– ಬಸವರಾಜ ಸೂಳಿಬಾವಿ
ಲಡಾಯಿ ಪ್ರಕಾಶನ
೧
ಆ ತುಳಿಸಿಕೊಂಡ ಹಾದಿ ಸುಮ್ಮನಿತ್ತು
ತುಳಿವ ಕಾಲಿನ ಗಾಯದ ರಾಗ ಮುಗಿಲು ಮುಟ್ಟುತ್ತಿತ್ತು
೨
ಅಂಟಿದೆಲ್ಲವ ತೊಳೆದುಕೊಂಡು ಹಗುರಾಗಲು ಆ ಜಡಿಮಳೆಯಲಿ ನಡೆದುಹೋದೆ
ಆತ್ಮದ ಮೇಲೆ ಕಳೆದುಹೋದ ಮಾತು ಉಳಿಸಿಬಿಟ್ಟ ಧೂಳು ಹಾಗೆ ಉಳಿಯಿತು
೩
ದುರ್ಗಂಧಕೆ ಕಾರಣರಾದವರಾರೋ
ತನ್ನೊಳಗೆ ಬೆರೆಯಿಸಿಕೊಂಡ ಗಾಳಿಯಷ್ಟೇ ನಿಂದನೆಗಳ ಎದುರಿಸಿತು
೪
ಒಮ್ಮೊಮ್ಮೆ ಹೀಗೆ
ಕಣ್ಣೀರು ಖಾಲಿಯಾದರಷ್ಟೇ ಕಣ್ಣು ಸ್ವಚ್ಛಗೊಳ್ಳುವುದು
೫
ನಾನು ತುಳಿವ ಮಣ್ಣು ನನಗೆ ಹೂ ಕೊಟ್ಟಿತು
ಹೀಗೇಕೆಂದೆ :ಎಲ್ಲವೂ ಅವರವರ ಸ್ವಭಾವ ಎಂದುತ್ತರಿಸಿತು
೬
ಹೊಗೆ ಬೂದಿ ಎರಡೂ ಬೆಂಕಿ ಜನ್ಯಗಳೆ ಕೂಡುವುದಿಲ್ಲ ಎಂದೂ
ಹೊಗೆ ಹುಟ್ಟುತ್ತಲೇ ಆಕಾಶಮುಖಿ ಬೂದಿ ಭೂಮಿಯಲ್ಲುಳಿವ ಕಾಲಿಲ್ಲದ ಕೂಸು
೭
ನಿನ್ನೆ ಕೊನೆಗಾಲದ ಅಪ್ಪನನು ಕಣ್ತುಂಬಿಕೊಳಲು ಹೋಗಿದ್ದೆ
ಕಾಲ ಬೀಸಿದ ಕವಣೆಕಲ್ಲಿಗೆ ಸಹನೆಯ ಗುಬ್ಬಿ ಯಾವ ಲೆಕ್ಕ ?
೮
ಪ್ರಮಾಣದ ಹಂಗಿಲ್ಲದ ಈ ಪಯಣದಲಿ ನಿನ್ನ ಮಾತು ಕೇಳಲೆಂದು ಮೌನವಾದೆ
ಸಂತೆಯ ಶಬ್ದಗಳ ಧೂಳು ಆತ್ಮಕ್ಕಂಟಿದ ಹಾಗೆ ಬಯಕೆಯ ದಿಕ್ಕು ಗಾಳಿಯ ಕೂಡಿತು
೯
ಈ ಹೃದಯವನು ನೀ ಹಾಡುಗಳಿಂದ ತುಂಬುವಾಗ ಬಯಕೆ ಮೌನದವತಾರದಲಿತ್ತು
ಎಷ್ಟು ಎತ್ತರ ಹೇಳಿದರೂ ನೋವು ಮತ್ತು ಸಾವಿನಲ್ಲಾಡುವ ಶಬ್ದ ಮೌನದಂತಿರುವವು
೧೦
ಆ ತಿರುವಿನಲಿ ದುಃಖದ ನೆನಪ ಇಳಿಸಿ ನಡೆವಾಗ ಸುಖದ ರೆಪ್ಪೆಯಲೇಕೊ ಕಳವಳ
ಇಂದೂ ಆ ಹೆಸರಿರದ ಓಣಿಯಲಿ ಗೆಜ್ಜೆಸದ್ದಿಗೆ ಗೋಡೆ ನೆರಳು ಕಂಪಿಸುತ್ತಲೇ ಇತ್ತು!]]>





ಈ ಹೃದಯವನು ನೀ ಹಾಡುಗಳಿಂದ ತುಂಬುವಾಗ ಬಯಕೆ ಮೌನದವತಾರದಲಿತ್ತು
ಎಷ್ಟು ಎತ್ತರ ಹೇಳಿದರೂ ನೋವು ಮತ್ತು ಸಾವಿನಲ್ಲಾಡುವ ಶಬ್ದ ಮೌನದಂತಿರುವವು
೧೦
ಆ ತಿರುವಿನಲಿ ದುಃಖದ ನೆನಪ ಇಳಿಸಿ ನಡೆವಾಗ ಸುಖದ ರೆಪ್ಪೆಯಲೇಕೊ ಕಳವಳ
ಇಂದೂ ಆ ಹೆಸರಿರದ ಓಣಿಯಲಿ ಗೆಜ್ಜೆಸದ್ದಿಗೆ ಗೋಡೆ ನೆರಳು ಕಂಪಿಸುತ್ತಲೇ ಇತ್ತು!……tumbaa classic aagide guru ..
ravivarma hospet