ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಂಟಿ ಜಂಗಮಳಾಗಿ ಹೆಜ್ಜೆಯಿಡುತ್ತಿರುವ ಏಕಾಂಗಿ ಪಯಣಿಗಳು’ – ಹೇಮಲತಾ

-ಹೇಮಲತಾ, ಭದ್ರಾವತಿ

ಪ್ರೀತಿಯ ಉದಯ
ಜಂಗುಳಿಯ ಜಾತ್ರೆಯಲ್ಲೂ
ಒಂಟಿ ಜಂಗಮಳಾಗಿ ಹೆಜ್ಜೆಯಿಡುತ್ತಿರುವ
ಏಕಾಂಗಿ ಪಯಣಿಗಳು ನಾನು
ನನಗೇಕೆ ಮೋಹದ ಬಲೆ ಒಡ್ಡುತ್ತಿರುವೆ

‘ನಾನೇನು’ ಎಂಬ ಹುಡುಕಾಟ
ನಡೆಸುತ್ತಿದ್ದವಳಿಗೆ ನೀನೇ ಬೇರೆ
ಎಂದು ಹೊಸ ಹುಟ್ಟು ನೀಡುವ
ಬಯಕೆ ಮೂಡಿತಾದರೂ ಹೇಗೆ
 
ಅಗ್ನಿಗರ್ಭವನ್ನೇ ಒಡಲೊಳಗಿಟ್ಟು
ಬೇಯುತ್ತಿದ್ದವಳಿಗೆ ಶರಧಿಯನ್ನೇ
ಹೊತ್ತುತಂದು ತಣಿಸುವ
ಹುಚ್ಚು ಹಂಬಲವೇಕೆ?
 
ನಶ್ವರದ ನಿರ್ಲಿಪ್ತತೆಗೆ ಜಾರುತ್ತಿದ್ದವಳಿಗೆ
ಪ್ರೀತಿ ಅಕ್ಷಯವಾಗಿ ಆವರಿಸಿ ಜೀವಂತಿಕೆಯ
ಅಮೃತಕಲಶ ಉದಯಿಸಿದಾದರೂ ಹೇಗೆ!!!
 

‍ಲೇಖಕರು G

15 May, 2015

2 Comments

  1. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ; ಪದ್ಯ.

  2. Rohini Satya

    Preetiya jaalada chitrana chennaagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading