ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಕಪ್ಪು ಹಚ್ಚಿದಾಗ ಅಳಬಾರದು..

ಕಣ್ಕಪ್ಪು
ವಿದ್ಯಾರಶ್ಮಿ ಪೆಲತ್ತಡ್ಕ
mom and kidಕನ್ನಡಿಯೆದುರು ನಿಂತಾಗಲೇ 
ಬರಬೇಕೇ ಆ ಅಳು
ದಳದಳನೆ ಸುರಿದ ನೀರು ಕಪ್ಪಗಿತ್ತು
ಕಣ್ಕಪ್ಪು ಕರಗಿದ್ದು ಗೊತ್ತಾಯಿತು.
ಓಹ್, ಮತ್ತೆ ಮೇಕಪ್ ಮಾಡಬೇಕಾ..
ಹಾಳು ಅಳುವಿಗೆ ಹಿಡಿಶಾಪವಿಕ್ಕಿದೆ
ಅಂದಿನಿಂದ ಎಚ್ಚರವಹಿಸಿದೆ
ಬರೆದಿಟ್ಟೆ ಸಂವಿಧಾನ,
ಕಣ್ಕಪ್ಪು ಹಚ್ಚಿದಾಗ ಅಳಬಾರದು
ಹೀಗಂದರೂ ಸರಿಯೇ,
ಅಳು ಬರುವಂತಾದಾಗಲೊಮ್ಮೆ ಕಣ್ಕಪ್ಪು ಹಚ್ಚಿಬಿಡಬೇಕು
ನಿತ್ಯವೂ ಹಚ್ಚಿದ್ದೇ ಹಚ್ಚಿದ್ದೂ 
ಕ್ಷಣವೂ ಕಪ್ಪು ತೊಲಗಿಲ್ಲ ರೆಪ್ಪೆಯಂಚಿಂದ
ಹನಿ ಜಾರಿಲ್ಲ ಕೆಳಗೆ…
ಎಷ್ಟು ಗಟ್ಟಿ ಮನಸ್ಸಿನ ಹೆಣ್ಣು!
ಸಿಕ್ಕ ಪಟ್ಟದಲ್ಲಿ ಮನ ವಿರಾಜಮಾನ
 
ಈಗೀಗ ಪುಟ್ಟ ಮಗಳಿಗೂ ಕಾಡಿಗೆಯ ಹುಚ್ಚು
ಅವಳಿಗೂ ಅಳು ಬರುವಂತಾದಾಗ 
ಹಚ್ಚಿಬಿಡುತ್ತೇನೆ ಕಾಡಿಗೆ
ಮತ್ತೆ ಬಿಕ್ಕು ಬಂದಾಗ ನೆನಪಿಸುತ್ತೇನೆ,
ಮೇಕಪ್ಪು ಹೋಗುತ್ತದೆಯಲ್ಲೇ, ಅಳಬೇಡ…

‍ಲೇಖಕರು Admin

20 February, 2016

13 Comments

  1. sangeetha raviraj

    ಅಂದದ ಕವಿತೆ ವಿದ್ಯಾರವರೇ……ಇಷ್ಟವಾಯಿತು

  2. ಮಂಜುನಾಥ್. ಪಿ

    nice..

  3. Anonymous

    Tumba chennagide kavithe. Vidya

  4. Arathi ghatikar

    Tumba chennagide kavithe. Vidya

  5. Anonymous

    thanks all
    -vidyarashmi

  6. ನೂತನ

    ವಿದ್ಯಾ ..ಚೆನ್ನಾಗಿದೆ..ಕಣ್ಕಪ್ಪು ಹಚ್ಚುವವಲಿಗೆ ಕವಿಥೆ ನೆನಪಾಗುತ್ತದೆ..

  7. Anonymous

    ತುಂಬಾ ಚನ್ನಾಗಿದೆ Madam….

  8. ಭಾರತಿ ಬಿ ವಿ

    ರಶ್ಮಿ ಎಷ್ಟು ಚೆಂದ ಬರ್ದಿದ್ದಿ …

  9. Anonymous

    ಸೂಪರ್ ವಿದ್ಯಾ ಮಗಳಿಗೆ (ಹೃಳಿದಂತಿದೆ) ಹೇಳಿದಂತೆ ಇದೆ

  10. ಸತೀಶ್ ಕನಕಪುರ.

    ತುಂಬಾ ಸೊಗಸಾದ ಕವಿತೆ,

  11. ಆನಂದ್ ಎಂ. ಸೌದಿ

    ಛೊಲೋ ಬರ್ದೀರಿ ಮೇಡಂ.

  12. Narayan Raichur

    chennagi moodi bandide

    narayan raichur

  13. Anonymous

    Neenu clssige kankappu hachibarutiddadu nenapayitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading