ಕೆ ಎಸ್ ಪರಮೇಶ್ವರ್ ಅವಧಿಯ ಓದುಗರಿಗೆ ಪರಿಚಿತ. ತೇಜಸ್ವಿಯವರ ಬೆನ್ನು ಬಿದ್ದು ರೂಪಿಸಿದ ‘ತೇಜಸ್ವಿಯನ್ನು ಹುಡುಕುತ್ತಾ..’ ಅಂಕಣ ನೀವೆಲ್ಲರೂ ಓದಿದ್ದೀರಿ
ಈಗ ಪರಮೇಶ್ವರ್ ಹಾಗೂ ಅವರ ಪತ್ನಿ ಸವಿತಾ ಆವರಸಂಗ್ ಇಬ್ಬರೂ ಸೇರಿ ಸಾಹಿತಿಗಳನ್ನು ಪರಿಚಯಿಸುವ ವಿಡಿಯೋ ಸರಣಿಯನ್ನು ಆರಂಭಿಸಿದ್ದಾರೆ. ನೋಡಿ ಪ್ರತಿಕ್ರಿಯಿಸಿ.

‘ಕಲಾಮಾಧ್ಯಮ’ದ ಇನ್ನೊಂದು ಪ್ರಯತ್ನ ‘ವ್ಯಕ್ತಿ ಚಿತ್ರ’ ಸರಣಿ.
ಆರಂಭದ ಪಯಣ ಕಡಲ ತೀರದ ಎಂದೂ ತೀರದ ಮುತ್ತು ಶಿವರಾಮ ಕಾರಂತರೊಂದಿಗೆ. ಮುಂದೆ ಹೀಗೆ ಹಲವಾರು ಕ್ಷೇತ್ರದ ಸಾಧಕರನ್ನ ವ್ಯಕ್ತಿ ಚಿತ್ರ ಸರಣಿಯಲ್ಲಿ ಭೇಟಿ ಮಾಡುವ.
ನೋಡಿ ಈ ಯೋಜನೆಯ ಮತ್ತು ಈ ಸಂಚಿಕೆಯ ಬಗೆಗಿನ ಅನಿಸಿಕೆ ತಿಳಿಸಿ.
-ಸವಿತಾ ಆವರಸಂಗ್
ನಿರ್ದೇಶಕಿ






ಬಹಳ ಒಳ್ಳೆಯ ಪ್ರಯತ್ನ. ಕೆಲವು ಅಪರೂಪದ ಫೋಟೋ ಇದಾವೆ. ಆದರೆ ವೇಗವಾಗಿ ಮರೆಯಾಗುತ್ತವೆ. ಅವುಗಳನ್ನು ವ್ಯವಧಾನದಿಂದ ನೋಡಲು ಆಗುವುದಿಲ್ಲ. ಅವನ್ನು ಇನ್ನೊಂದು ಗಳಿಗೆ ಹಿಡಿದಿಟ್ಟು ನೋಡೋದು ಹೇಗೆ ಸರ್ ? ಅಂದರೆ ಆ ಟೆಕ್ನಾಲಜಿ ಬಗ್ಗೆ ಕೇಳುತ್ತಿರುವೆ.