ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲೆಯಾಗುವೆ ಮತ್ತೆ..

ಸದ್ಯಕ್ಕೆ ನಾನಿರುವ ಇಂಗ್ಲೆಂಡಿನಲ್ಲಿ ಈಗ ಎಲೆ ಬೀಳುವ ಶರತ್ಕಾಲ ಋತು

vinate sharma

ವಿನತೆ ಶರ್ಮ

 

ಕಳಚಿಕೊಂಡೆ

ಕೊಂಬೆ ಕೈ ಬಿಟ್ಟಿತು ಎಂಬ

ದೂಷಣೆಯಿಲ್ಲ, ತಾಯಿಂದ

ಬೇರ್ಪಟ್ಟೆ, ದುಃಖವಿಲ್ಲ

ಕಳಚಿಕೊಂಡೇಬಿಟ್ಟೆ,  ಭಯವಿಲ್ಲ

ಬೀಳುತ್ತಿದ್ದೀನಿ

ಹಗುರವಾಗಿ, ತೇಲುತ್ತಾ

ಹೊಸ ಗಾಳಿಯಲ್ಲಿ

ಸ್ವತಂತ್ರವಾಗಿ, ಗೂಡ

ತೊರೆದು ಹಾರಿಹೋದ

ಹಕ್ಕಿಯಂತೆ, ಹಾರುತ್ತಿದ್ದೀನಿ

ಗೊತ್ತಿದೆ, ಹೊಸ ಗೂಡ

ಕಟ್ಟಲಾರೆ, ನನ್ನದೇ ಮನೆಯ

ಕನಸಿಲ್ಲ, ಈ ಕ್ಷಣ ಸಾಕು

ಅಲೆ ಅಲೆಯಾಗಿ ತೇಲಿ

ಬಿದ್ದು ನೆಲ ಸೇರಿ

ಮಣ್ಣ ಕೈ ಬೆಸೆಯುವೆ,

ಆ ಎರೆಹುಳುವಿನ

ಸಂಗಾತಿಯಾಗಿ ಚಿರವಾಗುವೆ

ಎಲೆಯಾಗುವೆ ಮತ್ತೆ ಮತ್ತೆ.

unnamed-1 unnamed-2 unnamed-3 unnamed-4

‍ಲೇಖಕರು Admin

1 November, 2016

4 Comments

  1. S.p.vijaya Lakshmi

    Beautiful kavithe matthu chitragalu ….

  2. Kusumapatel

    Tumbaa chennagide.

  3. Giridhar Hampapur

    ಹಣ್ನಲೆ ಮಣ್ನಲಿ
    ಬಿದ್ದು
    ನೆಲದ ಹಾಸಿಗೆಯ
    ಹೊದ್ದು
    ಮತ್ತೆ ಬರುವೆ
    Bye ಎಂದು ಹೇಳುವ ಸಮಯವೇ ಶರದ್ರುತು!

    ಕವನ ಚೆನ್ನಾಗಿ ಮೂಡಿ ಬಂದಿದೆ.
    ಗಿರಿಧರ್ ಹಂಪಾಪುರ

  4. Sarojini Padasalagi

    ಎಷ್ಟು ಸುಂದರ ,ಸವಿಯಾದ ವರ್ಣನೆ !! ನಿಜಕ್ಕೂ ಹೇಳ್ತೀನಿ ವಿನತೆಯವರೇ ,ಹಕ್ಕಿ ಪಕ್ಕಿಯಾಗಿ ಸ್ವಚ್ಛಂದವಾಗಿ ಆ ಸುಂದರ ಎಲೆ ಎಲೆಯಲೂ ,ಕೊಂಬೆ ಕೊಂಬೆಯಲೂ ಹಾರಾಡುವಾಸೆ , ಅಷ್ಟು ಚಂದದ ಚಿತ್ತಾರ. ಮತ್ತೆ ಎಲೆಯಾಗಿ ಬರುವಾಸೆ ಉದುರುವ ಹಣ್ಣೆಲೆಗೂ ! ಇದಲ್ಲವೇ ಜೀವನವನ್ನ ಸವಿಯುವ ಅದಮ್ಯ ಆಸೆ !.ಚಂದದ ಕವನ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading