ಕವನ
– ಅಕ್ಷಯ ಕಾಂತಬೈಲು
ಹಾಲು ಕುಳಗಳ ಸಂಧಿ
ಆವತ್ತು ಪಟಾಪಟಿ ಚಡ್ಡಿ
ಪರಿಕಟೆ ಬನಿಯನ್ ಹಾಕಿ
ಸಣಕಲು ಎತ್ತುಗಳ
ಮೈ ದಡವುತ್ತಾ ಗದ್ದೆ ಉಳುತ್ತಿದ್ದೆ
ಬಾನ ಪರಿದಿಯ ಹೊಳೆಬದಿ
ಉತ್ತ ನೇಗಿಲ ತಿಕ್ಕಿ ತೊಳೆಯುತ್ತಿದ್ದೆ
ಕನಸಲ್ಲೂ ಯೋಚಿಸಿರಲಿಲ್ಲ;
ದೇವತೆಯೇ ಪ್ರತ್ಯಕ್ಷಳಾಗಿ
ಹದವಾಗಿ ಉಳುತ್ತಾ ಉಳುತ್ತಾ
ಹೋ… ಹೊಯೈ ಎಂದು
ಹುರಿದುಂಬಿಸುವ, ಎದೆಯುಬ್ಬಿಸುವ
ನನ್ನೀ ಕೊಬ್ಬಿದ ದಿನಗಳು
ಲಗ್ಗೆಯಿಡಬಹುದೂಂತ

ಎಂತ ಕತೆ ಮಾರಾಯ್ತಿ,
ಕೆಚ್ಚಲು ಹಿಂಡುತ್ತಾ ಹಾಲು
ಕರೆಯುತ್ತಿದ್ದಾಕೆ ಮತ್ತು
ಸಾವಯಾವ ಪರಿಮಳ
ಹೊಮ್ಮಿಸುವ ಅಳಕ್ಕ ಬಂಗಾರವೇ
ಅಬ್ಬಾ! ಇವತ್ತು ನಿನ್ನ ಕೈಯಲಿ
ಭೂತವೇ ಅಡರಿದೆ
ನಾನಂತೂ ಹಳ್ಳಿ ದೂರ ಮಾಡಿ
ಬಂದರೆ……
ಚಾಲಾಕಿಯೇ ಪಟ್ಟಣದಲ್ಲೂ
ಹಾಲು ಮಾರುತ್ತಾ, ಎಮ್ಮೆ
ಮೇಯಿಸುತ್ತಾ ಇದ್ದೀಯಲ್ಲೇ
ಕಾಮಧೇನು!






ಚೆನ್ನಾಗಿದೆ.
Chennagide akshaya…
ಪದ್ಯ ಇಷ್ಟವಾಯ್ತು.
uttama kavana..
ಪ್ರೀತಿಯ ನನ್ನ ಉಸಿರು
ಅಕ್ಷಯರವರಿಗೆ ವಂದನೆಗಳು
ಇದು ಬರಿ ಕವಿತೆಯಲ್ಲ ನಮ್ಮ ಗ್ರಾಮೀಣ ಪರಂಪರೆ ಸಾಗಿ ಬಂದುದನ್ನು ನಿರೂಪಿಸುವ ಒಂದು ದೃಶ್ಯ ಕಾವ್ಯ. ಕವನದ ನಿರೂಪಣೆ ಸರಳವಾಗಿದ್ದರೂ ಅದು ಮಾಡಿಸುವ ದರ್ಶನ ಅನನ್ಯವಾದುದು.
Nice poem Akshay.
Nice one Akshay
thanks for all of your lovely wishes.