ಎಚ್ ಎನ್ ಆರತಿಗೆ ಪ್ರತಿಷ್ಠಿತ ಕಸಾಪ ಪ್ರಶಸ್ತಿ

ಖ್ಯಾತ ಲೇಖಕಿ, ಅನುವಾದಕಿ, ಮಾಧ್ಯಮ ತಜ್ಞೆ ಎಚ್ ಎನ್ ಆರತಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ ಪಂಕಜಶ್ರೀ ದತ್ತಿನಿಧಿ ಪ್ರಶಸ್ತಿ ಘೋಷಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಹಿರಿಯ ಕಾದಂಬರಿಕಾರ್ತಿ ಎ ಪಂಕಜಾ ಅವರು ಈ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.

ದೂರದರ್ಶನ ಕೇಂದ್ರದಲ್ಲಿ ಹಿರಿಯ ಕಾರ್ಯಕ್ರಮ ನಿರ್ಮಾಪಕರಾಗಿರುವ ಎಚ್ ಎನ್ ಆರತಿ ಅವರು ದೇಶ ವಿದೇಶಗಳ ಹಲವು ಪ್ರಶಸ್ತಿ ಹಾಗೂ ಫೆಲೋಶಿಪ್ ಗಳಿಗೆ ಪಾತ್ರರಾಗಿದ್ದಾರೆ.

‘ಸ್ಮೋಕಿಂಗ್ ಜೋನ್’ ಕವನ ಸಂಕಲನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದು ‘ಬಹುರೂಪಿ’ಯ ಪ್ರಕಟಣೆ- ಇಲ್ಲಿ ಕ್ಲಿಕ್ಕಿಸಿ

ಇವರ ‘ಓಕುಳಿ’ ‘ಬಾ ಹೇಳಿ ಕಳಿಸೋಣ ಹಗಲಿಗೆ’ ಕವನ ಸಂಕಲನಗಳು ಲೇಖಕಿಯರ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗೆ ಪಾತ್ರವಾಗಿದ್ದವು.

‘ಆಧ್ಯಾತ್ಮ ಶಿಖರ’ ಹಾಗೂ ‘ಪ್ರಣಯ ಶತಕ’ ಇವರ ಅನುವಾದಿತ ಕೃತಿಗಳು. ‘ಇದು ಪ್ರೇಮಮಲ್ತೆ’ ನಾಟಕ ಕೃತಿ. ಇವರ ‘ಬೆಟ್ಟದಡಿಯ ಬಿದಿರ ಹೂ’ ಪ್ರವಾಸ ಕಥನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

‍ಲೇಖಕರು avadhi

July 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಅಭಿನಂದನೆಗಳು ಆರತಿ, ಪ್ರಶಸ್ತಿಗಳು ನಿಮಗೆ ಹೊಸದಲ್ಲ. ಪ್ರತಿ ಹೊಸ ಪ್ರಶಸ್ತಿ ನಿಮಗೆ ಸಂದಾಯವಾದಾಗ ನಿಮ್ಮನ್ನು ‌ಓದುವವರಿಗೆ ಹೊಸ ಖುಷಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: