‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು.
ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ರೇಣುಕಾ ಮಂಜುನಾಥ್
ಜಯಶ್ರೀ, ನೀವು ನನ್ನನ್ನು ಟ್ಯಾಗ್ ಮಾಡಿದ್ದರಿಂದ, ಸಾಮಾನ್ಯ ಓದುಗಳಾದ ನಾನು ಈ ವಿಷಯದಲ್ಲಿ ಮತ್ತಷ್ಟು ತಿಳಿದುಕೊಳ್ಳುವ ಅವಕಾಶ ಸಿಕ್ಕಿತೆಂದು ಭಾವಿಸುತ್ತೇನೆ. ಮತ್ತು ನಮ್ರತೆಯೊಂದಿಗೆ ನೀವು ಹಾಕಿದ ಪೋಸ್ಟ್ ಒಂದೊಳ್ಳೆ ಚರ್ಚೆಗೆ ದಾರಿಯಾಯಿತೆಂದೇ ನನ್ನ ಭಾವನೆ.
ದಿವಾಕರ್ ಸರ್ ಏನನ್ನೇ ಬರೆಯಲಿ, ಏನನ್ನೇ ಮಾತನಾಡಲಿ ನನಗದು ಒಂದು ಸಾಹಿತ್ಯದ ತರಗತಿ ಇದ್ದಂತೆ. ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಕೃತಜ್ಞತೆ.
ಹಾಗೇ ಜೋಶಿ ಸರ್ ಅವರ ಲೇಖನಗಳ ಬಗ್ಗೆ ಬೆರಗು, ಮೆಚ್ಚುಗೆ. ಹಿಂದೊಮ್ಮೆ ಜೋಶಿ ಸರ್ ಬರೆದ ಅನುವಾದದ ಬಗೆಗಿನ ಲೇಖನವನ್ನು ಮತ್ತೆ ಶೇರ್ ಮಾಡಬೇಕೆನಿಸಿತು. ಓದಿಲ್ಲದವರು ಓದಲಿ ಎಂಬ ಉದ್ದೇಶದಿಂದ ಶೇರ್ ಮಾಡಿದ್ದೇನೆ.
ಅವಧಿಯಲ್ಲಿ ಎಲ್ಲವೂ ಪ್ರಕಟವಾಗಿ, ಎಲ್ಲವೂ ಆರೋಗ್ಯಕರ ಚರ್ಚೆಯಾಗಿ ತಿಳಿಯಾಗಲಿ ಎಂಬ ಸದುದ್ದೇಶದೊಂದಿಗೆ ಈ ಪೋಸ್ಟ್…
ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ







0 Comments