ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಕ – ಕೃಷ್ಣ

ಉದಯಕುಮಾರ ಹಬ್ಬು

ಕನಕ ಕಪ್ಪು
ಕೃಷ್ಣ ಕಪ್ಪು
ಅಂತರ
ಏನಿದೆ?
ಕೃಷ್ಣ ಒಳಗೆ
ಕನಕ ಹೊರಗೆ
ಇದು ಸಹಜ ಎಂದು
ಎಲ್ಲಿ ಹೇಳಿದೆ?

ಅವ ದನ ಕಾದ
ಇವ ಕುರಿ ಕಾದ
ಕಾಯುವುದೇ ವೃತ್ತಿ.

ಅವನು ಹಾಡಿದ
ಇವನು ಕೊಳಲನೂದಿದ

ಕನಕನ ಮನೆಗೆ ಕೃಷ್ಣ ಹೋದ
ಅಲ್ಲಿ ತಿಂದ ರಾಗಿ ರೊಟ್ಟಿ
ಕೃಷ್ಣ ತಂದ ಬೆಣ್ಣೆ ಮುದ್ದೆ
ರೊಟ್ಟಿಯ ಮೇಲೆ ತಟ್ಟಿ

ಕೃಷ್ಣನ ಮನೆಗೆ ಕನಕ ಹೋದ
ರಾಗಿ ಮುದ್ದೆ ಹಿಡಿದು
ದ್ವಾರಪಾಲಕರು ತಡೆದರು
ಅವನನ್ನು ಹಿಡಿದರು
ದೊಣ್ಣೆಯಿಂದ ರಾಗಿ‌ ಮುದ್ದೆ ಬಿದ್ದು
ಏನಿದೇನಿದು ಏನಾಗಿದೆ ಇವರಿಗೆ?

ನನ್ನ ಗೆಳೆಯ ಎಲ್ಲಿ ಇರುವ ನೋಡಬೇಕಿದೆ
ಕೃಷ್ಣನ ಮನೆಬಾಗಿಲು ಕಾಯುತಿರುವ ಇಂದಿಗೂ
ದಾರಿ ಕಾಯುತ್ತಲೆ ಇರುವ, ಬಾಗಿಲನು ತೆರೆದು
ಸೇವೆಯನು ಕೊಡು ಹರಿಯೆ,
ಭಜನೆ ಮಾಡುತಲೆ ಇರುವ, ಕನಕ ನಿತ್ಯ ವಿರಹಿ
ಬಯಲಿನಲ್ಲಿ ಸೇರಬಹುದು ಕೃಷ್ಣ-ಕನಕ
ಇಬ್ಬರೂ ದನ ಕಾಯುತ, ಕುರಿ ಕಾಯುತ
ಅವನು ಹಾಡುತ, ಇವನು ಕೊಳಲನೂದುತ

‍ಲೇಖಕರು Avadhi

15 April, 2021

2 Comments

  1. ಜಯಶ್ರೀನಿವಾಸ

    What a poem!! ಎಷ್ಟೊಂದು ಅರ್ಥಗಳು … ಕನಕ ಹಾಡುತ್ತ ಕೃಷ್ಣ ಕೊಳಲನೂದುತ್ತ ಬಯಲಲ್ಲಿ ತಿರುಗಬೇಕಾದವರು …

  2. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading