ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಸಿರ ಗೂಡಿಗೆ ಒಂದು ಬೊಗಸೆ ಗಾಳಿಯಷ್ಟೇ ಬೇಕಿತ್ತು..

ಒಂದು ಬೊಗಸೆ ಗಾಳಿ..

– ಟಿ ಕೆ ದಯಾನ೦ದ

ಬೇಡವಾಗಿತ್ತು ಗೆಳೆಯ, ಬದುಕುವ ಆಸೆ ಪೊರೆಯುವ

ಯಾವ ಹಕ್ಕನ್ನೂ ಇನ್ನೂ ನಮಗೆ ಕೊಡಲಾಗಿಲ್ಲ,

ಆದರೂ ಆಸೆ ಪಡುವುದು ನಮ್ಮಿಂದೇಕೆ ನಿಲ್ಲುತ್ತಿಲ್ಲ?

ನಾವು ಪ್ರಶ್ನೆ ಕೇಳಲು ಹುಟ್ಟಿಲ್ಲ ಗೆಳೆಯ..

ಯಾರದ್ದೋ ಖುಷಿಗೆ ದೇಹ ತೇಯಲೆಂದು ಹುಟ್ಟಿದವರು.

 

ಬೇಡವಾಗಿತ್ತು ಗೆಳೆಯ, ದುಡಿದು ತಿನ್ನುವ ಉಮ್ಮೇದಿ ನಮಗೆ,

ನೆಲ್ಲೂರಿನ ಹೊಲಗಳಲ್ಲಿ 30 ರುಪಾಯಿಗೆ ಕೂಲಿಗೆ

ನಮ್ಮ ಬದುಕನ್ನು ಅಡಮಾನ ಇರಿಸಿಕೊಳ್ಳಲಾಗಿದೆ..

ಅವರ ಒತ್ತೆಯಾಳಾಗಲೆಂದೇ ನೆಲಕ್ಕೆ ಬಿದ್ದವರು ನಾವು.

 

ಬೇಡವಾಗಿತ್ತು ಗೆಳೆಯ, ಊರುಬಿಟ್ಟು ಕೂಲಿಗೆ ನಡೆಯುವ ಸಾಹಸ

ಕಣ್ಣುಗಳು ಇರಬೇಕಿದ್ದ ಜಾಗದಲ್ಲಿ ಕೊಡಲಿ ಹೊತ್ತವರ ನಡುವೆ

ನಮ್ಮ ಅನ್ನ ಹುಡುಕುವ ಸಾಹಸಕ್ಕೆ ನಗೆಪಾಟಲಿನ ಉತ್ತರ,

ನಮ್ಮ ಚರ್ಮಗಳು ಅವರ ಮೆಟ್ಟುಗಳಾಗಿ ಯಾವ ಕಾಲವೋ ಆಗಿದೆ.

 

ಬೇಡವಾಗಿತ್ತು ಗೆಳೆಯ, ನಮಗೆ ಉಸಿರಾಡುವ ಉಸಾಬರಿ,

ಅಸಲಿಗೆ ಆ ಹಕ್ಕನ್ನ ನಮಗೆ ಕೊಟ್ಟಿದ್ದಾದರೂ ಯಾವಾಗ?

ಉಸಿರ ಗೂಡಿಗೆ ಒಂದು ಬೊಗಸೆ ಗಾಳಿಯಷ್ಟೇ ಬೇಕಿತ್ತು..

ನಮ್ಮ ತಿತ್ತಿಯನ್ನೇ ಕಿತ್ತು ತಿಂದವರ ಬಳಿಗೆ ಬೊಗಸೆಗಾಳಿಗೆ ತಾವೆಲ್ಲಿ?

 

ಇಡು ಆ ಬಿದಿರುಕೋಲುಗಳ ಮಲದಗುಂಡಿಯ ಪಕ್ಕಕ್ಕೆ,

ಅಗ್ಗದ್ದೊಂದು ತುಂಡು ಬೀಡಿಯನ್ನಾದರೂ ಸೇದೋಣ,

ಒಳಗಿರುವುದು ಇಬ್ಬರ ಜೀವವನ್ನೂ ಕೊಯ್ಯುವ ಗಾಳಿ,

ಮೊದಲು ನನ್ನದು, ಆಮೇಲೆ ನಿನ್ನದು.. ಇಳಿಯಲಿ ದೇಹಗಳು.

