ಎಚ್ ಆರ್ ರಮೇಶ ಹೊಸ ಕವಿತೆ- ಸಾವಯವ

ಎಚ್ ಆರ್ ರಮೇಶ 

ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಸೂರ್ಯ 

ಸಾಯುತ್ತಿರುವುದನ್ನು ಸಾಯುತ್ತಿರುವ ಎಲ್ಲವೂ ನೋಡುತ್ತಿವೆ;

ಪುನರ್ಜನ್ಮವೆನ್ನುವುದು ಪುರಾಣದಲ್ಲಿಯೇ ಇರಲಿ,

ಇಲ್ಲಿ ಈಗ ಒಂದು ಪಕ್ಷಿ

ಹಣ್ಣನ್ನು ತಂದಿದೆ;

ಮತ್ತು ಗೂಡಿಗೆ ಹಾರುತ್ತಿದೆ,

ಇನ್ನೊಂದು ಹಣ್ಣು ಇಲ್ಲವೆಂಬಂತೆ ಇದೆ ಒಳಗೆ,

ಸಾವೆನ್ನುವುದು ಸಾವಯವ;

ಪ್ರತಿ ತಂತುವಿನಲ್ಲೂ,

ಪ್ರತಿ ಅಣುವಿನಲ್ಲೂ;

ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಅಂದರೆ: ಜೀವಂತವಾಗಿ

ಮತ್ತೆ ಪ್ರಜ್ಞೆ ಬರುವ ತನಕ ಸತ್ತು ಹಗೂರವಾಗುವುದು,

ಎಲ್ಲದರ ನಡುವೆ ಎಲ್ಲವ ಕಳೆದುಕೊಂಡು (ಇದು ಲೋಕದ ಮಾತು, ಕಳೆದು ಕೊಳ್ಳುವುದಕ್ಕೆ ನಮ್ಮದೇನಿದೆ),

ಆದರೂ, 

ಎಲ್ಲೆಲ್ಲಿಂದಲೋ ಬೆಳಕಿನ ಕೋಲುಗಳು ತೂರಿ ಬರುತ್ತವೆ, 

ಅಲ್ಲಿ,

ಅಣು ಕಣಗಳು ದೂರದ ನಕ್ಷತ್ರಗಳು;

ಒಂದೇ ಸಮ ಹೋಗುತ್ತಿವೆ, ಬರುತ್ತಿವೆ, ಏರುತ್ತಿವೆ, ಇಳಿಯುತ್ತಿವೆ,

ಸೃಷ್ಟಿ ಒಮ್ಮೊಮ್ಮೆ ಗುಟ್ಟು ಬಿಡುವುದು,

ಕನಸಲ್ಲಿ ಹಾಲುಗಲ್ಲದ ಕಂದ ನಕ್ಕಂತೆ;

ಆದರೆ-

ರಟ್ಟಾದ ಗುಟ್ಟು ಗುಟ್ಟಾಗಿರುವುದಿಲ್ಲ,

ಕಂದ ನಕ್ಕಿದ್ದು ಕನಸಿನಿಂದಾಗಿಯೇ,

ಗೊತ್ತಿಲ್ಲ.

‍ಲೇಖಕರು Avadhi

February 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: