ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎ ಟಿ ಎಂ ಕಥೆಗಳು: ಇವರೆಲ್ಲರ ಕಣ್ಣುಗಳು..

b-m-basheer

ಬಿ ಎಂ ಬಷೀರ್ 

corruptionನಾನು ಕಾರ್ಡ್ ಮೂಲಕ ವ್ಯವಹರಿಸ ಬಲ್ಲೆ

ಕ್ಯಾಶ್ ಲೆಸ್ ಎಂದು ಮಾಲ್ ಗಳಲ್ಲಿ, ಸೂಪರ್ ಬಜಾರ್ ಗಳಲ್ಲಿ
ಕ್ಯೂ ನಿಂತು ನನ್ನ ದೇಶ ಪ್ರೇಮ ಸಾಬೀತು ಮಾಡ ಬಲ್ಲೆ …

ಆದರೆ … ಮಾಲ್ ಗಳಲ್ಲಿ ಮೀನು, ತರಕಾರಿ ಖರೀದಿಸಿ
ಬ್ರಾಂಡಡ್ ಚೀಲಗಳಲ್ಲಿ ತುಂಬಿಸಿ ಬಿಂಕದಿಂದ ಮನೆ ಕಡೆ ಸಾಗುವಾಗ
ರಸ್ತೆ ಬದಿಯಲ್ಲಿ ಮೀನಿನ ಬುಟ್ಟಿ ಜೊತೆ ಬಿಸಿಲಲ್ಲಿ ಒಣಗುತ್ತಿರುವ ಅಕ್ಕಮ್ಮ
ತರಕಾರಿ ಅಂಗಡಿಯ ಅಣ್ಣಪ್ಪ
ದಿನಸಿ ಅಂಗಡಿಯ ಅಬ್ಬೂ ಕಾಕಾ, ಹಣ್ಣು ಮಾರುವ ಪಿಂಟೋ
ಕಬ್ಬಿನ ಹಾಲು ಮಾರುವ ಕಿಟ್ಟಪ್ಪ
ಟೀ ಸ್ಟಾಲ್ ನ ಅಂತಪ್ಪ ಭಟ್ರು
ಇವರೆಲ್ಲರ ಕಣ್ಣುಗಳು ನೇರ ನನ್ನ ಹೃದಯವನ್ನೇ ಇರಿದಂತಾಗುತ್ತದೆ

ನವೆಂಬರ್ ೯ರಂದು
ನನ್ನ ದೇಶದಿಂದ ಗಡಿಪಾರು ಮಾಡಲ್ಪಟ್ಟ ಪರದೇಶಿಗಳಂತೆ
ಇವರು ನನ್ನ ಬೀದಿಗಳಲ್ಲಿ ಧೂಳು ತಿನ್ನುತ್ತಾ
ತಮ್ಮ ಪ್ರಧಾನಿಯ ಭಾಷಣಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ

ನವೆಂಬರ್ ೯ರಿಂದ
ಇವರೆಲ್ಲ ಒಂದು ದೇಶವಾಗಿ ಸಿಡಿದು ನಿಂತಿದ್ದಾರೆ
ನನಗೆ ಸ್ಪಷ್ಟವಾಗುತ್ತಿದೆ
ಅದು ನನ್ನ ದೇಶವಂತೂ ಅಲ್ಲವೇ ಅಲ್ಲ

‍ಲೇಖಕರು Admin

15 December, 2016

2 Comments

  1. ಅಕ್ಕಿಮಂಗಲ ಮಂಜುನಾಥ

    ತುಂಬಾ ಸತ್ಯವಾದ ಮಾತು.

  2. ಅಕ್ಕಿಮಂಗಲ ಮಂಜುನಾಥ

    ತುಂಬಾ ಸತ್ಯವಾದ ಮಾತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading