
ಕರಾವಳಿಯ ಕಿರಿ ಮಂಜೇಶ್ವರದಿಂದ ಬಂದು ಬೆಂಗಳೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ಆನಂದನನ್ನು ಜಯಂತ ಕಾಯ್ಕಿಣಿ ಮಾತಾಡಿಸಿದ್ದಾರೆ. ಮೂಲತಃ ತಮಿಳುನಾಡಿನವರಾದ, ಬಹಳ ವರ್ಷಗಳಿಂದ ಹೊಸಪೇಟೆಯಲ್ಲಿರುವ ಅರ್ಮುಗಂ ಅವರನ್ನು ಪರಶುರಾಮ ಕಲಾಲ್ ಮಾತಿಗೆಳೆದಿದ್ದಾರೆ. ಎರಡು ಓದಬೇಕಾದಂಥವು. ಸಂದರ್ಶನದ ಇರಾದೆಗೆ ಸೂಚಕವಾಗಿ, ನಾವು ಕೆಳಕಂಡ ಸೂಚಕಗಳನ್ನು ರೂಪಿಸಿದ್ದೇವೆ ಅಂತ ಆರಂಭದಲ್ಲೇ ಅಕ್ಷರ ಅವರು ಹೇಳಿರುವ ಸೂಚಕಗಳು ಹೀಗಿವೆ.
*ಕಳೆದ ಒಂದೆರಡು ವರ್ಷಗಳಲ್ಲಿ ಎದುರಿಸಿದ ಬಹುದೊಡ್ಡ ಸಮಸ್ಯೆ ಸವಾಲು *ಅದನ್ನು ನಿಭಾಯಿಸಿದ ಬಗೆ; ಕಲಿತ ಪಾಠಗಳು *ಈಚೆಗೆ ನಮ್ಮ ಸುತ್ತಮುತ್ತಲಿನ ಬದುಕಿನಲ್ಲಾಗುತ್ತಿರುವ ಮುಖ್ಯವಾದ ಮಾರ್ಪಾಟು *ಮುಂದೆ ಬರಲಿರುವ ಕಾಲದ ಬಗ್ಗೆ ಇರುವ ನಿರೀಕ್ಷೆಗಳು.
ಓದುವ ಕುತೂಹಲ ಹುಟ್ಟಲು ಇಷ್ಟು ಸಾಕು!
ಪೂರ್ಣ ಓದಿಗೆ: ಚಂಪಕಾವತಿ





0 Comments