 

ತಲೆಯೆತ್ತಬೇಡ ಗುಂಡಿಯೊಳಗಿಂದ, ಬೂಟುಗಾಲುಗಳಿವೆ ಮೇಲೆ,

ಅಂಗೈಯನ್ನೂ ಹೊರಚಾಚಬೇಡ, ಹೊಸಕುತ್ತವೆ ಬೂಟುಗಳು..

ಇಗೋ ಗುಂಡಿಯೊಳಗಿನ ವಿಷದಗಾಳಿ, ನೀನು ಕುಡಿದಾದ ಮೇಲೆ

ಒಂದು ಬೊಗಸೆ ಗಾಳಿಯನ್ನು ನನ್ನ ಗಂಟಲಿಗೂ ಇಷ್ಟು ಸುರಿದುಬಿಡು.

 

]]>

‍ಲೇಖಕರು G

28 July, 2012

5 Comments

  1. kssridar

    super sir………

  2. shwetha

    good one.. nimma sathya shodhana kaaryadhindha badavarige nyaaya sigali..

  3. D.RAVI VARMA

    ತಲೆಯೆತ್ತಬೇಡ ಗುಂಡಿಯೊಳಗಿಂದ, ಬೂಟುಗಾಲುಗಳಿವೆ ಮೇಲೆ,
    ಅಂಗೈಯನ್ನೂ ಹೊರಚಾಚಬೇಡ, ಹೊಸಕುತ್ತವೆ ಬೂಟುಗಳು..
    ಇಗೋ ಗುಂಡಿಯೊಳಗಿನ ವಿಷದಗಾಳಿ, ನೀನು ಕುಡಿದಾದ ಮೇಲೆ
    ಒಂದು ಬೊಗಸೆ ಗಾಳಿಯನ್ನು ನನ್ನ ಗಂಟಲಿಗೂ ಇಷ್ಟು ಸುರಿದುಬಿಡು…..
    ಸರ್, ನಿಮ್ಮ ಒಳಗಿನ ಅಂತರಂಗದ ಹಾಡು ನನ್ನ ಮೈ ,ಮನಸುಗಳ ಕಾವೇರಿಸಿತು .
    ಅಸ್ತೆ ಅಲ್ಲ ತೆಲುಗಿನ ಬಹುದೊಡ್ಡ ಕವಿ ಶ್ರೀ,ಶ್ರೀ ಅವರ ಹಾಡನ್ನು ನೆನಪಿಗೆ ತಂತು …
    “ಮನದಿ ಒಕ ಬ್ರತುಕೆನಾ ,kukkalavale pakkalavale ,ಸಂದುಲಲೋ,ಗೊಂದುಲಲೋ, nakkalavale ,
    ಪತಿತುಲಾರ,ದ್ರಸ್ಟುಲಾರ ಧಘಪಡಿನ ತಮ್ಮುಲಾರ ಎಡವಕಂಡಿ,ಎಡವಕಂಡಿ ಎಡವಕಂಡಿ …..
    ಇದರೊಂದಿಗೆ ಅವರು ನಮಗೊಂದು ಎಚ್ಚರಿಕೆ ಕರೆ ಹೀಗೆ ನೀಡುತ್ತಾರೆ ….
    “ಯವರೊ ವಸ್ತಾರನಿ,ಏದೋ ಚೆಸ್ತಾರನಿ,ಎದುರು ಚೂಸಿ ಮೊಸಪೋಕುಮಾ …
    ನಿಜಂ ಮರೆಚಿ ನಿದ್ರಪೋಕುಮಾ ” ,
    ಯಾರೋ ಬರುತ್ತಾರೆಂದು, ಏನೋ ಮಾಡುತ್ತಾರೆಂದು ಎದುರು ನೋಡಿ ಮೊಸಹೊಗಬೇಡ ,
    ನಿಜವನ್ನು ಮರೆತು ನಿದ್ರೆ ಹೋಗಬೇಡಾ …..
    ರವಿ ವರ್ಮ ಹೊಸಪೇಟೆ

  4. D.RAVI VARMA

    ಅದು kukkalavale , pandulavale ಸಂದುಲಲೋ ಗೊಂದುಲಲೋ, nakkalavale … ಆಗಬೇಕಿತ್ತು ,

  5. punyavathi

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading