ಹಾಂ ಇದೇನಿದು ಅಂತ ಕೇಳಿದ್ರಾ..
ಇದೆ, ವಿಷಯ ಇದೆ
‘ಬಣ್ಣ ಬಣ್ಣದ ಹಕ್ಕಿ
ಮತ್ತೆ ಪಾತರಗಿತ್ತಿ
ನನ್ನ ಗೆಳೆತನವಿತ್ತು
ಬನದ ತುಂಬಾ
ಚೈತ್ರ ಋತು ಬಂದಾಗ
ಬನ ತುಂಬಿ ನಿಂತಾಗ
ಎಂತ ಸಂತೋಷವೋ
ಕೊರಳ ತುಂಬಾ..’
ಎನ್ನುವ ಕವಿತೆ ನಿಮಗೂ ನೆನಪಾಗದಿದ್ದರೆ ಕೇಳಿ
ಇದೊಂದು ಕಥೆ, ಭಿನ್ನ ಕಥೆ, ನಡಿಗೆಯ ಕಥೆ, ಒಡನಾಡಿದ ಕಥೆ
ಬದುಕಿಗೆ ಇರುವ ಬಣ್ಣಗಳನ್ನು ಬಿಚ್ಚಿಡುವ ಕಥೆ
ಇದನ್ನು ನಡೆದು ತೋರಿಸಿದ್ದಾರೆ ರಾಹುಲ್ ದಯಾಳು ಉರುಫ್ ರಾದ
ನಾಳೆಯಿಂದ ಸತತವಾಗಿ ಒಂದು ತಿಂಗಳು ಇವರ ಜೊತೆ ನೀವೂ ಹೆಜ್ಜೆ ಹಾಕಿ
ವಾಹ್…. ಹೀಗೆ ನನ್ನ ಕನ್ನಡದಲ್ಲಿ ಪುಸ್ತಕವೊಂದು ಪ್ರಕಟಪೂರ್ವ ಪ್ರಚಾರಕ್ಕೆ ಹೊರಟಿತು…. ಸಲ್ಲಕ್ಷಣ ಬೆಳವಣಿಗೆ. ರಾದ, ಅವಧಿ ನಿಮಗೆ ಧನ್ಯವಾದಗಳು.
ಹಾಗೇ ಓದುಗಳಾಗಿ ಈ ಪಯಣದ ಜೊತೆಯಲ್ಲಿರುವೆ ಎಂಬುದನ್ನೂ ತಿಳಿಸುತ್ತಿರುವೆ.
ಧನ್ಯವಾದಗಳು ಲಲಿತ ಅವರೇ. ನನ್ನ ಪುಸ್ತಕವನ್ನು ಅವಧಿಯಲ್ಲಿ ಪ್ರಕಟಿಸಲು ಅವಕಾಶ ಮಾಡಿಕೊಟ್ಟ ಮೋಹನ್ ಸಾರ್ ಗೆ ನನ್ನ ಕೃತಜ್ಞತೆಗಳು. ಈಗಾಗಲೇ ಪುಸ್ತಕದ ಕೆಲವು ಅಧ್ಯಾಯಗಳು ಪ್ರಕಟಗೊಂಡಿದೆ. ತಾವು ಓದಿ ತಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ತಮ್ಮ ಸ್ನೇಹಿತರಿಗೂ ಓದಲು ಹೇಳಿ.
ಕೆಳಗಿನ ವಿಳಾಸದಲ್ಲಿ ಎಲ್ಲಾ ಅಧ್ಯಾಯಗಳೂ ಲಭ್ಯವಿರಲಿದೆ.
http://avadhimag.online/category/ಅಂಕಣ/ಕಾಣದ-ಕಡಲಿಗೆ-ಹಂಬಲಿಸಿದೆ-ಮನ/