’ಕುಡಿಯೊಡೆದ ಕನಸುಗಳಿಗೆ ನಾನು ತೊಟ್ಟಿಲು ತೂಗಿ…’ – ಶಾಂತಿ ಕೆ ಅಪ್ಪಣ್ಣ

ಶಾಂತಿ ಕೆ ಅಪ್ಪಣ್ಣ

ಹೊರಟು ನಿಂತ ಆ ಘಳಿಗೆಯಲ್ಲಿ
ಖಾಲಿ ಬಿಂದಿಗೆ ಮನಸು …
ತುಟಿಯ ಹೊಸ್ತಿಲಲಿ ನಿಂತ
ಅಯಾಚಿತ ಬಿಕ್ಕು….
ಕಣ್ಣ ಬಟ್ಟಲಲಿ ಸದ್ದಿಲ್ಲದೇ ಇಂಗಿತ್ತು ..
ಬಿಗುಮಾನದ ಕಣ್ಣ ಹನಿ
 
ಗುಲ್ಮೊಹರ್ ಮರದ ಅಡಿ
ಚಪ್ಪರದಂತೆ ನೆರಳು ..
ಹೆಣೆ ನಾಗರ ಜೋಡಿ..,
ಬೆಸೆದ ಬೆರಳು ..
ಗೌರಿಕೆರೆಯ ಮೌನದಂಡೆಯಲಿ
ಮಾತಿಗಿಳಿದ ಉಂಗುರದ ಹರಳು

ಕಲೆ : ವೆಂಕಟ್ರಮಣ ಭಟ್

ನನ್ನೆದೆಯ ಹಾಡು
ನಿನ್ನ ತುಟಿಯಲಿ ಹೊಮ್ಮಿ
ಕುಡಿಯೊಡೆದ ಕನಸುಗಳಿಗೆ
ನಾನು ತೊಟ್ಟಿಲು ತೂಗಿ
ಗಮ್ಯ ಮಹಾ ಶರಧಿ
ಬದುಕು ಬಣ್ಣದ ನದಿ
ಅರೆ ,ಬದಲಿಸಿತು ಹೇಗೆ ದಿಕ್ಕು ?
 
 
ನಾವೆ ಮುರಿದು ಹಾಯಿ ಹರಿದು
ಇಬ್ಬರ ತೀರದಲೂ ಸ್ಪಷ್ಟ
ಮೊಳೆತೆದ್ದ ಹಮ್ಮಿನ ಗೋಡೆ
ಕೆಡವಿ ಕೆಳಚೆಲ್ಲಿದರೆ ..
ಆಗಬಹುದು ಸೇತುವೆ ..
ಆದರೂ…..
ಅಹಂಕಾರದ ಬೇಲಿ ..
ದಾಟುವುದೆಷ್ಟು ಕಷ್ಟ
 

‍ಲೇಖಕರು avadhi

August 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Swarna

    “ಗುಲ್ಮೊಹರ್ ಮರದ ಅಡಿ ಚಪ್ಪರದಂತೆ ನೆರಳು .. ಹೆಣೆ ನಾಗರ ಜೋಡಿ..,ಬೆಸೆದ ಬೆರಳು ..”
    ಸೆಳೆದ ರೂಪಕ. ‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ‘
    ಚೆನ್ನಾಗಿದೆ

    ಪ್ರತಿಕ್ರಿಯೆ
  2. Shreepad Hegde

    Very good poem I have read recently. Hope to read some more good poem from the poet.

    ಪ್ರತಿಕ್ರಿಯೆ
  3. Anonymous

    moletedda hammina gode, kedavi kelachellidare… aagabahude sethuve… Excellent!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: