ಶಾಂತಿ ಕೆ ಅಪ್ಪಣ್ಣ
ಹೊರಟು ನಿಂತ ಆ ಘಳಿಗೆಯಲ್ಲಿ
ಖಾಲಿ ಬಿಂದಿಗೆ ಮನಸು …
ತುಟಿಯ ಹೊಸ್ತಿಲಲಿ ನಿಂತ
ಅಯಾಚಿತ ಬಿಕ್ಕು….
ಕಣ್ಣ ಬಟ್ಟಲಲಿ ಸದ್ದಿಲ್ಲದೇ ಇಂಗಿತ್ತು ..
ಬಿಗುಮಾನದ ಕಣ್ಣ ಹನಿ
ಗುಲ್ಮೊಹರ್ ಮರದ ಅಡಿ
ಚಪ್ಪರದಂತೆ ನೆರಳು ..
ಹೆಣೆ ನಾಗರ ಜೋಡಿ..,
ಬೆಸೆದ ಬೆರಳು ..
ಗೌರಿಕೆರೆಯ ಮೌನದಂಡೆಯಲಿ
ಮಾತಿಗಿಳಿದ ಉಂಗುರದ ಹರಳು
ನನ್ನೆದೆಯ ಹಾಡು
ನಿನ್ನ ತುಟಿಯಲಿ ಹೊಮ್ಮಿ
ಕುಡಿಯೊಡೆದ ಕನಸುಗಳಿಗೆ
ನಾನು ತೊಟ್ಟಿಲು ತೂಗಿ
ಗಮ್ಯ ಮಹಾ ಶರಧಿ
ಬದುಕು ಬಣ್ಣದ ನದಿ
ಅರೆ ,ಬದಲಿಸಿತು ಹೇಗೆ ದಿಕ್ಕು ?
ನಾವೆ ಮುರಿದು ಹಾಯಿ ಹರಿದು
ಇಬ್ಬರ ತೀರದಲೂ ಸ್ಪಷ್ಟ
ಮೊಳೆತೆದ್ದ ಹಮ್ಮಿನ ಗೋಡೆ
ಕೆಡವಿ ಕೆಳಚೆಲ್ಲಿದರೆ ..
ಆಗಬಹುದು ಸೇತುವೆ ..
ಆದರೂ…..
ಅಹಂಕಾರದ ಬೇಲಿ ..
ದಾಟುವುದೆಷ್ಟು ಕಷ್ಟ
“ಗುಲ್ಮೊಹರ್ ಮರದ ಅಡಿ ಚಪ್ಪರದಂತೆ ನೆರಳು .. ಹೆಣೆ ನಾಗರ ಜೋಡಿ..,ಬೆಸೆದ ಬೆರಳು ..”
ಸೆಳೆದ ರೂಪಕ. ‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ‘
ಚೆನ್ನಾಗಿದೆ
so nice
Very good poem I have read recently. Hope to read some more good poem from the poet.
moletedda hammina gode, kedavi kelachellidare… aagabahude sethuve… Excellent!!!
thanks all of you ……