ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ಗಾಯಗಳೂ ಹೂವಾಗಬೇಕು

ಗಾಯದ ಹೂಗಳು

ಕಾಜೂರು ಸತೀಶ್

 

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ;
ಒಸರುವ ಅಷ್ಟೂ ರಕ್ತ ಹೂವಿಗೆ
ಅಂದ ನೀಡಬೇಕು.
ಮಿದುಳಿಗೊಯ್ಯಬೇಕು ಪರಾಗಗಳ ಅಲೆಅಲೆಯಾಗಿ ಅಲೆಯುವ ಹುಳುಗಳು ಬರಿಯ ಪಾದಗಳಲ್ಲಿ;
ಗರ್ಭಕಟ್ಟಿದ ಮೇಲೆ ಕಳ್ಳುಬಳ್ಳಿಗಳನ್ನು ಬಾಂಬುಗಳಿಂದಲೂ ಸಿಡಿಸಲಸಾಧ್ಯವಾಗಬೇಕು.
 
ಕರಕಲಾಗಬಾರದು ಹೀರುವ ಯಾವ ದುಂಬಿಗಳೂ ಸುಟ್ಟು;
ಹೀರಿದ್ದು ಮೀರಿದರೆ ಅವೂ ಕೆಂಪುಹೂಗಳಾಗಿ ಹಾರಿಹೋಗಬೇಕು.
 
ಬಣ್ಣ ಮುಗಿದಿದ್ದರೆ ಓಡಿಬರಬೇಕು ಕಲಾವಿದ- ಕತ್ತಿಯ ಕುಂಚ ಎಸೆದು;
ಗಾಯದ ಹೂಗಳು ಕಣ್ಣೊಳಗೂ ಇಳಿದು ಅವನ ಕಣ್ಣುಗಳೂ ಹೂವಾಗಬೇಕು.
 
ಬಿಳಿಹೂವಾಗಬೇಕು ಚರಿತ್ರೆಗುಡ್ಡದಲ್ಲಿ -ಹೊರಬರುತ್ತಿದ್ದರೆ ಗಾಯದ ಕೀವು;
ಹುಳುಹತ್ತಿದರೆ ಅವುಗಳ ಹಸಿದ ಹೊಟ್ಟೆಗೆ ಕೀವು ಜೇನಾಗಬೇಕು.
 
ಎಲ್ಲ ಗಾಯಗಳೂ ಹೂವಾಗಬೇಕು
ನನ್ನ-ನಿಮ್ಮ ಹೃದಯಗಳಲ್ಲಿ.
 

‍ಲೇಖಕರು avadhi

1 July, 2013

10 Comments

  1. nagraj harapanahalli

    ಆಶಯ ದೊಡ್ಡದು ಸತೀಶ್…ಕವಿತೆ ಚೆನ್ನಾಗಿದೆ.

  2. gururaj katriguppe

    Indhu, ninneyadalla, shathamanagala ‘ashaya’. matthe, matthe, marukalisuthale idhe, nimmanthavara kavithegalalli.

  3. Sudha ChidanandaGowda

    ತುಂಬ ಚೆನ್ನಾಗಿದೆ ಕವಿತೆ

  4. Ahalya Ballal

    ಕವಿಗಳು ‘ದೃಷ್ಟಾರ’ರೆನಿಸಿಕೊಳ್ಳುವುದು ಬಹುಶಃ ಇಂತಹ ಆಶಯ ಇರುವ ಕವಿತೆಗಳಿಂದಲೇ 🙂

  5. sharath hk

    nice

  6. ಸಂ.ಫೈಜ್ನಟ್ರಾಜ್

    ಚೆನ್ನಾದ,ಚಿಂತನೀಯ ಕವಿತೆ!

  7. Kajooru sathish

    Thank you all..

  8. Anonymous

    nice.. tumba ishtavaayitu..

  9. ಮಂಜುನಾಥ್. ಪಿ

    ಅದ್ಭುತ ಕವಿತೆ…ಸರ್…!

  10. ashwini rao.k.n.

    Nice..ella gaayagalu anno nim kavithe tumba istavaayithu sir..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading