ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡೀಕ ಒಂದ ಮಾತು ಉಳೀತು…..

ಕವಿತೆ

– ಡಾ. ಪ್ರಕಾಶ ಗ. ಖಾಡೆ

ಬರುಬರುತ್ತ ದಿನಮಾನ ಸುಮಾರು ಎಂದರು

ಮಾಪನಕ್ಕೆ ಕುಂತಾಗ ಇಂಥದೇ ಮಾತು, ಮುರುಕು

ಯಾರಿಗೆ ಯಾರೋ ಖೂನ ಹೇಳಾವರು ಉಳಿದಿಲ್ಲ

ದಿಗಿಲಗೊಂಡವರಿಗಂತೂ ನೆಲಾ ಹೂತರೂ ತಿಳಿಯಾಕಿಲ್ಲ

.

ಎಮ್ಮಿ ಹೋತಾ ಕೋಣಾ ಕುರಿ ನಂಬಿಗಿ ಉಳಿದಿಲ್ಲ

ಕಡಿಯಾವರು ಬಡ್ಯಾವರು ಕಡೀಕ ನಿಂತಾರ

ಸುದ್ದ ಇದ್ದ ಮಂದಿ ದಂಗಾಗಿ ಒಳಗ ಕುಂತಾರ

ಹುಚ್ಚಮಲ್ಲಿ ಸಂತ್ಯಾಗ ಕೊಳ್ಳಾಕ ಏನ ಸಿಗತೈತಿ

ಹೀಂಗ ಸಂಜೀತನಾ ಬಿಡದ ಹುಡಕೀ

ಸಿಕ್ಕರ ಪಾಲ ಹಂಚಕೊಳ್ಳಾಕ ಪಾಳಿ ನಿಂತಾರ.

.

ಹೆಣಕ್ಕ ಹೆಗಲ ಕೊಡಾವ್ರು ಮಾನಗೇಡಿ ಆಗ್ಯಾರ

ಹೊತಗೊಂಡ ಆರ್ಯಾಣ ಮುಟ್ಟಿಸಿದರ ಪಾಡೈತಿ

ಅರಳಿದ ಹೂವಾ ಹಸಿ ಹುಲ್ಲಾ ಮಿನುಕು ಹುಳಾ

ನಡದವರು ತುಳದ ತುಳಿದು ಮಣ್ಣಮಾಡ್ಯಾರ

.

ಉರಿಯೋ ದೀಪ ಆರಿಸಾಕ ಗಾಳಿನ ಬೇಕಾಗಿಲ್ಲ

ಬೆಳ್ಳ ಮುಖದವರು ಬಣ್ಣಾ ಬಡಕೊಂಡ ಕರ್ರಗಾಗ್ಯಾರ

ಮ್ಯಾಲ ನೋಡಾಕ ಚೆಂದ ಒಳಗೆಲ್ಲಾ ಬಡಿವಾರ

ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ; ಮೌನಾನ ಆಸ್ತಿ

.

ಕಡೀಗಿ ಒಂದ ಮಾತ ಉಳೀತು

ಪಡಕೊಂಡವರ ಋಣಕ್ಕ ಈಗೇನು ಹೇಳಲಾಗದು

 

 

‍ಲೇಖಕರು G

16 December, 2012

7 Comments

  1. ಬಸೂ

    ಇಷ್ಟವಾಯ್ತು

  2. Gopaal Wajapeyi

    ಆಹಾ…
    ‘ಅವರೆಲ್ಲಾರೂ ಸಿಕ್ಕರ ಪಾಲು ಹಂಚಿಕೊಳ್ಳಾ ಪಾಳಿ ನಿಂತಾರ…’
    ‘ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ ; ಮೌನಾನ ಆಸ್ತಿ…’
    ಹೌದು.
    ಈ ನಿಮ್ಮ ‘ಕಡೀಕ ಒಂದ ಮಾತು’ ಕಡಿತನಕಾ ನೆಪ್ಪಿಡೂವಂಗೈತಿ…

  3. mmshaik

    njce..

  4. Mohan V Kollegal

    ಪಡಕೊಂಡವರ ಋಣದ ಬಗ್ಗೆ ಪಡಕೊಂಡವರೇ ಹೇಳಬೇಕು… ಚೆನ್ನಾಗಿದೆ ಕವಿತೆ ಅಣ್ಣಯ್ಯ… 🙂

  5. ಹನುಮಂತ ಹಾಲಿಗೇರಿ

    ಚಲೋ ಬರಿದಿರಿ, ಮಸ್ತ ಹಿಡಿಸಿತು.

  6. vithal dalawai

    kavana channagide

  7. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ಕವಿತೆ ಮೆಚ್ಚಿಕೊಂಡ ತಮಗೆಲ್ಲ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading