ಎಂ ಎಸ್ ರುದ್ರೇಶ್ವರ ಸ್ವಾಮಿ
ಜೋಗಿ…
ಅದು ಆಷಾಡ ಶನಿವಾರ ಸಂಜೆ
ಶ್ರಾವಣ ಕಾಲಿಡಲು ನಾಲ್ಕೇದಿನ ಬಾಕಿ…
ಕಾಯುವುದೇ ಶ್ರಾವಣಕ್ಕೆ ಮಾತಿನ ಮಳೆಗೆ ಅಂಬಿಕಾತನಯದತ್ತನ
ಸ್ಮರಣೆಗೆ? ಕೊಂಚ ದಣಿವು ಮಾತಿನ ಹಕ್ಕಿಗೆ
ಯಾಕೋ ಗೂಡಿನ ಸೆಳೆತ ತಳಮಳ ಎದೆಯೊಳಗೆ;
ಆದರೂ, ಮಾತಿನ ಗುಂಗು ಗುಂಗಿಯಾಗಿ
ರಂಗೇರುತ್ತಿದ್ದಂತೆ, ಕಾಲನನ್ನು ತಡೆದು
ಬದಿಗೆ ನಿಲ್ಲಿಸಿ ಮಾತೇ-ಮಾತು…
ಇಡಿಯಾಗಿ ಹಿಡಿದಿಡುವುದು ಹೇಗೆ ಜೋಗಿಯನ್ನು
ನಾನು-ನೀನು ಇರುವತನಕ? ಪ್ರಶ್ನೆ ಕೇಳುತ್ತ
ಮತ್ತೆ ಮಾತು ಮಾತಿನರ್ಥದ ಹುಡುಕಾಟ
ದ್ವಂದ್ವವಿಲ್ಲದ ಜಗದಲ್ಲಿ ಭಾಷೆಗೆಲ್ಲಿದೆ ಅರ್ಥ ಎನ್ನುವ ತರ್ಕ,
ಅರ್ಥಕ್ಕೊಂದು ಅರ್ಥವಿದೆಯೇ, ಎಂಬುವ ಜಿಜ್ಞಾಸೆ
ನಾಳೆಯ ಹಂಗೇ ಇಲ್ಲದ ಜೋಗಿ ಜಂಗಮಗೆ.
ಎಲ್ಲವೂ ಮುಂಚೆಯೇ ಗೊತ್ತಿದ್ದಂತೆ ಮಾತು
ಒಮ್ಮೊಮ್ಮೆ ಅವಧೂತನಂತೆ ಎಲ್ಲವನ್ನು ಮುಟ್ಟಿ
ಅನುಭವಿಸಿದಂತೆ. ಕ್ಷಣ-ಕ್ಷಣವೂ ಅನುಸಂಧಾನ,
ಬದುಕಿನ ಕೊನೆ ತಲುಪಿದಂತ ಧಾವಂತ.
ಈ ಕ್ಷಣದ ಸತ್ಯ ಈಗಲೇ ಹೇಳಿ ಹೋಗುವ ತವಕ
ಏನು ಕಾದಿದೆಯೋ ನಾಳೆ ಯಾರಿಗೆ ಗೊತ್ತು?
ಎಲ್ಲೋ ಕೋಗಿಲೆ ಹಾಡುತ್ತಿದೆ ಕೇಳಿಸುತ್ತಿದೆಯೇ?
ಮೂರು ಬಾರಿ ಅದೇ ಪ್ರಶ್ನೆ. ಗೂಬೆಯೂ
ದನಿಗೂಡಿಸಬಹುದು ತಾಳಿ ಎಂದು ಹೇಳಿ,
ಮಗುವಿನಂತೆ ನಕ್ಕು ಎದೆ ಒತ್ತಿಕೊಳ್ಳುತ್ತ, ಸಾವನ್ನು
ಮಾತಿನಿಂದಲೇ ಗೆದ್ದು, ಖೆಡ್ಡಕ್ಕೆ ಕೆಡವಿ ಮರೆಯಲ್ಲಿ ನಿಂತು-
ನೋಡಿ ನಕ್ಕು, ನಗುನಗುತ್ತ ನೇಪಥ್ಯಕ್ಕೆ ಸರಿದುಹೋದ
ಆ ಮಾತಿನ ಮಾಯಕಾರ. ಸುರಿಯುತ್ತಿದೆ
ಈಗ ನೆನೆಯುತ್ತ ಅವನನ್ನು ಶ್ರಾವಣದ ಮಳೆ.
( 7.08.10 ರಂದು, ಕೀರಂ ಅವರ ಕಟ್ಟಕಡೆಯ ಉಪನ್ಯಾಸ ಕೇಳಿ…)
ಚೆನ್ನಾಗಿದೆ.
very nice. i have seen him very colsely, he was d daily visiter to my father’s house. 1965-67. i was in school. i he was full of live, he was di M.A. we always use to like his smile and his way og laughing stayle. after i completed my kannada Hons, i met him some time. 1972. after that i never met him. when my father was there i use to meet him 365 in our his. he use to share Rava dosa with my father daily at night if he did’t come that day we use to get his share. we school going children those days, we use to pray, Oh God, please dont send Nagaraja today. so that we will get Rawa dosa from our father’s plate!
gurugale thumba chennagide ದ್ವಂದ್ವವಿಲ್ಲದ ಜಗದಲ್ಲಿ ಭಾಷೆಗೆಲ್ಲಿದೆ ಅರ್ಥ ಎನ್ನುವ ತರ್ಕ,
ಅರ್ಥಕ್ಕೊಂದು ಅರ್ಥವಿದೆಯೇ, ಎಂಬುವ ಜಿಜ್ಞಾಸೆ
ನಾಳೆಯ ಹಂಗೇ ಇಲ್ಲದ ಜೋಗಿ ಜಂಗಮಗೆ. nannage hidisida salugalu