ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು… ಉಷಾ ಕಟ್ಟೇಮನೆ

ಬದುಕ ಪಯಣಕ್ಕೆ ಯಾವುದು ದ್ರುವತಾರೆ?..

ಉಷಾ ಕಟ್ಟೇಮನೆ

ಮಾತು ಭಾರವಾದ ಹೊತ್ತು..

ಮಂಡಿಯೂರಿ ಕುಳಿತಿದ್ದೇನೆ, ಮುಖಕ್ಕೆ ಅಂಗೈಯ ರಕ್ಷಣೆ;

ಎಷ್ಟೊಂದು ಮಾತಾಡಿಬಿಟ್ಟೆ!

ನಾಚಿಕೆಯಾಗುತ್ತಿದೆ;ಎಲ್ಲವನ್ನೂ ಮುಗಿಸಬೇಕಾಗಿದೆ.

ಇನ್ನು ಹೊರಡುವ ಸಮಯ.

ಅತೃಪ್ತತೆಯ ವಿಷಾಧಯೋಗದ ಚಲನೆ.

ಅನಂತ ಆಕಾಶದೆಡೆಗೆ ಎರಡೂ ಕೈಚಾಚಿ ನಿಂತಿದ್ದೆ;

ಒಂದೇ ಒಂದು ಮಿಂಚು. ಕಂಡ ಮುಖ ಶಾಶ್ವತ;

ಒಪ್ಪಿ, ಹಂಬಲಿಸಿ, ಅಪ್ಪಿ,ಒಳಗೆಲ್ಲಾ ಜೀಕಾಡಿ..

ಕಣಕಣದಲ್ಲೂ ಮಿಂಚು ಸಂಚಾಗಿ ಸಂಚರಿಸಿ

ನನ್ನದೆನ್ನುವ ಲಯದಲಿ ತಾಳ ತಪ್ಪಿದ ಭಾವ.

ಭೂಮಿಯ ಪರಿಭ್ರಮಣಕ್ಕೆ ಬೆಳಕಿನೊಡೆಯನದೇ ಕುಮ್ಮಕ್ಕು;

ಆಸೆಬುರುಕಳು ನಾನು, ಬೀಳಲೇ ಬೇಕಾಗಿತ್ತು

ಬಿದ್ದೆ; ಇನ್ನೆಂದೂ ಏಳಲಾರದಂತೆ.

ಕಳೆದುಕೊಂಡದ್ದಕ್ಕೆ ಋಣಭಾರದ ಸಂಕಟವಿಲ್ಲ

ನನ್ನ ತಲೆಯಡಿಗೆ ನನ್ನದೇ ಕೈದಿಂಬು.

ಸ್ವರ್ಗದಲ್ಲಿ ದೇವಗಂಗೆ, ನರಕದಲಿ ಅವಳೇ ವೈತರಣಿ;

ಮುಖವಾಡಗಳ ಸಂತೆಯಲಿ ಸಹಸ್ರಾರು ಜಿಹ್ವೆಗಳು

ವಾಸುಕಿಯ ವಜ್ರಕ್ಕೆ ಕಾರ್ಕೋಟಕ ವಿಷದ ಬೇಲಿ.

ಪುಣ್ಯ ಕೈಚಾಚಲಿಲ್ಲ, ಬಂಧ ಬೆಸುಗೆಯಾಗಲಿಲ್ಲ.

ಪೂರ್ಣಾಹುತಿಯಲ್ಲಿ ಅವತರಿಸಿತು ಆ ವಿಶ್ವಾಮಿತ್ರ ಹಸ್ತ!

ಬದುಕ ಪಯಣಕ್ಕೆ ಯಾವುದು ದ್ರುವತಾರೆ?

ಕತ್ತಲಲ್ಲಿ ಕಾಡಹಾದಿ; ನಡೆದುಬಿಡುತ್ತೇನೆ.

ಹೆಚ್ಚು ದೂರವಿಲ್ಲ; ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು.

ಒಂಟಿಪಯಣದಲ್ಲಿ ಶಬ್ದ ಸಂತೆಯಿಲ್ಲ;ಕಣ್ಣೀರಿಗೆ ಕಳವಳವಿಲ್ಲ.

ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ.

’ನಿನಗೆ ನೀನೆ ಗುರು’ ಕವಿವಾಣಿ ನಂಬಿದ್ದೇನೆ; ಅದೀಗ ನನ್ನದು..

‍ಲೇಖಕರು G

29 September, 2012

5 Comments

  1. mmshaik

    chennaagide…..havdu ninage neene guru…!!

  2. Manjula Narayanarao

    kavana tumba chennagide

  3. D.RAVI VARMA

    ultimate….odaladada bhavanegalu..manamuttuva,manabechhisuva,,saalugalu….

  4. D.RAVI VARMA

    ಬದುಕ ಪಯಣಕ್ಕೆ ಯಾವುದು ದ್ರುವತಾರೆ?
    ಕತ್ತಲಲ್ಲಿ ಕಾಡಹಾದಿ; ನಡೆದುಬಿಡುತ್ತೇನೆ.
    ಹೆಚ್ಚು ದೂರವಿಲ್ಲ; ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು.
    ಒಂಟಿಪಯಣದಲ್ಲಿ ಶಬ್ದ ಸಂತೆಯಿಲ್ಲ;ಕಣ್ಣೀರಿಗೆ ಕಳವಳವಿಲ್ಲ.
    ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ.
    ’ನಿನಗೆ ನೀನೆ ಗುರು’ ಕವಿವಾಣಿ ನಂಬಿದ್ದೇನೆ; ಅದೀಗ ನನ್ನದು..

    ii saalugalu ultimate………

  5. ರವಿ ಮೂರ್ನಾಡು, ಕ್ಯಾಮರೂನ್

    ಈ ಕವಿತೆಯಲ್ಲಿ ಒಂದು ವಿಶೇಷತೆಯನ್ನು ಗಮನಿಸಿದ್ದೇನೆ.ತನ್ನನ್ನೇ ತಾನು ಕಸಿವಿಸಿಗೊಳಿಸಿಕೊಂಡ ಎಷ್ಟೊಂದು ಮಾತಾಡಿಬಿಟ್ಟೆ ಅನ್ನುವ ತಣ್ಣಗಿನ ಭಾವ. ಮೇಲ್ಮಟ್ಟದಲ್ಲಿಯೂ ಅದೇ ರೀತಿ ಕೆಳ ಮಟ್ಟದಲ್ಲಿಯೂ ನಿಂತು ಮೇಲಕ್ಕೇರಿಸಿಕೊಳ್ಳುವ ಸುಂದರ ಅಭಿವ್ಯಕ್ತಿ ಈ ಕವಿತೆಯಲ್ಲಿ ಗೋಚರಿಸಿತು. ಕವಿತೆ ಚೆನ್ನಾಗಿದೆ. ಇದು ನಿಮ್ಮ ಕೆಲವೇ ಕೆಲವುಗಳಲ್ಲಿರುವ ಕಾವ್ಯ ಪ್ರಯತ್ನ ಅಂತ ಭಾವಿಸುತ್ತೇನೆ. ಹಾಗಾಗಿ ಪ್ರತಿಕ್ರಿಯಿಸದಿದ್ದರೆ ಮನ್ನಸ್ಸು ನಿಲ್ಲಲಾಗದು ಅನ್ನಿಸಿತು.ಅಭಿನಂದನೆಗಳು ಅಕ್ಕ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading