ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ‘ಜಾದೂ’ ನಡೆದು ಹೋಯ್ತು

ನನ್ನ ಬದುಕಿನಲ್ಲಿ ಒಂದು ಜಾದೂ ನಡೆದು ಹೋಯ್ತು ಎಂದವರು ಪ್ರೊ ಬಿ ಎ ವಿವೇಕ ರೈ. ತಾವು ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ತೆರಳುವ ಸುದ್ದಿ ಹರಡುತ್ತಿದ್ದಂತೆ ನಡೆದ ಘಟನೆಗಳನ್ನು ಅವರು ಬಣ್ಣಿಸಿದ್ದು ಹೀಗೆ.

ಶರವೇಗದಲ್ಲಿ ಮೂರು ಪುಸ್ತಕಗಳ ಪ್ರಕಟಣೆ, ಎರಡು ನಗರಗಳಲ್ಲಿ ಅಭಿನಂದನೆ, ಎಷ್ಟೊಂದು ಜನರ ಪ್ರೀತಿ ಪ್ರವಾಹ. ಇದು ಜಾದೂ ಅಲ್ಲದೆ ಮತ್ತೇನು? ಎಂಬ ಪ್ರಶ್ನೆ ಅವರದ್ದು.

ಆ ವೇಳೆಗೆ ವೇದಿಕೆ ಹತ್ತಿದ್ದು ಕುದ್ರೋಳಿ ಗಣೇಶ್. ತನ್ನ ಜಾನಪದ ಜಾದೂ ಮೂಲಕ ಜನರನ್ನು ವಿಸ್ಮಯಕ್ಕೆ ತಳ್ಳಿದಾತ. ಕೈಯಲ್ಲಿ ಇದ್ದ ಬೋಗುಣಿ ವಿವೇಕ್ ರೈ ಅವರ ಮುಂದೆ ಹಿಡಿದ. ಗಂಟೆಯ ಮೂಲಕ ಕಿಣಿ ಕಿಣಿ ನಾದ ಹೊರಡಿಸುವಂತೆ ಹೇಳಿದ. ಒಂದೇ ಕ್ಷಣ ಕಾಗದದ ತುಂಡೊಂದು ಹೂವಿನ ಹಾರವಾಗಿ ಬದಲಾಯ್ತು. ರೈ ಕೊರಳಿಗೆ ಸಮರ್ಪಿಸಿದ. ಜಾದೂ, ಜಾದೂ ನಡೆದು ಹೋಯ್ತು

ಇದೆಲ್ಲ ಆದದ್ದು ಮಂಗಳೂರಿನಲ್ಲಿ. ಈ ಪ್ರೀತಿಯ ಘಳಿಗೆಯ ಇನ್ನಷ್ಟು ಚಿತ್ರಗಳು ‘ಓದು ಬಜಾರ್’ ನಲ್ಲಿ

20091014rai6


‍ಲೇಖಕರು avadhi

15 October, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. Sibanthi Padmanabha

    ಪ್ರೊ. ರೈ ಅವರೂ ತಮ್ಮ ಜ್ಞಾನ ಮತ್ತು ಪ್ರಭೆಯಿಂದ ಶಿಷ್ಯರನ್ನು ಮೋಡಿ ಮಾಡಬಲ್ಲ ಜಾದೂಗಾರರೇ ಹೌದು. ನಿನ್ನೆ ಅವರ ಮಾತು ಕೇಳುತ್ತಿದ್ದ ನನಗೆ ಮತ್ತೊಮ್ಮೆ ಹಾಗನಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading