ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’

ಪ್ರತೀ ವರ್ಷ ಅತ್ಯುತ್ತಮ ಪ್ರಕಾಶನಕ್ಕೆ ‘ಅಂಕಿತ’ ದತ್ತಿ ನಿಧಿ ಪ್ರಶಸ್ತಿ ಈ ಬಾರಿ ಹುಬ್ಬಳ್ಳಿಯ ‘ಸಾಹಿತ್ಯ ಪ್ರಕಾಶನ’ಕ್ಕೆ ಸಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಈ ಪ್ರಶಸ್ತಿ ನೀಡುತ್ತದೆ.

ಈ ಹಿನ್ನೆಲೆಯಲ್ಲಿ ಸಾಹಿತ್ಯ ಪ್ರಕಾಶನದ ಮಾಲೀಕರಾದ ಎಂ ಎ ಸುಬ್ರಮಣ್ಯ ಅವರನ್ನು ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.

ಸಾಹಿತ್ಯ ಪ್ರಕಾಶನಕ್ಕೆ ʼಅಂಕಿತ ಪುಸ್ತಕ ದತ್ತಿ ಪ್ರಶಸ್ತಿʼ, ಹೇಗನ್ನಿಸುತ್ತಿದೆ.
 ಯಾವುದೇ ಅರ್ಜಿ ಸಲ್ಲಿಸದೆ, ಲಾಭಿ ಮಾಡದೆ ಅವರಾಗಿಯೇ ಪ್ರಶಸ್ತಿ ನೀಡುತ್ತಿರುವುದು ಸಹಜವಾಗಿಯೇ ತುಂಬಾ ಖುಷಿಯಾಗುತ್ತೆ.

ಈ ಬಾರಿಯ ರಾಜ್ಯೋತ್ಸವಕ್ಕೆ ಸಾಹಿತ್ಯ ಪ್ರಕಾಶನದಿಂದ ಯಾವ ಯೋಜನೆ ಸಿದ್ದವಾಗಿದೆ?
 ಪ್ರತಿ ರಾಜ್ಯೋತ್ಸವಕ್ಕೂ ಪುಸ್ತಕಗಳಿಗೆ ರಿಯಾಯಿತಿ ನೀಡುತ್ತ ಬಂದಿದ್ದೇವೆ. ಅದು ಈ ವರ್ಷವೂ ಮುಂದುವರೆಯುತ್ತೆ.

ಸಾಹಿತ್ಯ ಪ್ರಕಾಶನದ ಮುಂದಿನ ಗುರಿ ಏನು ?
 ಸಾಹಿತ್ಯ ಪ್ರಕಾಶನ ಆರಂಭ ಮಾಡಿದಾಗಲೂ ಯಾವುದೇ ಗುರಿ ಇರಲಿಲ್ಲ. ಈಗಲೂ ಯಾವುದೇ ಗುರಿ ಇಟ್ಟುಕೊಂಡಿಲ್ಲ.

ಜನರು ಸಾಹಿತ್ಯ ಪ್ರಕಾಶನದಿಂದ ಪುಸ್ತಕಗಳನ್ನು ಏಕೆ ಕೊಂಡುಕೊಳ್ಳಬೇಕು?
 ಜನರು ಕೊಡುವ ಹಣಕ್ಕೆ ಮೌಲ್ಯ ಹೆಚ್ಚುತ್ತೆ, ಸಾಹಿತ್ಯ ಪ್ರಕಾಶನದಿಂದ ಯಾವುದೇ ಪುಸ್ತಕ ಕೊಂಡುಕೊಂಡರು ಜನರಲ್ಲಿ ಒಂದು ಸಂಸ್ಕಾರ ಬೆಳೆಯುತ್ತೆ ಅಂತಾ ನಾನು ನಂಬಿದ್ದೀನಿ.

ಸಾಹಿತ್ಯ ಪ್ರಕಾಶನ ಶುರು ಮಾಡಿದ ಉದ್ದೇಶವು ಈಡೇರಿದೆಯೇ?
 ಹೊಟ್ಟೆಪಾಡಿಗಾಗಿ ಸಾಹಿತ್ಯ ಪ್ರಕಾಶನವನ್ನ ಆರಂಭ ಮಾಡಿದ್ದೆ. ಉದ್ದೇಶ ಅಂತಾ ಏನೂ ಇಲ್ಲ.

ಪ್ರಕಾಶನ ಕ್ಷೇತ್ರಕ್ಕೆ ನೀವು ಬಂದದ್ದು ಹೇಗೆ ?
 ಸಾಹಿತ್ಯ ಭಂಡಾರದ ಹಿನ್ನೆಲೆ ಇದ್ದ ಕಾರಣ ಹೊಸದಾಗಿ ಏನಾದರು ಮಾಡಬೇಕು ಎನ್ನುವ ಕಾರಣಕ್ಕೆ ಪ್ರಕಾಶನ ಕ್ಷೇತ್ರಕ್ಕೆ ಕಾಲಿಟ್ಟೆ.

ನಿಮ್ಮ ಹಿರಿಯರ ಹಿರಿಮೆಯನ್ನು ಹೇಗೆ ಮುಂದುವರೆಸಿದ್ದೀರಿ ?
 ನನ್ನ ಅಪ್ಪ, ದೊಡ್ಡಪ್ಪರಿಂದ ಪ್ರಕಾಶನ ವೃತ್ತಿಯನ್ನು ಕಲಿತದ್ದು. ನಮ್ಮ ಹಿರಿಯರ ಹೆಸರಲ್ಲಿ ಪ್ರಕಾಶಕರನ್ನು ಗುರುತಿಸಿ ಗೌರವ ಸಲ್ಲಿಸುತ್ತ ಬಂದಿದ್ದೇನೆ.

‍ಲೇಖಕರು Avadhi

October 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: