ಕಿವಿಗೆ ಇಂಪಾಗುವ ಹಾಗೆ..

     

  ನವನೀತ ರಶ್ಮಿಕಾ

ನೆನಪಾಗುವರು 

ನೆನಪಾಗುವರು ಇವರು
ಮಿಡಿದ ಪ್ರತಿ ಎದೆಬಡಿತದಿ ||

ಬಯಲು ಸೀಮೆಯ ಕುವರನಾಗಿ
ಹುಟ್ಟುತಲಿ; ಬೆಳೆದರು
ದೇಶದ ಮೂಲೆ ಮೂಲೆಯ
ಉದ್ದಗಲಕ್ಕೂ
ತನ್ನ ಛಾಯೆಯ ಆವರಿಸುತಾ,
ಕಟ್ಟಿದ ಪ್ರತಿ ಕವಿತೆ
ಕಿವಿಗೆ ಇಂಪಾಗುವ ಹಾಗೆ
ಕುಳಿತೆ ಬಿಟ್ಟರು ಮನದಿ
ನೆನಪಾಗುವ ಹಾಗೆ

ದೂರದ ತೀರಕೆ ಕರೆಯುವರು
ಎಲ್ಲೆ ಇದ್ದರು ನಾವು |
ಬಿಡದೆ ಕಾಡುವ ಮನೋಙ್ಞ
ಕವಿತೆ ಮೂಲಕ
ಬದುಕಿನ ಸಾರವ ತೋರಿದರು
ನುಡಿಸುತ ನಾಕುತಂತಿಯ
ಮನದಿ ಕುಳಿತು
ನೆನಪಾಗುವ ಹಾಗೆ ||


ಹಂಚಿದರು ಸಮನಾಗಿ

ಜೀವನವ
ಸಾಹಿತ್ಯ ಸಂಸಾರಕ್ಕಾಗಿ|
ಅಡಗಿಸಿದರು ನೋವ
ನಗು ಮೊಗವ ತೋರುತ
ಹೊರಟರು ಕಷ್ಟ ಮರೆತು
ಸಮಾಧಾನದ ಅಸ್ತ್ರವ ಹಿಡಿದು
ಯಶಸ್ಸಿನ ಹಾದಿಯತ್ತ
ಮುಖ ಹಾಕಿ
ಮನದಿ ನೆನಪಗುವ ಹಾಗೆ ||

ವರವಾಗಿಯೇ ಹೋಯಿತು
ಅಂಬೆಯ ಮನದಲ್ಲಿ
ನೆನೆದು ಬರೆದ ಕೃತಿಗೆ
ವರಕವಿಯಾಗುವ ಹಾಗೆ
ನೆನಪಾಗೆ ಇರುವರು
ಕೊನೆಯವರೆಗೂ
ನಮ್ಮ ನಿಮ್ಮ ಮನದೊಳಗೆ
ಅಂಬೆ ಮುದ್ದು ಕಂದ
ಅಂದತ್ತರಾಗಿ…!
ಅಂಬಿಕಾತನಯದತ್ತರಾಗಿ…!

‍ಲೇಖಕರು avadhi

June 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prakash konapur

    ನವನೀತ ರಶ್ಮಿಕಾ ಅವರ ಎರಡೂ ಕವಿತೆಗಳು ಅತ್ಯಂತ ಸುಂದರವಾಗಿವೆ ದ.ರಾ.ಬೇಂದ್ರೆ ಯವರ ಕುರಿತು ಅತ್ಯಂತ ಸಮರ್ಥವಾಗಿ ಕಾವ್ಯದಲ್ಲಿ ಚಿತ್ರಿಸಿದ್ದಾರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: