ಮೂಲ : ಜಾವೇದ ಅಖ್ತರ್
ಕನ್ನಡಕ್ಕೆ : ಮೆಹಬೂಬೀ
ನುಂಗಿಬಿಟ್ಟತು ಇಡಿಯಾಗಿ ಸಮುದ್ರ ನೆಲವೆ ಎಲ್ಲೂ ಉಳಿದಿಲ್ಲ ಈಗ..
ನಾನು ನನ್ನ ಜೀವ ಉಳಿಸಿಕೊಳ್ಳುವ ಆ ನಾವೆ ಎಲ್ಲೂ ಉಳಿದಿಲ್ಲ ಈಗ..
ಬಹಳ ದಿನಗಳ ನಂತರ ನಾ ಪಡೆದ ವಿರಾಮದಲಿ ನಿಂತು ತಿರುಗಿ ನೋಡಿದೆ
ಆದರೆ ನಾ ಯಾರನ್ನು ಗುರುತಿಸುತ್ತಿದ್ದೇನೋ ಆ ವ್ಯಕ್ತಿಯೆ ಎಲ್ಲೂ ಉಳಿದಿಲ್ಲ ಈಗ…
ಕಳೆದುಹೋಯ್ತು ಸಮಯ ಬರೆದು ಹೃದಯದಲ್ಲಿ ವಿಚಿತ್ರ ಮಾತುಗಳ
ಹೃದಯದ ಪುಟಗಳ ತಿರುವುತ್ತಿರುವೆ ಆ ಮುಗ್ಧತೆ ಎಲ್ಲೂ ಉಳಿದಿಲ್ಲ ಈಗ…
ಆ ಬೆಂಕಿ ಸುರಿದಿದೆ ಮಧ್ಯಾಹ್ನದ ನಡುವಲ್ಲಿ ದೃಶ್ಯಗಳೆಲ್ಲಾ ಕಂದಿವೆ
ಇಲ್ಲಿ ಬೆಳಗಿನ ತಾಜಾತನವಿದ್ದದ್ದು ಆ ತಾಜಾತನವೆ ಎಲ್ಲೂ ಉಳಿದಿಲ್ಲ ಈಗ…
ನೀವು ನಿಮ್ಮ ಹಳ್ಳಿಗಳಲ್ಲಿ ಹೋಗಿ ನೋಡಿ ಅಲ್ಲಿಯೂ ಈಗ ಪಟ್ಟಣಗಳೇ
ನೀವು ಹುಡುಕುತ್ತಿರುವ ಆ ಬದುಕು ಆ ಬದುಕೆ ಎಲ್ಲೂ ಉಳಿದಿಲ್ಲ ಈಗ…
ಆ ಬದುಕು ಆ ಬದುಕೆ ಎಲ್ಲೂ ಉಳಿದಿಲ್ಲ ಈಗ… ಉತ್ತಮ ಕವಿತೆ