ನವನೀತ ರಶ್ಮಿಕಾ
ನೆನಪಾಗುವರು
ನೆನಪಾಗುವರು ಇವರು
ಮಿಡಿದ ಪ್ರತಿ ಎದೆಬಡಿತದಿ ||
ಬಯಲು ಸೀಮೆಯ ಕುವರನಾಗಿ
ಹುಟ್ಟುತಲಿ; ಬೆಳೆದರು
ದೇಶದ ಮೂಲೆ ಮೂಲೆಯ
ಉದ್ದಗಲಕ್ಕೂ
ತನ್ನ ಛಾಯೆಯ ಆವರಿಸುತಾ,
ಕಟ್ಟಿದ ಪ್ರತಿ ಕವಿತೆ
ಕಿವಿಗೆ ಇಂಪಾಗುವ ಹಾಗೆ
ಕುಳಿತೆ ಬಿಟ್ಟರು ಮನದಿ
ನೆನಪಾಗುವ ಹಾಗೆ
ದೂರದ ತೀರಕೆ ಕರೆಯುವರು
ಎಲ್ಲೆ ಇದ್ದರು ನಾವು |
ಬಿಡದೆ ಕಾಡುವ ಮನೋಙ್ಞ
ಕವಿತೆ ಮೂಲಕ
ಬದುಕಿನ ಸಾರವ ತೋರಿದರು
ನುಡಿಸುತ ನಾಕುತಂತಿಯ
ಮನದಿ ಕುಳಿತು
ನೆನಪಾಗುವ ಹಾಗೆ ||
ಹಂಚಿದರು ಸಮನಾಗಿ
ಜೀವನವ
ಸಾಹಿತ್ಯ ಸಂಸಾರಕ್ಕಾಗಿ|
ಅಡಗಿಸಿದರು ನೋವ
ನಗು ಮೊಗವ ತೋರುತ
ಹೊರಟರು ಕಷ್ಟ ಮರೆತು
ಸಮಾಧಾನದ ಅಸ್ತ್ರವ ಹಿಡಿದು
ಯಶಸ್ಸಿನ ಹಾದಿಯತ್ತ
ಮುಖ ಹಾಕಿ
ಮನದಿ ನೆನಪಗುವ ಹಾಗೆ ||
ವರವಾಗಿಯೇ ಹೋಯಿತು
ಅಂಬೆಯ ಮನದಲ್ಲಿ
ನೆನೆದು ಬರೆದ ಕೃತಿಗೆ
ವರಕವಿಯಾಗುವ ಹಾಗೆ
ನೆನಪಾಗೆ ಇರುವರು
ಕೊನೆಯವರೆಗೂ
ನಮ್ಮ ನಿಮ್ಮ ಮನದೊಳಗೆ
ಅಂಬೆ ಮುದ್ದು ಕಂದ
ಅಂದತ್ತರಾಗಿ…!
ಅಂಬಿಕಾತನಯದತ್ತರಾಗಿ…!
ನವನೀತ ರಶ್ಮಿಕಾ ಅವರ ಎರಡೂ ಕವಿತೆಗಳು ಅತ್ಯಂತ ಸುಂದರವಾಗಿವೆ ದ.ರಾ.ಬೇಂದ್ರೆ ಯವರ ಕುರಿತು ಅತ್ಯಂತ ಸಮರ್ಥವಾಗಿ ಕಾವ್ಯದಲ್ಲಿ ಚಿತ್ರಿಸಿದ್ದಾರೆ