಗಂಟೆಯವರೆಗೆ ­ಬಿಡುವು ­ಕೊಟ್ಟಿದ್ದ ­ಮಳೆ ­ಮತ್ತೆ ಆರಂಭವಾಯಿತು. ­ಜಡಿ ಮಳೆ­ಯಾಗಿ ­ಸುರುವಾಗಿ ಬರ­ಬರುತ್ತಾ ­ಒಂದೇ ­ಸಮನೆ ಜೋರಾ­ಗಿಯೇ ಅಪ್ಪಳಿ­ಸತೊಡಗಿತು. ನನ್ನ ­ಕಚೇರಿಯ ­ಎದುರು ಭಾಗದಲ್ಲಿ ­ನಾನು ­ಕುಂತಿದ್ದ ಜಾಗ­ದಿಂದಲೇ ­ಮಳೆಯ ವೈಭ­ವವನ್ನು ­ನೋಡುವ ­ಅದೃಷ್ಟ ನನ್ನದಾ­ಗಿತ್ತು.

­ಅಂದು ­ರಾತ್ರಿ ­ಸುಮಾರು ­ಎಂಟು ಗಂಟೆಯವರೆಗೆ ‘­ಕುವೆಂಪು ­ತಂತ್ರಾಂಶ’­ಕ್ಕೆ ಸಂಬಂ­ಧಿ­ಸಿದಂತೆ ­ಮುಂದಿನ ­ವಾರ ನಡೆಯಲಿದ್ದ ಪೂರ್ವಭಾವಿ ­ಸಭೆಯ ಸಿದ್ಧತೆಗಳನ್ನು ­ಮುಗಿಸಿ, ­ನಂತರ ­ಟಾರ್ಚ್‌ ­ಹಿಡಿದು ಗಡಿ­ಕಲ್ಲಿನ ­ಕಡೆಗೆ ­ನಾನು ­ಮತ್ತು ಗುಂಡ ­ಇಬ್ಬರೂ ಹೊರಟೆವು. ಯಾಕೆಂದರೆ ಗೆಸ್ಟ್‌­ ಹೌ­ಸಿಗೇ ­ಊಟ ­ತಂದು ನೀಡುತ್ತಿದ್ದ ­ಕವಿ ­ಮನೆಯ ­ಕ್ಯಾಂಟಿನ್ನಿನ ಸುಧಾಕರ್ ­ಅಂದು ­ರಜೆ ­ಹಾಕಿದ್ದ.

ಅನಿವಾರ್ಯವಾಗಿ ಒಂದೂ­ವರೆ ­ಕಿ.ಮೀ. ­ನಡೆದು ಗಡೀ­ಕಲ್ಲಿನ ­ಏಕೈಕ ಹೋಟೆಲ್‌­ನಲ್ಲಿ ­ಊಟ ಮಾಡಬೇ­ಕಿತ್ತು. ಕವಿಶೈಲಕ್ಕೆ ­ಹೋಗುವ ­ರಸ್ತೆಯ ತಿರುವಿಗೆ ಅಭಿಮುಖ­ವಾ­ಗಿರುವ ­ತೇಜಸ್ವಿ ­ಸ್ಮಾರಕವನ್ನು ­ದಾಟಿ ­ಮುಂದೆ ಹೋಗುತ್ತಿದ್ದೆವು. ­ಒಂದು ­ಕಿರು ಹಳ್ಳಕ್ಕೆ ಕಟ್ಟಿರುವ ­ಪುಟ್ಟ ­ಸೇತುವೆಯೊಂದು ಅಲ್ಲಿ ಸಿಗುತ್ತದೆ. ­

ಆ ­ಸೇತುವೆ ­ಮೇಲೆ ಹೋಗುತ್ತಿದ್ದಂತೆ ­ನೀರು ­ಧುಮ್ಮಿಕ್ಕುವ ­ಸದ್ದು ­ಕಿವಿಗೆ ಹೊಡೆದಂತೆ ಕೇಳಿ­ಬರುತ್ತಿತ್ತು. ­ಅದು ­ಚಿಕ್ಕ ಹಳ್ಳವಾದರೂ ­ಹೆಚ್ಚಿದ ­ಮಳೆಯ ಕಾರ­ಣಕ್ಕೆ ರಭ­ಸ­ದಿಂದ ಬರುತ್ತಿದ್ದ ­ನೀರು, ­ಅಡ್ಡ ­ಸಿಗುವ ಬಂಡೆಗಲ್ಲೊಂದಕ್ಕೆ ­ಹೊಡೆದು ಚಿಮ್ಮುತ್ತಿದ್ದುದರಿಂದ ­ಅಂಥ ­ಸದ್ದು ಬರುತ್ತಿತ್ತು. ­

ನಾನು ­ಮತ್ತು ­ಗುಂಡ ­ಇಬ್ಬರೂ ­ನಮ್ಮ ­ಬ್ಯಾಟರಿ ಬೆಳ­ಕಿ­ನಲ್ಲಿಯೇ ­ಆ ­ದೃಶ್ಯವನ್ನು ­ನೋಡಿ ಮುಂದುವ­ರಿದೆವು. ­ಹಾಗೇ ಮುಂದೆ ಎಡಭಾಗಕ್ಕೆ ­ಸಿಗುವ ಇಳಿಜಾ­ರಿನ ಗದ್ದೆಗಳಲ್ಲಿ ­ಜುಳುಜುಳು ಹರಿಯುವ ­ನೀರಿನ ನೀನಾದ ­ಕಿವಿಗೆ ­ಬಿತ್ತು. ­ಗದ್ದೆ ಬಯಲಿ­ನಲ್ಲಿ ­ಅಲ್ಲಲ್ಲಿ ­ಹತ್ತಾರು ಬ್ಯಾಟ­ರಿಗಳ ­ಮಿಂಚು ­ಬೆಳಕು ಸಣ್ಣ­ಸಣ್ಣ ಕಿರ­ಣಗಳಂತೆ ­ನಮ್ಮ ­ಕಣ್ಣಿಗೂ ಹೊಡೆಯುತ್ತಿತ್ತು. ­

ಆ ಬಿರುಮಳೆಯಲ್ಲಿ ­ಅದೆಂಥ ­ಬೆಳಕು ­ಎಂದು ಕುತೂ­ಹ­ಲ­ದಿಂದ ­ಗುಂಡನನ್ನು ­ಕೇಳಿದೆ. ‘ಅವರೆಲ್ಲ ­ಹತ್ತು ­ಮೀನು ಹಿಡಿಯೋ ­ಜನ ­ಸಾರು’ ­ಎಂದ. ಮುಂಗಾ­ರಿನ ­ಮೊದಲ ­ಮಳೆಗೆ ­ನಮ್ಮ ಕೆರೆ­ಯಿಂದಲೂ ­ನೀರಿಗೆ ­ವಿರುದ್ಧ ದಿಕ್ಕಿ­ನಲ್ಲಿ ­ಸಸ್ಲು ಮೀನುಗಳ ­ಯಾತ್ರೆಯನ್ನು ಚಿಕ್ಕಂ­ದಿ­ನಲ್ಲಿ ­ನಾನೂ ­ಕಂಡಿದ್ದೆ. ­ಊರಿನ ಬಳ­ಕೆಗಾಗಿ ­ಇದ್ದ ­ಸಣ್ಣ ­ಕೆರೆ ಬೇಸಿಗೆಗೆ ­ಪೂರಾ ಒಣಗದೇ ­ಇದ್ದ ಪಕ್ಷದಲ್ಲಿ ­ಮೂರು ­ನಾಲ್ಕು ವರ್ಷಗ­ಳಿಗೊಮ್ಮೆ ­ಮೀನು ಹತ್ತುತ್ತಿದ್ದವು. ­

ಊರ ­ಜನ ­ಕೊಡಮೆ ­ಮತ್ತು ­ಚಿಲುಮೆ ­ಎಂಬ ಸಾಧ­ನಗಳನ್ನು ­ಬಳಸಿ, ಕಿತ್ತಾಡುತ್ತಾ ­ಮೀನು ಹಿಡಿಯುತ್ತಿದ್ದರು. ಸಿಕ್ಕಿದ­ವರ ­ಸೀರುಂಡೆ. ಸಿಕ್ಕಿರುವ­ವ­ರಿಗೆ ­ಉಂಟು, ಇಲ್ಲದಿದ್ದರೆ ­ಇಲ್ಲ. ­ಮೀನು ­ಸಿಗದ ನತದೃಷ್ಟ­ರಿಗೆ ಸಂತೆಗಳಲ್ಲಿ ಸಿಗುತ್ತಿದ್ದ ಕರಿಮೀನೇ ಗತಿ­ಯಾಗುತ್ತಿತ್ತು.

­ಆದರೆ ­ಇಲ್ಲಿ ಹಾಗಿರ­ಲಿಲ್ಲ. ­ಗದ್ದೆ ಗದ್ದೆಗಳಲ್ಲಿ ­ಮೀನು. ಹಳ್ಳಕೊಳ್ಳ ­ಕೆರೆ ಕಟ್ಟೆಗಳಲ್ಲಿ ­ಅಡಗಿದ್ದ ಮೀನುಗಳೆಲ್ಲ ­ತಮ್ಮ ಸಂತಾನಾ­ಭಿವೃ­ದ್ಧಿಗಾಗಿ ­ಹೊಸ ­ನೀರಿನ ಜಾಡುಗಳನ್ನು ­ಹಿಡಿದು ಹೊರ­ಟಿವೆ! ­ಊಟ ­ಮಾಡಿ ­ನಂತರ ­ನಾವೂ ­ಈ ಗದ್ದೆಗಳ ಹತ್ತಿರ ­ಬರೋಣ ­ಎಂದು ಗುಂಡ­ನಿಗೆ ­ಹೇಳಿದೆ. ­ಗುಂಡ ­ಉತ್ಸಾಹದಿಂದ ­ಒಪ್ಪಿದ.

ವಾಸ್ತ­ವ­ವಾಗಿ ­ನಮ್ಮ ­ಗುಂಡನ ಜೀವ­ವೆಲ್ಲ ಗದ್ದೆಗಳಲ್ಲಿ ­ಹತ್ತು ­ಮೀನು ಹಿಡಿಯುವ­ವರ ಸಂಗಡವೇ ­ಇತ್ತು. ­ಅವನು ­ಅದನ್ನು ಬಾಯಿಬಿಟ್ಟು ­ಹೇಳಿಯೂ ­ಹೇಳಿದ. ‘­ನೀವು ­ಇವೊತ್ತು ­ಇಷ್ಟೊತ್ತು ಆಫೀಸಿ­ನಲ್ಲೇ ­ಉಳಿದ್ರಲ್ಲಾ ­ಸಾರು, ­ಇಲ್ದಿದ್ರೆ ­ನಿಮ್ಗೆ ­ಹೇಳಿ ರಾತ್ರಿ ­ಹನ್ನೆರಡು ಗಂಟೆ­ವರೆಗೆ ­ನಾನೂ ­ಮೀನು ­ಬೇಟೆಗೆ ­ಹೋಗೋದೇ ­ಸೈ ­ಆಗಿತ್ತು” ­ಎಂದ.

‘­ಅಲ್ಲಾ ­ಮಾರಾಯ ­ನನಗೇನು ­ಗೊತ್ತಿತ್ತು, ­ಇವೊತ್ತು ­ಮೀನು ­ಬೇಟೆ ­ಅಂತ, ­ನೀನು ಹೇಳಬೇಕಾ­ಗಿತ್ತು’ ­ಎಂದು ದಬಾಯಿಸಿದೆ. ‘­ಆದ್ರೂ ­ಕಾಲ ­ಮಿಂಚಿಲ್ಲ ­ನಡಿ’ ­ಎಂದು ಪ್ರೋತ್ಸಾ­ಹಿ­ಸಿದೆ. ಗಡಿ­ಕಲ್ಲಿನ ­ಶೆಟ್ಟರ ಹೋಟೆ­ಲಿ­ನಲ್ಲಿ ­ಉಂಡೆವೋ ಇಲ್ಲವೋ ­ಎನ್ನುವಂತೆ ­ಊಟದ ­ಶಾಸ್ತ್ರ ­ಮಾಡಿ ­ಓಡೋಡಿ ­ಬಂದೆವು. ­ನಾನು ­ಒಂದು ­ಗದ್ದೆ ಬದುವಿನ ­ಮೇಲೆ ­ನಿಂತೆ. ­ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ­ಅದನ್ನು ­ಲೆಕ್ಕಿಸದೆ, ­ಟಾರ್ಚ್‌ ಬೆಳ­ಕಿ­ನಲ್ಲಿ ಹೊಳೆಯುತ್ತಿದ್ದ ಮೀನುಗ­ಳಿಗೆ ­ದೊಣ್ಣೆಯಿಂದ ಹೊಡೆದು, ­ರಕ್ತ ಒಸರುವಂತೆ ­ಮಾಡಿ,

­ಅದು ಚಲಿ­ಸದಂತಾದಾಗ ­ಹಿಡಿದು ­ಬುಟ್ಟಿಗೆ ­ತುಂಬುತ್ತಿದ್ದರು. ­ಹತ್ತಾರು ­ಯುವಕರು ­ಮತ್ತು ­ಮಧ್ಯ ವಯಸ್ಕರ ­ಪಡೆಯೇ ­ಅಲ್ಲಿತ್ತು. ­ಇಡೀ ­ಗದ್ದೆ ­ಬಯಲು ರಣರಂಗ­ವಾ­ಗಿತ್ತು. ಮೀನುಗಳ ­ಸುಗ್ಗಿಯೇ ­ಸುಗ್ಗಿ. ಕಾಲುಕಾ­ಲಿಗೆ ಸಿಗುವಷ್ಟು ಮೀನುಗಳ ­ರಾಶಿ. ­ಉಡುಪಿಯ ­ಮಲ್ಪೆ ಬಂದ­ರಿ­ನಲ್ಲಿ ಬರುವಷ್ಟು ­ಮೀನಿನ ­ಕಮಟು ­ವಾಸನೆ ­ಮೂಗಿಗೆ ಬಡಿಯುತ್ತಿತ್ತು. ­ಯಾವ ­ಯಾವ ­ಬಗೆಯ ­ಮೀನುಗಳು? ಅಲ್ಲಿದ್ದ­ವ­ರಿಂದ ಹೆಸರುಗಳನ್ನು ಸಂಗ್ರ­ಹಿ­ಸಿದೆ. ­

ಸಸ್ಲು, ­ಗಿರಲು, ­ಕೊರುವ, ­ಕುಚ್ಚು, ­ಬಾಳೆ, ­ಮುಗುಡು, ­ಚೇಳು, ­ಕೊಳ್ಳೆ, ­ಗೊಚ್ಚಲು, ­ಮರುಗುಂಡು, ­ಕೆರ್ಸಿ, ­ಓಡಲು ­ಮುಂತಾದ ವಿಧ­ವಿಧ­ವಾದ ಮೀನುಗಳ ­ಶಿಖಾರಿ ­ಅಲ್ಲಿ ನಡೆ­ದಿತ್ತು. ­ಟಾರ್ಚ್‌ ಬೆಳ­ಕಿಗೆ ನಾಟ್ಯ­ವಾಡುತ್ತಾ ಮಿಂಚುತ್ತಿದ್ದ ದೊಡ್ಡ ­ಮೀನುಗಳು ಮರುಕ್ಷ­ಣಕ್ಕೆ ­ದೊಣ್ಣೆ ­ಏಟು ­ತಿಂದು ರಕ್ತಕಾರಿ ­ಮೂರ್ಚೆ ಬೀಳುತ್ತಿದ್ದವು. ಸಣ್ಣ ಮೀನುಗಳು ಚಿಲುಮೆ ಬಲೆಗೆ ಬಿದ್ದು ಸೆರೆಯಾಗುತ್ತಿದ್ದವು. ­

ಇದು ­ನೂರಾರು ವರ್ಷಗ­ಳಿಂದ ಸಂಪ್ರದಾಯದಂತೆ ­ನಡೆದು ­ಬಂದ ­ಪದ್ಧತಿ. ­ತಮ್ಮ ವಂಶಾ­ಭಿವೃ­ದ್ಧಿಗಾಗಿ ಹತ್ತುತ್ತಿದ್ದ ಲಕ್ಷಾಂತರ ಮೀನುಗಳಲ್ಲಿ ಶಿಖಾ­ರಿಕೆ ಸಿಗುತ್ತಿದ್ದುದು ­ಕೇವಲ ­ಶೇ. 20ರಷ್ಟು ­ಮಾತ್ರ. ­ಉಳಿದವು ­ಹಳ್ಳದ ಕೋಡಿ­ನಲ್ಲಿ, ­ಗದ್ದೆಯ ಬಿಲಗಳಲ್ಲಿ, ­ಮಣ್ಣಿನ ಪಸೆಯಲ್ಲಿ ­ಅಡಗಿ ­ಜೀವ ಉಳಿಸಿಕೊಳ್ಳುತ್ತ­ವಂತೆ. ­ಹಾಗೆ ­ಉಳಿದ ­ಮೀನುಗಳು ­ತಮ್ಮ ಗಬ್ಬದಲ್ಲಿರುವ ಕೋಟ್ಯಾಂತರ ­ತತ್ತಿಗಳನ್ನು ­ಹೊಸ ­ನೀರಿನ ರಕ್ಷಣಾತ್ಮಕ ಜಾಗಗಳಲ್ಲಿ ­ಇಟ್ಟು ­ಬಂದ ­ದಾರಿಯಲ್ಲಿ ಹಿಂತಿರುಗುತ್ತ­ವಂತೆ.

­ಗದ್ದೆಯ ತೋಡುಗಳಲ್ಲಿ, ­ಹಳ್ಳದ ­ಅಂಚಿನ ­ಸಣ್ಣ ­ಸಣ್ಣ ಮಡುಗಳಲ್ಲಿ, ­ನೀರು ­ತುಂಬಿದ ­ಹುಲ್ಲಿನ ಪಸೆಗಳಲ್ಲಿ ­ಹೀಗೆ ಎಲ್ಲಂದರಲ್ಲಿ ­ಮೀನಿನ ­ಮೊಟ್ಟೆಗಳು ­ತಮ್ಮ ­ಜಾಗ ಕಂಡುಕೊಳ್ಳುತ್ತವೆ. ಮಳೆಗಾ­ಲದಾದ್ಯಂತ ­ಅವು ಮರಿ­ಯಾಗಿ ಬೆಳೆಯುವ ­ಕ್ರಿಯೆ ನಡೆಯುತ್ತದೆ. ­ಅವಕ್ಕೆ ಚಲಿಸುವ ­ಶಕ್ತಿ ಬರುತ್ತಿದಂತೆ ­ಇಳಿ ­ನೀರಿನ ­ದಾರಿ ­ಕಂಡುಕೊಂಡು ­ಆ ­ನೀರು ­ಇಳಿಯುತ್ತಾ ­ಹೋದಂತೆ ­ಅವೂ ಪಯಣಿಸುತ್ತಾ ಹಳ್ಳಕೊಳ್ಳ ­ಕೆರೆ ಕಟ್ಟೆಗಳನ್ನು ಸೇರಿಕೊಳ್ಳುತ್ತವೆ. ­

ಇದೊಂದು ಜೀವಜಾ­ಲದ ನಿಯಮಿತ ­ಪ್ರಕ್ರಿಯೆ. ­ಕಲ್ಕುಳಿ ವಿಠ­ಲ­ಹೆಗ್ಡೆ ­ತಮ್ಮ ‘­ಮಂಗನ ಬ್ಯಾಟೆ’ ಕೃತಿಯಲ್ಲಿ ­ಈ ­ಹತ್ತು ಮೀನುಗಳ ­ಮತ್ತೊಂದು ರಹಸ್ಯವನ್ನು ­ಬಯಲು ಮಾಡುತ್ತಾರೆ. ಮೀನುಗಳ ಕಾಮ ಕೇಳಿಗೂ ­ಇದೇ ಸಂದರ್ಭ­ವಂತೆ.

ಮಳೆಗಾ­ಲದ ­ಮೂರು ­ತಿಂಗಳು ­ಆಹಾರ ­ತಿಂದು, ­ಮೊಟ್ಟೆ ­ಮರಿ ­ಮಾಡಿ ­ಒಂಬತ್ತು ­ತಿಂಗಳು ­ಭೂಮಿಯ ­ಆಳದ ಅಜ್ಞಾತ­ಸ್ಥಳದಲ್ಲಿ ­ಹುದುಗಿ ­ಕುಳಿತ ­ಏಡಿಕಪ್ಪೆ, ­ನೀರುಳ್ಳಿ ­ಹಾವು ಮತ್ತಿತರ ­ಜೀವಿಗಳು, ಬೇಸಿಗೆಯಲ್ಲಿ ಸ್ಮಶಾ­ನದಂತೆ ಬೆಂಗಾಡಾ­ಗಿದ್ದ ­ಗದ್ದೆ ಬಯಲಲ್ಲಿ ­ಮಳೆ ­ನೀರು ­ನಿಂತ ­ಕೂಡಲೇ ­ಎಲ್ಲೆಂದರಲ್ಲಿ ಗೋಚ­ರಿಸುತ್ತವೆ. ­ಮಳೆ ­ಬಂದಾಗ ­ಒಂದೇ ­ಬಾರಿಗೆ ­ಕಾಣುವ ­ಇವೆಲ್ಲಾ ಎಲ್ಲಿಂದ­ಬಂದ್ವು, ­ಇಷ್ಟು ­ದಿನ ­ಎಲ್ಲಿ ­ಇದ್ವು ­ಎನ್ನುವುದೇ ­ವಿಸ್ಮಯ.

­ನಿನ್ನೆ ­ಇಲ್ಲದವು ­ಇವತ್ತು ಆಕಾ­ಶ­ದಿಂದ ­ಬಿದ್ದವೇನು ­ಅಂದುಕೊಳ್ಳಬೇಕು. ­ಬತ್ತಿದ ಹೊಳೆಯಲ್ಲಿ ಹೊಟ್ಟೆತುಂಬಾ ­ಮೊಟ್ಟೆ ­ಕಟ್ಟಿಕೊಂಡು ಈಜಾಡುತ್ತಿದ್ದ ­ಮೀನುಗಳು ನೆರೆಮಳೆ­ಯಾಗುತ್ತಿದ್ದಂತೆ ಬಯಲಿಗೆ ಬೆದೆ­ಯಾಡಲು ­ಬರ‌್ತವೆ. ­ಒಂದು ಹೆಣ್ಣಿನೊಂ­ದಿಗೆ ­ನಾಲ್ಕಾರು ­ಗಂಡು ­ಮೀನುಗಳು ಹಲುಬಿನ ದನಗಳಂತೆ ­ಮೈಮೇಲೆ ಎಚ್ಚರ­ವಿಲ್ಲದೆ ­ಹಾರಿಕೊಂಡು ­ಏರಿಕೊಂಡು ­ತಮ್ಮ ­ಜನ್ಮ ­ಸಾರ್ಥಕ ಮಾಡಿಕೊಳ್ಳೋಕೆ ­ಪೈಪೋಟಿ ಮಾಡ್ತಿರ‌್ತವೆ.

­ದುರಂತ ­ನೋಡಿ, ­ಹೀಗೆ ­ಮೀನು ­ದ್ದೆ ಬಯಲಿಗೆ ­ಬರೋದು ಹದಮಳೆ ನೆರೆಮಳೆ­ಯಾದರೆ ­ಮಾತ್ರ. ಹೊಟ್ಟೆಯೊಳಗೆ ­ತನ್ನಷ್ಟೇ ­ಗಾತ್ರದ ­ತತ್ತಿಚೀಲ ಕಟ್ಟಿಕೊಂ­ಡಿದ್ದರೂ ­ಮಳೆ ಹದ­ವಾಗದೆ ­ಗಂಡು ­ಹೆಣ್ಣು ಸೇರುವು­ದಿಲ್ಲ. ಕೈಕಾಲುಗ­ಳಿಲ್ಲದ ­ಮೀನುಗಳು ನೀರಿ­ನಲ್ಲಿ ­ಹೇಗೆ ಸೇರುತ್ತವೆ ­ಯೋಚಿಸಿ, ­ಅಂದೆಂಥ ವಿಕಾ­ಸದ ­ವಿಸ್ಮಯ ­ನೋಡಿ. ನೀರಿ­ನಲ್ಲಿ ­ಮೀನು ­ಒಂದರ ­ಮೇಲೆ ­ಒಂದು ­ಸವಾರಿ ­ಮಾಡಲು, ­ತಬ್ಬಿಕೊಳ್ಳಲು ­ಸಾಧ್ಯವೇ ­ಇಲ್ಲ. ­ಹೆಣ್ಣು ­ಮೀನಿನ ­ಹೊಟ್ಟೆ ­ಅಡಿ ­ಇರುವ ಜನನೇಂದ್ರಿಯವನ್ನು ­ಗಂಡು ­ಮೀನಿನ ­ಮೂಗಿನ ತುದಿಯಿರುವ ಪುರುಷಕಾಯ ­ಸೇರಬೇಕು ­ಎಂಥ ­ಅದ್ಭುತ ­ಅಲ್ಲವೇ! ­ಅದಕ್ಕೇ ­ಒಂದು ­ಹೆಣ್ಣು ­ಮೀನಿನ ­ಜೊತೆ ಲೆಕ್ಕವಿಲ್ಲದಷ್ಟು ­ಗಂಡು ­ಮೀನುಗಳು ಜಡೆ­ಕಟ್ಟಿ ಎಚ್ಚರ­ವಿಲ್ಲದೇ ಓಡುತ್ತವೆ. ­

ಮೊಟ್ಟೆ ­ಇಡುವ ­ಯಾವುದೇ ­ಪ್ರಾಣಿ ­ಆಗಲಿ, ­ಮೊಟ್ಟೆ ­ಮರಿ ­ಮಾಡಲು ­ಸೂಕ್ತ ವಾತಾ­ವರಣ, ­ರಕ್ಷಣೆ ­ಸಿಗದೆ ಸೇರುವು­ದಿಲ್ಲ; ­ಅವುಗಳ ­ಮೊಟ್ಟೆ ಮರಿ­ಯಾಗುವುದೂ ­ಇಲ್ಲ. ಗೂಡುಕಟ್ಟದೆ ­ಹಕ್ಕಿಗಳು ಸೇರುವು­ದಿಲ್ಲ, ­ಮೊಟ್ಟೆ ­ಇಡುವುದೂ ­ಇಲ್ಲ. ಹಾಗಾ­ಗಿಯೇ ಪ್ರಾಣಿಗಳಲ್ಲಿ ವೇಶ್ಯಾ­ವಾ­ಟಿಕೆ, ­ಅತ್ಯಾಚಾರ ನಡೆಯುವು­ದಿಲ್ಲ! ­ಅಷ್ಟು ಮಾತ್ರ­ವಲ್ಲ, ­ಸೂಕ್ತ ಪರಿ­ಸರ ­ಒದಗಿ ಬರ­ದಿದ್ದರೆ, ­ಮೀನಿನ ­ಮೊಟ್ಟೆ ಮರಿ­ಯಾಗದೆ ಅಂತರ್‌ ದ­ಹ­ನ­ವಾಗಿ ಹೊಟ್ಟೆಯೊಳಗೇ ­ಕೊಬ್ಬಾಗಿ ಪರಿ­ವರ್ತ­ನೆ­ಯಾಗುತ್ತದೆ.

ಪ್ರಾರಂಭದ ­ಮಳೆ ಭರ­ವ­ಸೆಯಂತೆ ಬಿರುಸಾಗಿ ­ಬಿದ್ದರೆ ಮಲೆ­ನಾ­ಡಿನ ­ಗದ್ದೆ ­ಬಯಲು ­ಎಲ್ಲವೂ ಜಲಚರಗಳ ಮರಿಗಳ ­ತೊಟ್ಟಿಲು. ­ಸೂಕ್ತ ­ಕಾಲಕ್ಕೆ ಸರಿ­ಯಾಗಿ ­ನೆರೆ ­ಮಳೆ ಬರ­ದಿದ್ದರೆ ­ಯಾವುದೇ ­ಮೀನು, ­ಕಪ್ಪೆ, ­ಏಡಿಗಳು ಮರಿ­ಮಾಡುವು­ದಿಲ್ಲ; ­ಮೊಟ್ಟೆಗಳು ಮರಿ­ಯಾಗುವುದೇ ­ಇಲ್ಲ, ­ಜೀವ ಬರುವುದೇ ­ಇಲ್ಲಾ, ­ಎಂಥಾ ­ದುರಂತ!

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: